ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ”ದ ಅಡಿಯಲ್ಲಿ”ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ” ಕಾರ್ಯಕ್ರಮ
1 min read
ದಿನಾಂಕ : 20-01-2021 ರಂದು ನಮ್ಮ ಮೂಡಿಗೆರೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ- ಗೋಣಿಬೀಡು ವ್ಯಾಪ್ತಿಯಲ್ಲಿರುವ ಉಪಕೇಂದ್ರ- ಜನ್ನಾಪುರದಲ್ಲಿ “ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ”ದ ಅಡಿಯಲ್ಲಿ ಎಂ.ಜಿ.ಎಂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ “ಸ್ನೇಹ ಕ್ಲೀನಿಕ್” ವತಿಯಿಂದ “ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ” ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ಹದಿಹರೆಯದವರಿಗೆ ಪೌಷ್ಟಿಕ ಆಹಾರದ ಬಗ್ಗೆ ,ಋತುಚಕ್ರದ ಬಗ್ಗೆ ,ವೈಯಕ್ತಿಕ ಸ್ವಚ್ಛತೆ ಬಗ್ಗೆ, ಕಬ್ಬಿಣಾಂಶದ ಮಾತ್ರೆ WIFS ಬಗ್ಗೆ , ಸ್ನೇಹ ಕ್ಲಿನಿಕ್ ಸೇವೆಗಳ ಬಗ್ಗೆ ,ಮಾನಸಿಕ ಆರೋಗ್ಯ, ದುಶ್ಚಟ ವ್ಯಸನದ, ಬಾಲ್ಯ ವಿವಾಹ, Covid-19 , ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ,ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಲಾಯಿತು ಕಾರ್ಯಕ್ರಮ ದಲ್ಲಿ ಗೋಣಿಬೀಡು-ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸುದರ್ಶನ್ ರವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಕಾರ್ಯಕ್ರಮದ ಬಗೆಗೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು, ಅಧ್ಯಕ್ಷತೆಯನ್ನು ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕರಾದ ನಾಗರತ್ನರವರು ವಹಿಸಿದ್ದರು, RKSK ಆಪ್ತ ಸಮಾಲೋಚಕರಾದ ವಿದ್ಯಾರವರು RKSK ಕಾರ್ಯಕ್ರಮದ ಬಗೆಗೆ,ಸ್ನೇಹ ಕ್ಲೀನಿಕ್ ಬಗೆಗೆ ಅಲ್ಲಿ ನೀಡಲಾಗುವ ಸೇವೆಗಳ ಬಗೆಗೆ, ಹದಿಹರೆಯದವರ ಸಮಸ್ಯೆಗಳ ಬಗೆಗೆ ಸಮಸ್ಯೆಗಳಿಗೆ ನೀಡಲಾಗುವ ಆಪ್ತ ಸಮಾಲೋಚನೆಗಳ ಬಗೆಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಭಾರಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುನಾಥರವರು, MLHP ರವರು, ಜನ್ನಾಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು,ಆಶಾ ಕಾರ್ಯಕರ್ತೆಯವರು, ಅಂಗನವಾಡಿ ಕಾರ್ಯಕರ್ತೆಯವರು ಮತ್ತು ಹದಿಹರೆಯದವರು ಭಾಗವಹಿಸಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.