AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮುಗಳಖೋಡಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಸೇವಾಕಾರ್ಯ ನಮ್ಮೆಲ್ಲರಿಗೂ ಸ್ಫೂರ್ತಿ #avintvcom

1 min read
Featured Video Play Icon

ಮುಗಳಖೋಡ

ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಸೇವಾಕಾರ್ಯ ನಮ್ಮೆಲ್ಲರಿಗೂ ಸ್ಫೂರ್ತಿ

ಇಂದು ರಾಯಬಾಗ ತಾಲೂಕಿನ ಮುಗಳಖೋಡದ ಯಲ್ಲಾಲಿಂಗೆಶ್ವರ್ ಮಠಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ಪರಮಪೂಜ್ಯ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುಕ್ಷೇತ್ರ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ 35 ನೇ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಕರುನಾಡಿನ ಶ್ರೇಷ್ಠ ಸಾಧು ಸಂತರು ಹಾಗೂ ತ್ರಿಕಾಲ ಜ್ಞಾನಿಗಳಾದ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಅಸಂಖ್ಯಾತ ಭಕ್ತರ ಮನದಲ್ಲಿ ಸದಾ ಬೆಳಗುವ ಜ್ಯೋತಿ. ಹಸಿದ ಭಕ್ತರಿಗೆ ಅನ್ನಪೂರ್ಣೇಶ್ವರಿಯಾಗಿ, ವಿದ್ಯೆಯನ್ನು ಬಯಸಿ ಬಂದವರಿಗೆ ಸರಸ್ವತಿಯಾಗಿ, ನೊಂದು-ಬೆಂದು ಬಂದವರಿಗೆ ತಾಯಿಯಾಗಿ ಅನುಗ್ರಹಿಸಿದ ಯಲ್ಲಾಲಿಂಗ ಮಹಾಪ್ರಭುಗಳ ಪರಂಪರೆಯಲ್ಲಿ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ನಡೆಯುತ್ತಿದ್ದು, ಇಂತಹ ಸ್ವಾಮೀಜಿಗಳು ನಮ್ಮ ಜಿಲ್ಲೆಯಲ್ಲಿರುವುದು ನಮ್ಮ ಭಾಗ್ಯ ಇಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಉಪಸಭಾಪತಿಗಳಾದ ಶ್ರೀ ಆನಂದ ಮಾಮನಿ, ಶಾಸಕರಾದ ಶ್ರೀ ಪಿ. ರಾಜೀವ್, ಶ್ರೀ ಬಸನಗೌಡ ದಡ್ಡಲ್, ಗಣ್ಯರು, ಜನಪ್ರತಿನಿಧಿಗಳು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

श्री यल्लालिंग महाप्रभूंची सेवाकार्य आपल्या सर्वांसाठी प्रेरणादायक आहे

आज रायबाग तालुक्यातील मुगळखोड येथे यल्लालिंगेश्वर मठाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट देऊन,परमपूज्य डॉ. मुरुघराजेंद्र महास्वमीजींचा आशीर्वाद घेतल्या नंतर, सुक्षेत्र सद्गुरू श्री यल्लालिंग महास्वमीजींचा 35 व्या पुण्याराधन कार्यक्रमात भाग घेऊन संबोधित केले.

लोककल्याणासाठी श्रम करणाऱ्या महान साधू संत आणि त्रिकाल ज्ञानी श्री यल्लालिंग महाप्रभू हे अनेक भक्तांच्या मनात नेहमी प्रकाशमय ज्योती आहेत.भुकेल्या भक्तांसाठी अन्नपूर्णेश्वरी, विद्या शोधणार्‍यांसाठी सरस्वती, दुःखी होऊन  येणार्‍यांना आई म्हणून अनुग्रह केलेल्या यल्लालिंग महाप्रभुंच्या परंपरेत मुरुघराजेंद्र महास्वामीजी चालत असून, असले स्वामीजी आपल्या जिल्ह्यात आहेत हे आमचे भाग्य आहे असे सांगीतले.

 

यावेळी विधानसभेचे उपसभापती श्री आनंद मामनी, आमदार श्री पी राजीव, श्री बसनगौडा दड्डल, मान्यवर, लोकप्रतिनिधी, भक्त व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author