AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರ್ ಕೋಟ್ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಸರಿಯಾಗಿ ರಾತ್ರಿ #avintvcom

1 min read
Featured Video Play Icon

https://youtu.be/6eToekHlWvk

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರ್ ಕೋಟ್ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಸರಿಯಾಗಿ ರಾತ್ರಿ 11ಗಂಟೆ 50 ನಿಮಿಷಕ್ಕೆ ಬೆಂಕಿ ಹಚ್ಚಿದ ಬಿಜೆಪಿ ನಾಯಕರು.

ದಿನಾಂಕ 6/02/2021 ಒಂದರಂದು ಕಾಂಗ್ರೆಸ್  ಮೆದಕ್ ಗ್ರಾಮ ಪಂಚಾಯತಿಯನ್ನು ಕೈವಶ ಮಾಡಿಕೊಂಡಿರುವ ಸುದ್ದಿ ಎಲ್ಲರಿಗೂ ಗೊತ್ತಿರುವುದೇ ಈ ಕಾರಣವಾಗಿ ಬಿಜೆಪಿ ನಾಯಕರು ಮೆದಕ್ ಗ್ರಾಮ ಪಂಚಾಯಿತಿ ನಮ್ಮ ಕೈತಪ್ಪಿ ಹೋಯಿತು ಎಂದು ಕಕ್ಷೆಯಿಂದ ಈ ಕೆಲಸವನ್ನು ಮಾಡಿದರೆ ಎಂದು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ ಆದರೆ ಇಲ್ಲಿನ ಜನರು ಮತ್ತು ಬಿಜೆಪಿ ಕಾರ್ಯಕರ್ತರು ಯಾರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ ಏಕೆಂದರೆ ಅವರಿಗೆ ಪೋಲಿಸ್ ಬೆಂಬಲ ಮತ್ತು ಎಂಎಲ್ಎ ಅವರ ಬೆಂಬಲ ಇದ್ದುದ್ದರಿಂದ ಈ ಕೆಲಸವನ್ನು ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಹಿಂದೆ ಒಂದು ದಿನಪತ್ರಿಕೆಯಲ್ಲಿ ಬರೆದಿರುವಂತೆ ಬಿಜೆಪಿ ಶಾಸಕರಾದ ಶ್ರೀ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಶಾಸಕರಾಗಿ ಕೆಲಸ ಮಾಡಲು ಅರ್ಹರಲ್ಲ ಎಂದು ಕೆಲವು ಸಾಮಾಜಿಕ ಜಾಲತಾಣ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆ ಸಹ ಹೇಳಿಕೆ ನೀಡಿತು ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಈಶಾನ್ಯ ಕರ್ನಾಟಕ ಸಂಸ್ಥೆಯ ಅಧ್ಯಕ್ಷರು ಆಗಿ ಕೂಡ ಆಯ್ಕೆಯಾಗಿದ್ದಾರೆ ಈ ಒಂದು ಸ್ಥಾನವನ್ನು ಕೂಡ ಅವರು ಲಂಚ ಕೊಟ್ಟು ತೆಗೆದುಕೊಂಡಿದ್ದಾರೆ ಎಂದು ಕೆಲವೊಂದು ಜಾಲತಾಣಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಬಂದಿದ್ದು ನಿಜ.

