ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ 72 ನೇ ಗಣರಾಜ್ಯೋತ್ಸವದ ಕಾರ್ಯಕ್ರಮ #avintvcom
1 min read
ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ 72 ನೇ ಗಣರಾಜ್ಯೋತ್ಸವದ ಕಾರ್ಯಕ್ರಮ.
ಇದರ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪೀಸ್ ಆಫ್ ಅವರ್ನೆಸ್ ಟ್ರಸ್ಟ್ ಮತ್ತು ಹೋಲಿ ಕ್ರಾಸ್ ರಕ್ತನಿಧಿ ಕೇಂದ್ರ ಇವರ ಸಹಯೋಗದಲ್ಲಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ವರ್ತಕರ ಸಮುದಾಯ ಭವನ
ಜನ್ನಾಪುರ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದರ ಉದ್ಘಾಟನೆಯನ್ನು ಜೆಸಿ ಜನ್ನಾಪುರ ಸಮೃದ್ಧಿಯ ಅಧ್ಯಕ್ಷರಾದ ಜೆಸಿ ಸಂತೋಷರವರು ನೆರವೆರಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ಫೈರೋಜ್ ಆಹ್ಮದ್ ಮಾತನಾಡಿ ರಕ್ತದಾನದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಹಿಂದಿನ ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಇಂತಹ ಸಂಘ ಸಂಸ್ಥೆಗಳು ಮುಂದೆ ಬಂದು ರಕ್ತದಾನದ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದು ತಮ್ಮ ಮಾತಿನಲ್ಲಿ ಅಭಿನಂದಿಸಿದರು.
ರಕ್ತದಾನದ ಶಿಬಿರದಲ್ಲಿ ವರ್ತಕರ ಸಂಘ ಜನ್ನಾಪುರ ನವಕರ್ನಾಟಕ ಯುವಶಕ್ತಿ ಜನ್ನಾಪುರ ಮಹಾಗಣಪತಿ ಸೇವಾ ಸಮಿತಿ ಜನ್ನಾಪುರ ಹಾಗೂ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಒಂದು ಶಿಬಿರದಲ್ಲಿ ಸುಮಾರು 40 ಜನ ರಕ್ತದಾನಿಗಳು ರಕ್ತವನ್ನು
ದಾನವನ್ನು ಮಾಡಿದರು.
ಸುಮಾರು 56 ಶಿಬಿರಗಳನ್ನು ನಡೆಸಿದಂತಹ ಪೀಸ್ ಆಫ್ ಅವರ್ನೆಸ್ ಸಂಘದ ಸ್ಥಾಪಕ ಅಧ್ಯಕ್ಷರಾದ ಅಲ್ತಾಫ್ ಬಿಳಗುಳ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿ ವಿನಯ್ ಕಾರ್ಯದರ್ಶಿ. ಜೆಸಿ ಪ್ರಹಲಾದ್ ಸದಸ್ಯರು ಗ್ರಾಮ ಪಂಚಾಯಿತಿ ಚಿನ್ನಿಗ ಜನ್ನಾಪುರ,
ದಿನೇಶ್ ಗ್ರಾಮ ಪಂಚಾಯತಿ ಸದಸ್ಯರು ಕಿರುಗುಂದ,
ಜೆಸಿ ಸಂದೀಪ್ ಜೇನುಬೈಲು ಕಾರ್ಯಕ್ರಮದ ನಿರ್ದೇಶಕರು, ಜೆಸಿ ಭರತ್ ಉಪಾಧ್ಯಕ್ಷರು, ಜೆಸಿ ವೀರೇಂದ್ರ ಉಪಾಧ್ಯಕ್ಷರು, ಜೆಸಿ ಸಂತೋಷ ಖಜಾಂಚಿ ಜೆಸಿಐ ಜನ್ನಾಪುರ ಸಮೃದ್ಧಿ ಇನ್ನೂ ಹಲವಾರು ಜೆಸಿ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು ಜೆಸಿಐ ಸಮೃದ್ಧಿಯ ವತಿಯಿಂದ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಅಂತ್ಯಗೊಂಡಿತು.