ಹಂಚಿನಾಳ ದೇಶದ ಸತ್ಪ್ರಜೆಗಳಿಗಾಗಿ ಜ್ಞಾನದೇಗುಲ ಲೋಕಾರ್ಪಣೆ #avintvcom
1 min read
ಹಂಚಿನಾಳ
ದೇಶದ ಸತ್ಪ್ರಜೆಗಳಿಗಾಗಿ ಜ್ಞಾನದೇಗುಲ ಲೋಕಾರ್ಪಣೆ
ನಿಪ್ಪಾಣಿ ಮತಕ್ಷೇತ್ರದ ಹಂಚಿನಾಳದಲ್ಲಿ, ಸಮಾಜ ಕಲ್ಯಾಣ ಇಲಾಖೆಯ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಕಟ್ಟಡವನ್ನು ಸಚಿವರಾದ ಶ್ರೀ ಬಿ. ಶ್ರೀರಾಮುಲು ಜಿ, ಅವರ ಜೊತೆಗೂಡಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಗೋಪೂಜೆ ಮಾಡಿ, ಶಾರದಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಕ್ಷೇತ್ರದ ಏಳಿಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ನಮ್ಮ ಅವಿರತ ಶ್ರಮಕ್ಕೆ ಸಂದ ಫಲ ಇದಾಗಿದೆ. ಗಡಿ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಶಾಲೆಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಗುಣಮಟ್ಟದ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ಪಡೆದು, ವಿದ್ಯಾರ್ಥಿನಿಯರು ಸಾಧನೆಯ ಹಾದಿಯತ್ತ ಹೆಜ್ಜೆ ಹಾಕಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ನಿಪ್ಪಾಣಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಶಾಲಾ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
हंचीनाळ
देशाच्या प्रजेसाठी ज्ञानमंदिर लोकार्पण
निपाणी मरदारसंघातील हंचीनाळ मध्ये समाज कल्याण विभागाकडून 17 कोटी रुपयांमध्ये बांधण्यात आलेल्या नवीन कित्तुर राणी चन्नम्मा निवासी शाळा इमारत माननीय मंत्री श्री बी.श्रीरामूलू जी यांच्यासमवेत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी गोमातेची पूजा करून, शारदा देवीचे पूजन करून उद्घाटन केले.
क्षेत्राच्या विकासासाठी प्रामाणिकप्रमाणे प्रयत्न करण्याचा आमच्या अविरत परिश्रमाचे हे फळ आहे. सीमा भागातील मुली शिक्षणापासून वंचित राहू नयेत या उद्देशाने ही शाळा बांधण्यात आली आहे. येथे गुणवत्तेव्यतिरिक्त, सुसंस्कृत शिक्षण प्राप्त करून,विद्यार्थ्यांनी साधनेच्या मार्गावर पाऊल टाका असे सांगीतले.
यावेळी हालसिद्दनाथ साखर कारखान्याचे अध्यक्ष,उपाध्यक्ष आणि संचालक,निपाणी नगरपालिकेचे अध्यक्ष, उपाध्यक्ष, समाज कल्याण विभागाचे अधिकारी, जनप्रतिनिधी, मान्यवर, शालेय कर्मचारी व पालक उपस्थित होते.