AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಜೇಸಿ ವತಿಯಿಂದ ಬೆಳಗ್ಗೆ 8 ಗಂಟೆಗೆ 72ನೇ ಗಣರಾಜ್ಯೋತ್ಸವದ ಧ್ವಜ ರೋಹಣ ಕಾರ್ಯಕ್ರಮ ನೇರವೇರಿತು. #avintvcom

1 min read
Featured Video Play Icon

 

ಮೂಡಿಗೆರೆ ಜೇಸಿ ವತಿಯಿಂದ ಬೆಳಗ್ಗೆ 8 ಗಂಟೆಗೆ 72ನೇ ಗಣರಾಜ್ಯೋತ್ಸವದ ಧ್ವಜ ರೋಹಣ ಕಾರ್ಯಕ್ರಮ ನೇರವೇರಿತು.

ಜೇಸಿ ಅಧ್ಯಕ್ಷರಾದ ಚಂದ್ರ ಶೇಖರ್ ಕುನ್ನಹಳ್ಳಿ ಯವರು ಧ್ವಜರೋಹಣ ಮಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೇಸಿ ಚಂದ್ರಶೇಖರ್ 72 ನೇ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸಿ ನಮ್ಮ ದೇಶಕ್ಕೆ ಸಂವಿಧಾನ ಜಾರಿಯಾದ ದಿನವಾದ 26 ಜನವರಿ 1950 ರಂದು ಭಾರತವು . ಗಣರಾಜ್ಯವಾದದ್ದು. ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ  ಡಾ.ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿ ಮಾಡಲಾಯಿತು. . ಆಗಮಿಸಿದ  ಎಲ್ಲಾ ಜೇಸಿ ಪೂರ್ವಾಧ್ಯಕ್ಷರಿಗೆ ಜೇಸಿ ಜೇಸಿರೆಟ್ ಸದಸ್ಯರಿಗೆ , ಮತ್ತು ಹೆಚ್ ಪಿ ಎಸ್. ಶಾಲಾ ಮುಖ್ಯೋಪಧ್ಯಾಯರು ಶಾಲಾ ಶಿಕ್ಷಕ ವೃಂದವರು,ಕಾರ್ಯ ಕ್ರಮಕ್ಕೆ  ಆಗಮಿಸಿದವರಿಗೆ ಸ್ವಾಗತ ಮಾಡಿದರು ಜೇಸಿ ಕಾರ್ಯದರ್ಶಿ ಶ್ರೇಷ್ಠಿ ವಂದನಾರ್ಪಣೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೇಸಿ ಪೂರ್ವಾಧ್ಯಕ್ಷರು ಹಾಗೂ ತಾಲೂಕ್ ಸ್ಕೌಟ್ ಅಂಡ್ ಗೈಡ್ಸ್  ಅಧ್ಯಕ್ಷರಾದ ಗಣೇಶ ಮಗ್ಗಲಮಕ್ಕಿ ಯವರು ಮಾತಾನಾಡಿ ಜನಸಾಮಾನ್ಯರು ಹಲವಾರು ವರ್ಷಗಳಿಂದಲೂ ನೋಡುತ್ತಲೆ ಬಂದಿದ್ದಾರೆ. ವಾಸ್ತವ ಏನೆಂದರೆ ಇದು ಜನಸಾಮಾನ್ಯರ ಸ್ವಯಂ ಪಾಲ್ಗೊಳ್ಳುವಿಕೆಯ ಆಚರಣೆಯಾಗಿ ಈಗಲೂ ಕೂಡ ಮಾರ್ಪಾಡಾಗದೇ ಇರುವುದು.

ಯಾಕೆಂದರೆ ಬಹುಸಂಖ್ಯಾತ ಜನಸಾಮಾನ್ಯರ ಜೀವನದಲ್ಲಿ ಸಂವಿಧಾನದ ಆಶಯಗಳು ಅಂತ ಹೇಳಲ್ಪಟ್ಟ ಅಂಶಗಳು

ಅನುಭವಕ್ಕೆ ಭಾರದೇ ಹೋಗಿರುವ ದುರಂತವಿದೆ ಎಂದು ಹೇಳಿದರು.

ಜೇಸಿ ಪೂರ್ವಾಧ್ಯಕ್ಷರಾದ ಎಂ.ಎಸ್.ಅಶೋಕರವರು ಮಾತನಾಡಿ

ಆರ್ಥಿಕ ಸಮಾನತೆಯೊಂದಿಗೆ ಜಾತಿ ಸಮಾನತೆ, ಲಿಂಗ ಸಮಾನತೆ ಸಾಧಿಸದೇ ‘ಸ್ವಾತಂತ್ರ್ಯ ಎನ್ನುವುದು ಮರಿಚಿಕೆ ಮಾತ್ರವೆನ್ನುವುದನ್ನು ನಾವು ಗಮನಿಸಬೇಕು.

ಭಾರತ ಒಂದು ಒಕ್ಕೂಟ ವ್ಯವಸ್ಥೆ ಹೊಂದಿರುವ ಸ್ವತಂತ್ರ ಗಣರಾಜ್ಯ ವೆಂದು ತಿಳಿಸಿದರು.

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author