AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಾರಾಷ್ಟರದ ಮುಖ್ಯಮಂತ್ರಿ ಮಾಡಿರುವ ಟ್ವಿಟ ಖಂಡಿಸಿ ಇಂದು ಅಥಣಿಯಲಿ ಕರ್ನಾಟಕ ಜಯ ಕರ್ನಾಟಕ ಸಂಘಟನೆ #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು

ಮಹಾರಾಷ್ಟರದ ಮುಖ್ಯಮಂತ್ರಿ ಮಾಡಿರುವ ಟ್ವಿಟ ಖಂಡಿಸಿ ಇಂದು ಅಥಣಿಯಲಿ ಕರ್ನಾಟಕ ಜಯ ಕರ್ನಾಟಕ ಸಂಘಟನೆ ಯಿಂದ ಇಂದು ಪ್ರತಿಭಟನೆ ಮಾಡಲಾಯಿತ್ತು ಈ ಪ್ರತಿಭಟನೆಯಲ್ಲಿ ಒಂದು ಕರ್ನಾಟಕ ಸಂಘಟನೆ ಜಿಲ್ಲಾ ಉಪಾದ್ಯಕ್ಷರು ಹಾಗು ವಿದ್ಯಾಥಿ೯ ಘಟಕದ ಅಧ್ಯಕ್ಷರಾದ ವಿಜಯ ಪವಾರ ಹಾಗು ಸಂಘಟನೆ ಸದಸ್ಯರು ಉಪಸ್ಥರಿದರು

ಮಹಾರಾಷ್ಟ್ರದ ಸಿಎಂ ಪದೆ ಪದೆ ಸಮಾಜದ ಸ್ವಾಸ್ಥ್ಯ ಕೆಡುವುದು ಹೇಳಿಕೆಯನ್ನು ನಿಡುತಿದ್ದಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಪ್ರಹ್ಲಾದ್ ವಾಗ್ಮೋರೆ, ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರು ವಿಜಯಕುಮಾರ್ ಪವಾರ್, ತಾಲೂಕು ಎಸ್.ಸಿ ಘಟಕದ ಅಧ್ಯಕ್ಷ ಕಿರಣ್ ಕಾಂಬಳೆ, ರಾಜು ವಿಜಾಪುರ, ಕಿರಣಗಿ ಶಾಖಾಧ್ಯಕ್ಷ ಆಕಾಶ ನಂದಗಾಂವ, ಶೇಖರ್ ಕಾಳೇಲಿ ಉಪಸ್ಥಿತರಿದರು.

ಅಥಣಿ ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುತ್ತೆವೆ. ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಮಾಡಿದ್ದರು. ಇದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟನದಲ್ಲಿ ಉದ್ದವ್ ಠಾಕ್ರೆ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ಮಾತನಾಡಿ ಜಯ ಕರ್ನಾಟಕ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಲ್ಹಾದ ವಾಘಮೋರೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿರುವ ಜವಾಬ್ದಾರಿ ಸ್ಥಾನದಲ್ಲಿ ಇರುವ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ ಠಾಕ್ರೆಯವರು ನಮ್ಮ ನಾಡು ನುಡಿ ವಿಷಯವಾಗಿ ಕ್ಯಾತೆ ತೆಗೆಯುವ ಮೂಲಕ ಕನ್ನಡಿಗರ ಭಾವನೆ ಕೆರಳಿಸುತ್ತಿದ್ದಾರೆ. ಮಹಾಜನ ಆಯೋಗದ ವರದಿ ಅಂತಿಮವಾಗಿದ್ದರೂ ಕೂಡ ಬೆಳಗಾವಿ, ಖಾನಾಪೂರ, ನಿಪ್ಪಾಣಿ ಸೇರಿದಂತೆ ಮರಾಠಿಗರು ಹೆಚ್ಚಾಗಿರುವ ಬೆಳಗಾವಿ ಭಾಗ ಮಹಾರಾಷ್ಟ್ರ ಸೇರಬೇಕು ಎಂದು ಟೀಟ್ ಮಾಡಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಉದ್ದವ ಠಾಕ್ರೆ ರವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಇಲ್ಲವಾದರೆ ಮುಂಬರುವ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ಸಿಎಂ ಪದೆ ಪದೆ ಸಮಾಜದ ಸ್ವಾಸ್ಥ್ಯ ಕೆಡುವುದು ಹೇಳಿಕೆಯನ್ನು ನಿಡುತಿದ್ದಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author