ಇದು ಹೀಗಿದ್ದಾಗ ಸೇಡಂ ತಾಲೂಕ ದಲ್ಲಿ ಹಲವಾರು ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಕೈ ವಶವಾಗಿದ್ದು ಎಲ್ಲರಿಗೂ ತಿಳಿದಿದೆ ಆದರೆ ಈ ಒಂದು ನೋವನ್ನು ಮನಸ್ಸಲ್ಲಿಟ್ಟುಕೊಂಡು ಸಿಲಾರ್ ಕೋಟ್ ಗ್ರಾಮದ ಬಿಜೆಪಿ ನಾಯಕರಾದ ಡಾಕ್ಟರ್ ಮಧುಸೂದನ ಪಾಟೀಲ್ ಮತ್ತು ನಾಗೇಂದ್ರಪ್ಪ ಸಾಹುಕಾರ್ ಇವರುಗಳು ಬಿಜೆಪಿ ಕಾರ್ಯಕರ್ತರಿಗೆ ಚೆಂಚಲ ಎಬ್ಬಿಸಿ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಬಣ್ಣಪ್ಪಚಾಟ್ಲ ಇವರ ಗುಡಿಸಲಿಗೆ ಬೆಂಕಿ ಹಚ್ಚುವಂತೆ ಹೇಳಿಕೊಟ್ಟರು ಆದರೆ ದೇವರ ಕೃಪೆಯಿಂದ ಅವರು ಗುಡಿಸಿಲಲ್ಲಿ ಇರಲಿಲ್ಲ ವಿಷಯವನ್ನು ತಿಲಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಸೇರಿ ಬೆಂಕಿಗೆ ನೀರು ಹಾಕಿದ್ದಾರೆ ಇಲ್ಲಿರುವ ಬಿಜೆಪಿ ಶಾಸಕರ ಬೆಂಬಲ ಮತ್ತು ಅವರಿಗೆ ಸಹಕಾರ ಮಾಡುತ್ತಿರುವ ಮುಧೋಳ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳು ಯಾರು ಕೂಡ ಇದರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆಂದರೆ ಇದಕ್ಕೆ ಮೊದಲು ಎಷ್ಟು ಅನ್ಯಾಯಗಳು ಈ ಊರಲ್ಲಿ ನಡೆದಿವೆ ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಇಲ್ಲಿನ ಪೊಲೀಸರು ಮತ್ತು ಶಾಸಕರು ಅವರ ಕಾರ್ಯಕರ್ತರು ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಭೀಮರೆಡ್ಡಿ ಮತ್ತು ಪ್ರಕಾಶ್ ಕಲಾಲ್ ಇವರು ಮನವಿ ಮಾಡಿಕೊಂಡಿದ್ದಾರೆ ಈ ವಿಷಯವನ್ನು ಹೀಗೆ ಬಿಟ್ಟರೆ ಇವರು ಇನ್ನು ಮುಂದೆ ಎಷ್ಟು ಅನ್ಯಾಯಗಳು ಮಾಡುತ್ತಾರೋ ಗೊತ್ತಿಲ್ಲ ಎಂದು ಕೂಡ ವ್ಯಕ್ತಪಡಿಸಿದ್ದಾರೆ ಪಾಟೀಲರು.

ನಿನ್ನೆತಾನೆ ನಮ್ಮಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಒಂದು ದಿನ ಕೂಡ ಹಾಗಿಲ್ಲ ನೀವು ಈ ತರ ಮಾಡುತ್ತಿದ್ದೀರಾ ನಿಮಗಿದು ಸರಿನಾ ಎಂದು ಪ್ರಶ್ನಿಸುತ್ತಿದ್ದರೆ ಕಾಂಗ್ರೆಸ್ ನಾಯಕರು ಮೇಲಿನ ಅಧಿಕಾರಿಗಳಿಗೆ ನಾವು ಮನವಿ ಮಾಡಿಕೊಳ್ಳುವುದು ಒಂದು ಇಂಥ ಕ್ರೂರತ್ವ ಇರುವ ಮನುಷ್ಯರ ಮೇಲೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ.

ಊರ ಮುಂದೆ ಇರುವ ಒಂದು ಗಡಿಸಲಿಗೆ ರಾತ್ರಿ 11ಗಂಟೆ 50 ನಿಮಿಷಕ್ಕೆ ಬೆಂಕಿ ಹಚ್ಚಿದರೆ ಒಂದು ಗುಡಿಸಲಿನ ಪರಿಸ್ಥಿತಿ ಹೀಗೆ ಮಾಡಿದ್ದರೆ ಇನ್ನೂ ಉಳಿದ ಜನರ ಪರಿಸ್ಥಿತಿ ಏನು ಇದರ ಹಿಂದೆ ಯಾರೇ ಇದ್ದರೂ ನಾವು ಸುಮ್ಮನೆ ಬಿಡಲ್ಲ ಎಂದು ಕಾಂಗ್ರೆಸ್ ನಾಯಕರಾದ ಶ್ರೀ ಪ್ರಕಾಶ್ ಕಲಾಲ್  ಶ್ರೀ ಭೀಮರೆಡ್ಡಿ ಪಾಟೀಲ್ ವ್ಯಕ್ತಪಡಿಸಿದ್ದಾರೆ.

ವರದಿ ವೆಂಕಟಪ್ಪ K ಸುಗ್ಗಾಲ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author