ಪೋರವಾಲ್ ಕಾಲೇಜಿನ ಆವರಣದಲ್ಲಿ ಮಿಲಟರಿ ಸೈನ್ಯ ಬಂದಿರುವ ಹಾಗೆ ಭಾಸವಾಗುತ್ತಿದೆ. #avintvcom
1 min read
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ. ಪಿ ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ. ವಿ ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಸಿ ಎಂ ಮನಗೂಳಿ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಪೋರವಾಲ್ ಕಾಲೇಜಿನ ಆವರಣದಲ್ಲಿ ಮಿಲಟರಿ ಸೈನ್ಯ ಬಂದಿರುವ ಹಾಗೆ ಭಾಸವಾಗುತ್ತಿದೆ. ಆವರಣದಲ್ಲಿ ಎಲ್ಲಿ ನೋಡಿದರು ಮಿಲಟರಿ ಉಡುಗೆಯಲ್ಲಿರುವ ಅಧಿಕಾರಿಗಳು, ಎನ್ ಸಿ ಸಿ ಉಡುಗೆಯಲ್ಲಿರುವ ಜ್ಯೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳು. ಚುಮು ಚುಮು ಚಳಿಯನ್ನು ಲೆಕ್ಕಿಸದೆ ಅಧಿಕಾರಿಗಳು ದೈಹಿಕ ಮತ್ತು ಮಾನಸಿಕ ಕಸರತ್ತನ್ನು ಶಿಸ್ತಿನ ಸಿಪಾಯಿಯಂತೆ ತಪ್ಪಿಸದೇ ನಿರ್ವಹಿಸುತ್ತಿರುವುದು ನೋಡಿದರೆ ಹೇಮೆ ಎನಿಸುತ್ತದೆ.
ಜಿ. ಪಿ ಪೋರವಲ್ ಆವರಣದಲ್ಲಿ 2020-21ರ ಜನವರಿ ತಿಂಗಳ ಎನ್ ಸಿ ಸಿ ಕ್ಯಾಪ್ಟನರಾದ ರವಿ ಲಮಾಣಿ ಮತ್ತು ಎಸ್ ಕೆ ಹೂಗಾರ ಹಾಗೂ ಪ್ರಾಚಾರ್ಯರಾದ ಆರ್ ಎಸ್ ಬುಶೆಟ್ಟಿ ಅವರ ಮುಂದಾಳತ್ವದಲ್ಲಿ ಶಿಬಿರ ನಡೆಯುತ್ತಿದೆ.
೩೬ ಕರ್ನಾಟಕ ಬಟಾಲಿಯನ್ ಎನ್ ಸಿ ಸಿ, ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ದಿ. ೧೭ ರಿಂದ ೨೧ರ ವರೆಗೆ ನಡೆಯುತ್ತಿದೆ.
ಶಿಬಿರದ ಮುಖ್ಯಸ್ಥಿಕೆಯನ್ನು ವಹಿಸಿರುವ ೩೬ ಕರ್ನಾಟಕ ಬಟಾಲಿಯನ್ ಅಡ್ಮಿನ್ ಆಫೀಸರ್ ಮೇಜರ್ ಶೃತಿ ನಾಯರ್ ಮತ್ತು ಸ್ಪೆದರ್ ಮಹಾವೀರ ಸಿಂಗ್ ಮಾತನಾಡಿ, ಕೇಡೇಟಗಳು ತಮ್ಮ ಜೀವನದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಬೇಕು. ಎ ಬಿ ಸಿ ಸರ್ಟಿಫಿಕೇಟ್ ದೊರೆಯುವಂತಾಗಲು ಪೂರ್ವ ತಯ್ಯಾರಿಯನ್ನು ಕೆಡೆಟಗಳಿಗೆ ಈ ಶಿಬಿರದಲ್ಲಿ ನೀಡಲಾಗುತ್ತಿದೆ. ಇಂತಹ ಶಿಬಿರಗಳು ಗಣರಾಜ್ಯೋತ್ಸವ ಪರೇಡನಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು ಕಠಿಣ ಪ್ರಯತ್ನ ಮಾಡುವಂತಾಗಬೇಕು ಎಂದು ಶಿಬಿರದಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸದೃಢ ಆರೋಗ್ಯದತ್ತ ಗಮನಹರಿಸಲಿ. ಶಿಬಿರದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಭಾವನೆಯೊಂದಿಗೆ ಪ್ರತಿಯೊಬ್ಬರನ್ನು ತನ್ನ ಸಹೋದರ-ಸಹೋದರಿ ಎಂಬ ಭಾವನೆ ಇರುವುದರ ಜೊತೆಗೆ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳು ಭಾಗವಹಿಸುಂತಾಗಬೇಕು ಎಂದು ಹೇಳಿದರು.
ಶಿಬಿರದಲ್ಲಿ ಸಿಂದಗಿ ನಗರದ ಜಿ. ಪಿ ಪೋರವಾಲ್ ಮತ್ತು ಎಂ ಸಿ ಮನಗೂಳಿ ಮಹಾವಿದ್ಯಾಲಯದ ಸುಮಾರು 59 ಎನ್ ಸಿ ಸಿ ಕೆಡೆಟಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ 40, ಮಹಿಳೆಯರ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ತಮ್ಮ ಶ್ರಮವನ್ನು ಪ್ರದರ್ಶಿಸುತ್ತಿದ್ದಾರೆ.
ಹುಡುಗರು ಮತ್ತು ಹುಡುಗಿಯರನ್ನು ಒಳಗೊಂಡಂತೆ 4 ಪಂಗಡಗಳನ್ನಾಗಿ ವಿಂಗಡಿಸಲಾಗಿದೆ.
ಶಿಬಿರದ ಮುಖ್ಯಸ್ಥ ೩೬ ಬಟಾಲಿಯನ್ ಅಡ್ಮಿನ್ ಆಫೀಸರ್ ಮೇಜರ್ ಶೃತಿ ನಾಯರ್ ಮತ್ತು ಸ್ಪೆದರ್ ಮಹಾವೀರ ಸಿಂಗ್, ಪಿಐ ಸಿಬ್ಬಂದಿಗಳು, ರವಿ ಲಮಾಣಿ, ಎಸ್ ಕೆ ಹೂಗಾರ, ಪ್ರಾಚಾರ್ಯ ಆರ್ ಎಸ್ ಭುಶೆಟ್ಟಿ, ಉಪಪ್ರಾಚಾರ್ಯ ಡಿ ಎಂ ಪಾಟೀಲ್ ಸೇರಿದಂತೆ ಉಪನ್ಯಾಸಕರು ತರಬೇತಿಯಲ್ಲಿದ್ದರು.
ವರದಿ: ಮಹಾಂತೇಶ ನೂಲಾನವರ, ಸಿಂದಗಿ…