AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಟ್ಟಣದ ಕುಂದೂರು ಕಾಂಪ್ಲೆಕ್ಸ್ ನಲ್ಲಿ ಮೂಡಿಗೆರೆ ಪತ್ತಿನ ಸೌಹಾರ್ಧ ಸಹಕಾರ ಸಂಘದ ನೂತನ #avintvcom

1 min read
Featured Video Play Icon

ಪಟ್ಟಣದ ಕುಂದೂರು ಕಾಂಪ್ಲೆಕ್ಸ್ ನಲ್ಲಿ ಮೂಡಿಗೆರೆ ಪತ್ತಿನ ಸೌಹಾರ್ಧ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಪ್ರಸನ್ನ ಗೌಡಹಳ್ಳಿ,

ಉಪಾಧ್ಯಕ್ಷರಾಗಿ ನವೀನ್ ತಳವಾರ

ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸರಕಾರಿ ಬಾಲಿಕೀಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವರಾಮೇಗೌಡ ಕಾರ್ಯ ನಿರ್ವಹಿಸಿದರು.

ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ ಮಾತನಾಡಿ, ಸೌಹಾರ್ಧ ಸಹಕಾರ ಎಂಬುವುದು ಸಮಾಜದಲ್ಲಿ ಅತ್ಯುನ್ನತ ಗೌರವ ಹೊಂದಿದ್ದು, ಸಂಘಗಳ ರಚನೆಯಲ್ಲಿ ಸದಸ್ಯರ ಪಾತ್ರ ಮಹತ್ವದಾಗಿದೆ. ನಮ್ಮ ಸಂಘದಲ್ಲಿ ವ್ಯಾಪಾರ, ಸಾಲ ನೀಡುವಿಕೆ, ಠೇವಣಿ ಸಂಗ್ರಹ, ಷೇರು ಸಂಗ್ರಹ ಸೇರಿದಂತೆ ಷೇರುದಾರರ ಶ್ರಯೋಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಸಂಘದಿಂದ ಹಮ್ಮಿಕೊಳ್ಳಲಾಗುವುದು. ನೂತನವಾಗಿ ಸಂಘ ಪ್ರಾರಂಭವಾಗಿರುವುದರಿಂದ ಸಂಘವನ್ನು ಕಟ್ಟಿ ಬೆಳೆಸಲು ನಿರ್ದೇಶಕರು ಮತ್ತು ಷೇರುದಾರರು ಸಹಕಾರ ನೀಡಬೇಕು. ಸಂಘದಲ್ಲಿ ಉತ್ತಮ ಕಾರ್ಯ ನಡೆಸುವ ಮೂಲಕ ಸಂಘವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ನವೀನ್ ತಳವಾರ ಮಾತನಾಡಿ, ಸಮಾನ ಮನಸ್ಕರ ಯುವಕರ ತಂಡ ಒಟ್ಟುಗೂಡಿ, ಅವಿರತ ಪರಿಶ್ರಮದಿಂದ ಸಂಘವನ್ನು ಹುಟ್ಟುಹಾಕಲಾಗಿದ್ದು, ತಾಲೂಕಿಗೆ ಪ್ರಥಮ ಸೌಹಾರ್ಧ ಸಹಕಾರ ಸಂಘಕ್ಕೆ ಅತೀ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಸಂಘವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಎ.ಎನ್.ಪ್ರದೀಪ್ ಅಂಗಡಿ, ಎಂ.ಬಿ.ಸಂತೋಷ್ ಮುಗ್ರಹಳ್ಳಿ,

ನಯನ ಕಣಚೂರು, ಯು.ಆರ್.ಶಿವಕಾಶಿ, ಪ್ರಶಾಂತ್ ಬೆಟ್ಟಗೆರೆ,

ದೀಪ್ತಿ ಸುಧೀರ್ ಕಡಿದಾಳ್, ಕವಿತಾ ಸಂತೋಷ್, ಜಯಪಾಲ್ ಬಿದರಹಳ್ಳಿ ಸಭೆಯಲ್ಲಿ ಸದಸ್ಯರಾದ ನಯನ ತಳವಾರ, ನಿಶಾಂತ್ ಪಟೇಲ್ ಸತ್ತಿಗನಹಳ್ಳಿ,

ಅವಿನ್ ಬೆಟ್ಟಗೆರೆ,

ಸುಧೀರ್ ಕಡಿದಾಳ್, ಸಂತೋಷ್ ಹಂಡುಗುಳಿ ಉಪಸ್ಥಿತರಿದ್ದರು.

*

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author