ವಿವಾಹ ನಿಶ್ಚಯ ಆಗಿದ್ದ ಯುವತಿಯೋರ್ವಳು ಅಲ್ಪ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ #avintvcom
1 min read
ಮೂಡಿಗೆರೆ
ವಿವಾಹ ನಿಶ್ಚಯ ಆಗಿದ್ದ ಯುವತಿಯೋರ್ವಳು ಅಲ್ಪ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನ ಹೊಂದಿರುವ ಘಟನೆ ಕಿರುಗುಂದ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೂಡಿಗೆರೆ ತಾ:ಕಿರಗುಂದ ಗ್ರಾಮದ ಯು. ಎ.ರಮೇಶ್ ಎಂಬವರ ಪುತ್ರಿ ನಯನಾ (26) ( ಭುವನೇಶ್ವರಿ) ಮೃತ ದುರ್ದೈವಿ. ಅವರು ತಂದೆ, ತಾಯಿ, ಅಣ್ಣ, ಅಜ್ಜಿ ಸಹಿತ ಅಪಾರ ಬಂದು – ಬಳಗದವರನ್ನು ಅಗಲಿದ್ದಾರೆ.
ಮೂಡಿಗೆರೆ ಡಿ.ಎಸ್. ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿರುವ ನಯನಾ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಅವರು ಅದನ್ನು ತ್ಯಜಿಸಿ ಮನೆಯಲ್ಲಿ ಇದ್ದರು.
ಅವರಿಗೆ ಇತ್ತೀಚೆಗೆ ವಿವಾಹ ನಿಷ್ವಯ ಆಗಿದ್ದು, ಮಾರ್ಚ್ ಕೊನೆಯಲ್ಲಿ ವಿವಾಹ ನಡೆಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ರಮೇಶ್ – ಭಾಗ್ಯಲಕ್ಷ್ಮಿ ದಂಪತಿಗಳು ಸಕಲ ಸಿದ್ಧತೆ ಗಳ ತಯಾರಿ ನಡೆಸುತ್ತಿದ್ದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಿತ್ರಣಗೊಂಡ ನಯನಾರನ್ನು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹಾಸನದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಯಿತು. ಲಿವರ್ ಜಾಂಡೀಸ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ನಸುಕಿನ ಜಾವ ಕೊನೆ ಉಸಿರೆಳೆ ದಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.