ನೈಸರ್ಗಿಕ ಕೃಷಿಕರಾದ ಚಂದ್ರಶೇಖರ್ ನಾರಣಾಪುರ ಅಭಿಮತ #avintvcom
1 min read
ನೈಸರ್ಗಿಕ ಕೃಷಿಯಿಂದ ಕೃಷಿ ಕ್ಷೇತ್ರದ ಪುನಶ್ಚೇತನ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಓದು ಕಾರ್ಯಕ್ರಮ
ನೈಸರ್ಗಿಕ ಕೃಷಿಕರಾದ ಚಂದ್ರಶೇಖರ್ ನಾರಣಾಪುರ ಅಭಿಮತ
ನೈಸರ್ಗಿಕ ಕೃಷಿಯಿಂದ ಕೃಷಿ ಕ್ಷೇತ್ರದ ಪುನಶ್ಚೇತನ ಸಾಧ್ಯವಾಗುತ್ತದೆ ಎಂದು ನೈಸರ್ಗಿಕ ಕೃಷಿಕರಾದ ಚಂದ್ರಶೇಖರ್ ನಾರಣಾಪುರ ಹೇಳಿದರು.
ಕೆ.ಪಿ.ಪೂರ್ಣಚಂದ್ರೆ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಸಹಜ ಕೃಷಿ ಕೃತಿಯ ಬಗ್ಗೆ ಅವರು ಮಾತನಾಡಿದರು.
ನೆಲದ ಉಳುಮೆ ಇಲ್ಲದೆ, ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ, ಕ್ರಿಮಿನಾಶಕಗಳ ಸಿಂಪಡಣೆ ಇಲ್ಲದೆ, ಕಳೆಗಳ ನಿರ್ಮೂಲನೆ ಇಲ್ಲದೆ ಇರುವುದು ಪುಕೋಕ ಅವರ ನೈಸರ್ಗಿಕ ಕೃಷಿ ನಾಲ್ಕು ತತ್ವಗಳಾಗಿವೆ. ಪುಕೋಕ ಅವರ ಕೃಷಿಚಿಂತನೆಗಳು ಇಂದಿಗೂ ಪ್ರಸ್ತುತ ಎಂಬುದನ್ನು ತೇಜಸ್ವಿ ಅವರು ಸಹಜ ಕೃಷಿ ಕೃತಿಯಲ್ಲಿ ವಿವರಿಸಿದ್ದಾರೆ ಎಂದರು.
ನೈಸರ್ಗಿಕ ಕೃಷಿಯಲ್ಲಿ ಯಾರನ್ನು ಅವಲಂಬಿಸದೇ ಸ್ವಯಂ ಭೂಮಿಯನ್ನು ಫಲವತ್ತತೆ ಮಾಡುವ ಕ್ರಿಯೆ. ನೈಸರ್ಗಿಕ ಕೃಷಿ ಸದೃಡವಾದ ಭೂಮಿಯ ಸುಸ್ಥಿರತೆಯನ್ನು ಬೆಳೆಸುವ ರೈತರ ಬದುಕನ್ನು ಸುಸ್ಥಿತಗೊಳಿಸುವಂತಹ ಕೃಷಿಪದ್ದತಿಯಾಗಿದೆ. ತೇಜಸ್ವಿ ಅವರು ಸಹಜ ಕೃಷಿ ಕೃತಿಯಲ್ಲಿ ಆಡಳಿತಾತ್ಮಕವಾದ ವಿಡಂಭಣೆಗಳು, ರೈತರ ದಾಸ್ಯಸ್ಥಿತಿ, ರಾಸಾಯನಿಕ ಕೃಷಿಯಿಂದ ಆದಂತಹ ಅನಾಹುತಗಳನ್ನು ಸವಿಸ್ಥಾರವಾಗಿ ವಿವರಿಸಿದ್ದಾರೆ ಎಂದರು.
ಕಾರ್ಯಕ್ರಮದ ಸಂಯೋಜನೆಯ ತಂಡದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಪ್ರಜ್ವಲ್, ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.