ಮೂಡಿಗೆರೆ ಜೆಸಿಐ ವತಿಯಿಂದ ಕುನ್ನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹೆಣ್ಣು #avintvcom
1 min read
ಮೂಡಿಗೆರೆ ಜೆಸಿಐ ವತಿಯಿಂದ ಕುನ್ನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ತಾಲ್ಲೂಕು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಹೆಚ್.ಟಿ. ವರಮಹಾಲಕ್ಷ್ಮಿಯವರು ವಹಿಸಿದ್ದರು. ಅಧ್ಯಕ್ಷತೆಯನ್ನು ಮೂಡಿಗೆರೆ ಜೇಸಿ ಅಧ್ಯಕ್ಷರಾದ ಚಂದ್ರಶೇಖರ್ ಕುನ್ನಹಳ್ಳಿ ವಹಿಸಿದ್ದರು. ಸ್ವಾಗತ ವನ್ನೂ ಜೇಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್, ವಂದನಾರ್ಪಣೆ ಜೇಸಿರೆಟ್ ಕಾರ್ಯದಶಿ೯ ಕೃತಿಪ್ರದೀಪ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಾತಾನಾಡಿದ ವರಮಹಾಲಕ್ಷಿಯವರು ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜತೆಗೆ ಅವರು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೇಶದಲ್ಲಿ ಹೆಣ್ಣುಮಕ್ಕಳ ದಿನವನ್ನು ಆರಿಸಲಾಗುತ್ತದೆ. ಹೆಣ್ಣೂಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ತಿಳಿಸಿದರು. ಸಮಾಜಕ್ಕೆ ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಅರಿವಾಗಬೇಕು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಲೈಂಗಿಕ ಅಪರಾಧಗಳಿಂದ ರಕ್ಷಣೆ ದೊರೆಯಬೇಕು ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ .
ಜೇಸಿಐ ಸಂಸ್ಥೆಯು ಇಂತಹ ಹಳ್ಳಿಯಲ್ಲಿ ಕಾರ್ಯಕ್ರಮ ಮಾಡಿರುವುದು ಸಂಯೋಷದ ವಿಷಯ ಎಂದು ತಿಳಿಸಿದರು.
ಜೇಸಿ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಭಾರತದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆ, ರಕ್ಷಣೆ , ಆರೋಗ್ಯ ಶಿಕ್ಷಣ ಸಮಾನ ಅವಕಾಶಗಳನ್ನು ಕುರಿತು ತಿಳಿಸಿದರು.
ಜೇಸಿರೆಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಮಾತನಾಡಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ಒಂದೇ ಸಮಾನತೆಯಿಂದ ಬೆಳಸಬೇಕು.
ಹೆಣ್ಣುಗಂಡು ಎಂಬ ಭೇದ ಬಾವನೆಯಿಂದ ಬೆಳಸಬಾರದು. “ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ.
ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ ಅಂತಹ ಕೃತ್ಯವನ್ನು ತಡೆಗಟ್ಟಬೇಕು ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಾವು ಜೇಸೀ, ಜೇಸಿರೆಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಚಿನ್ನ, ಬಟ್ಟೆ, ಒಡವೆಗಿಂತಲೂ ಅವರ ಆತ್ಮ ರಕ್ಷಣೆಗೆ ಕರಾಟೆಯನ್ನು ಕಲಿಸಬೇಕು ಆಗ ಹೆಣ್ಣು ಬರುವಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಎಂದು ಹೇಳಿದರು.
ಮೂವತ್ತು ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಇಪ್ಪತ್ತುಒಟ್ಟು 50 ಜನರು ಭಾಗವಹಿಸಿದ್ದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.