AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನಿವೇಶನ ಹಕ್ಕುಪತ್ರಗಳನ್ನು ವಿತರಿಸಿದರು. #avintvcom

1 min read

ಬೋರಗಾಂವ

“ಅಲೆಮಾರಿ ಜನಾಂಗದವರೂ ಸ್ವಾಭಿಮಾನಿಗಳಾಗಿ ಬದುಕಬೇಕು”

 

ನಿಪ್ಪಾಣಿಯ ಬೋರಗಾಂವದಲ್ಲಿ, ರಾಜ್ಯ ಸರ್ಕಾರದ ವತಿಯಿಂದ ಮಂಜೂರಾದ 2 ಎಕರೆ ಪ್ರದೇಶದಲ್ಲಿ ಅಲೆಮಾರಿ ಜನಾಂಗದ 39 ಕುಟುಂಬಗಳಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಜಿ ಅವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ನಿವೇಶನ ಹಕ್ಕುಪತ್ರಗಳನ್ನು ವಿತರಿಸಿದರು.

 

ಕ್ಷೇತ್ರದಲ್ಲಿರುವ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಿ, ಅವರು ನೆಮ್ಮದಿಯ ಜೀವನ ನಡೆಸಬೇಕು ಎಂಬುದು ನಮ್ಮ ಕನಾಸಗಿತ್ತು. ಇದೀಗ ನಮ್ಮ ಬಹುದಿನಗಳ ಕನಸು ಸಾಕಾರಗೊಂಡಿದ್ದು, ಅವರಿಗೆ ಮಂಜೂರಾಗಿರುವ ಜಾಗದಲ್ಲಿ ಶೀಘ್ರವಾಗಿ ಸೂರು ನಿರ್ಮಾಣ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ತಿನ್ನಲು ಆಹಾರ, ಉಡಲು ಬಟ್ಟೆ, ಬದುಕಲು ಸೂರು. ಈ ಮೂರು ಅವಶ್ಯಕತೆಗಳಿಂದ ಯಾರೂ ವಂಚಿತರಾಗಬಾರದು ಎಂಬುದು ನಮ್ಮ ಆಶಯ. ಅಲೆಮಾರಿ ಜನಾಂಗದವರು ಎಲ್ಲರಂತೆ ಬದುಕಲು ಅರ್ಹರು. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ನಮ್ಮ ಶ್ರಮ ಅವಿರತವಾಗಿರುತ್ತದೆ ಎಂದು ಹೇಳಿದರು.

बोरगांव

भटक्या  जाती-जमातीचे लोक स्वाभिमानाने जगावे.

निपाणीचे बोरगांव येथे राज्य सरकारच्या वतीने मंजूर झालेल्या 2 एकर जागेमध्ये भटक्या  जाती-जमातीच्या कुटुंबांना आदरणीय उपमुख्यमंत्री व परिवहन मंत्री श्री.लक्ष्मण सवदी जी यांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी जागेच्या हक्कपत्राचे वितरण केले.

क्षेत्रातील भटक्या जाती – जमातीच्या लोकांना घर उपलब्ध करून, त्यांनी आरामदायी जीवन जगण्याचे आपले स्वप्न होते.आमचे बऱ्याच दिवसाचे स्वप्न पुर्ण झाले असुन, त्यांना मंजूर झालेल्या जागेवर लवकरच घर बांधण्याची व्यवस्था केली जाईल. खाण्यासाठी अन्न, घालण्यासाठी कपडे आणि राहण्यासाठी घर.या तिन्ही आवश्यक गोष्टींपासून कोणीही वंचित राहू नये ही आमची इच्छा आहे.भटक्या जाती – जमातीचे लोक सर्वांप्रमाणेच जगण्यास पात्र आहेत.या माध्यमातून त्यांना समाजाच्या मुख्य प्रवाहात आणण्यासाठी आमचे श्रम अविरत असेल असे सांगीतले.

About Author