ಪ್ರವಾಸಿಗರು ಸಂಚಾರ ನಿಯಮ ಗಾಳಿಗೆ ತೂರಿ ತೆರೆದ ವಾಹನಗಳಲ್ಲಿ ಮಕ್ಕಳು ನಿಂತು ಸಂಚರಿಸುತ್ತಿರುವುದು ಅಪಾಯ#avintvcom
1 min read
ನಿಯಮ ಗಾಳಿಗೆ ತೂರಿದ ಪ್ರವಾಸಿಗರು :ಕೊಟ್ಟಿಗೆಹಾರದಲ್ಲಿ ಕೆಲ ಪ್ರವಾಸಿಗರು ಸಂಚಾರ ನಿಯಮ ಗಾಳಿಗೆ ತೂರಿ ತೆರೆದ ವಾಹನದ ಮೇಲ್ಬಾಗದಲ್ಲಿ ನಿಂತು ಸಂಚರಿಸುವುದು ಕಂಡು ಬರುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಮೇಲ್ಬಾಗ ತೆರೆದ ವಾಹನಗಳಲ್ಲಿ ಮಕ್ಕಳು ನಿಂತು ಸಂಚರಿಸುತ್ತಿರುವುದು ಅಪಾಯವನ್ನು ಆಹ್ವಾನಿಸುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ. ತೆರೆದ ಮೇಲ್ಬಾಗದಲ್ಲಿರುವ ವಾಹನಗಳಲ್ಲಿ ಮಕ್ಕಳು ಕುಣಿಯುತ್ತಾ ಸಾಗುವುದರಿಂದ ತಿರುವಿನಲ್ಲಿ ವೇಗವಾಗಿ ಸಂಚರಿಸುವಾಗ ಕೆಳಗೆ ಬೀಳುವ ಸಾಧ್ಯತೆಯೂ ಹೆಚ್ಚಿದೆ. ಕೊಟ್ಟಿಗೆಹಾರದ ತಪಾಸಣ ಕೆಂದ್ರದಲ್ಲಿ ಸರಿಯಾದ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ಭವಿಷ್ಯದ ಲ್ಲಿ ಉತ್ತಮ ಪ್ರಜೆಗಳಾಗುವ ಮಕ್ಕಳನ್ನು ರೂಪಿಸ ಬೇಕಾಗಿದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.