AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶೀಘ್ರ ಆಟದ ಮೈದಾನದ ಪಕ್ಕಾ ಪೋಡಿ ಬದಲಾವಣೆಯ ಭರವಸೆ#avintvcom

1 min read
Featured Video Play Icon

ಶೀಘ್ರ ಆಟದ ಮೈದಾನದ ಪಕ್ಕಾ ಪೋಡಿ ಬದಲಾವಣೆಯ ಭರವಸೆ
ಅನಿರ್ದಿಷ್ಟಾವಧಿ ಧರಣಿ ಹಿಂಪಡೆದ ಧರಣಿ ನಿರತರು.
ಪಕ್ಕಾ ಪೋಡಿ ಬದಲಾವಣೆ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆಗೆ ನಿರ್ಧಾರ
ಮೈದಾನ ಪಕ್ಕಾ ಪೋಡಿ ಬದಲಾವಣೆಗೆ ಒತ್ತಾಯಿಸಿ ಬಣಕಲ್ ಬಂದ್ ಯಶಸ್ವಿ
ಸ್ಥಳಕ್ಕೆ ಶಾಸಕರು. ಎಂಎಲ್‍ಸಿ, ಎಸ್‍ಪಿ ಬೇಟಿ

ಬಣಕಲ್ ಗ್ರಾಮದ ಸರ್ವೇ ನಂ 353 ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಕಾ ಪೋಡಿ ಬದಲಾಯಿಸುವಂತೆ ಒತ್ತಾಯಿಸಿ ಮಂಗಳವಾರ ಬಣಕಲ್ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಲಾಯಿತು.
ಮಂಗಳವಾರ ರ ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಣಕಲ್‍ನ ಅಂಗಡಿ ಮುಂಗಟ್ಟುಗಳ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು. ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಬಣಕಲ್‍ನ ಪೆಟ್ರೋಲ್ ಬಂಕ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಣಕಲ್‍ನ ಮುಖ್ಯ ಬೀದಿಗಳಲ್ಲಿ ಸಾಗಿ ಆಟದ ಮೈದಾನದಲ್ಲಿ ಧರಣಿ ನಡೆಸಲಾಯಿತು.
ಧರಣಿ ನಿರತ ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ಬೇಟಿ ನೀಡಿ ಧರಣಿ ನಿರತದ ಬಳಿ ಮಾತುಕತೆ ನಡೆಸಿದರು.
ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ 1994 ರಲ್ಲಿ ಗ್ರಾ.ಪಂಯಿಂದ ಪೋಲಿಸ್ ಇಲಾಖೆಗೆ 2 ಎಕರೆ ಜಾಗವನ್ನು ನೀಡಲಾಗಿದೆ. ಆ ಜಾಗದಲ್ಲಿ ಪೋಲಿಸ್ ವಸತಿ ಗೃಹವನ್ನು ಹಲವು ವರ್ಷದ ಹಿಂದೆಯೆ ನಿರ್ಮಿಸಲಾಗಿದೆ. ಆದರೆ ಈಗ ಹಿಂದೆ ಕಟ್ಟಡ ನಿರ್ಮಿಸಿದ್ದ ಜಾಗವನ್ನು ಸೇರಿಸಿ ಪೋಡಿ ಮಾಡುವ ಬದಲು ಕಟ್ಟಡ ಇರುವ ಜಾಗವನ್ನು ಬಿಟ್ಟು ಹೊಸದಾಗಿ ಪಕ್ಕದ ಜಾಗವನ್ನು ಸೇರಿ ಪೋಡಿ ಮಾಡಲಾಗಿದೆ. ಈ ಜಾಗದಲ್ಲಿ ಆಟದ ಮೈದಾನವೂ ಸೇರಿದೆ. ಈ ಬಗ್ಗೆ ಮುಖ್ಯಂತ್ರಿಗಳ ಬಳಿ ಮಾತನಾಡಿ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಮಾತನಾಡಿ ಆಟದ ಮೈದಾನದ ಬಗ್ಗೆ ಶಾಸಕರೊಡನೆ ಬುಧವಾರ ಗೃಹ ಸಚಿವರು ಮತ್ತು ಐಜಿ ಅವರನ್ನು ಬೇಟಿ ನೀಡಿ ಸಾರ್ವಜನಿಕರ ಉಪಯೋಗಕ್ಕಾಗಿ ಕ್ರೀಡಾಂಗಣವನ್ನು ಉಳಿಸಿಕೊಳ್ಳುವ ಕುರಿತು ಮಾತುಕತೆ ನಡೆಸಲಾಗುವುದು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ಮಾತನಾಡಿ ಬಣಕಲ್ ಆಟದ ಮೈದಾನದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಪ್ರಸ್ತುತ ಆಟದ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಯಾವುದೆ ನಿರ್ಬಂಧವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ನೀವು ಜಿಲ್ಲೆಯಲ್ಲಿ ಇರುವವರೆಗೆ ಸಾರ್ವಜನಿಕರ ಬಳಕೆಗೆ ಮೈದಾನ ಮುಕ್ತವಾಗಿದೆ ಎನ್ನಬಹುದು. ಆದರೆ ಮುಂದೆ ಬರುವ ಪೋಲಿಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಆಟದ ಮೈದಾನ ಬಳಕೆ ಅವಕಾಶ ನೀಡುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಆದ್ದರಿಂದ ಆಟದ ಮೈದಾನದ ಪಕ್ಕಾ ಪೋಡ್ ಆದರೆ ಆಟದ ಮೈದಾನ ಸಾರ್ವಜನಿಕರ ಬಳಕೆಗೆ ಯಾವುದೆ ಸಮಸ್ಯೆಯಾಗುವುದಿಲ್ಲ ಎಂದರು.
ಮಾಜಿ ತಾ.ಪಂ ಅಧ್ಯಕ್ಷ ಕೆ.ಸಿ ರತನ್ ಮಾತನಾಡಿ ಪೋಡಿ ಬದಲಾವಣೆಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇದೆ. ಬಣಕಲ್ ಸುತ್ತಮುತ್ತಾ ಬೇರೆ ಯಾವುದೇ ಆಟದ ಮೈದಾನ ಇಲ್ಲ. ಈ ಮೈದಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಕ್ರೀಡಾಂಗಣ ಹೋರಾಟ ಸಮಿತಿಯ ಸದಸ್ಯ ವಿನಯ್ ಶೆಟ್ಟಿ ಪತ್ರಿಕೆಯೊಂದಿಗೆ ಮಾತನಾಡಿ ಶೀಘ್ರದಲ್ಲಿ ಆಟದ ಮೈದಾನದ ಪಕ್ಕಾ ಪೋಡ್ ಬದಲಾವಣೆಯ ಭರವಸೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದುಕೊಂಡಿದ್ದು ಪಕ್ಕಾ ಪೋಡಿ ಬದಲಾವಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ನಡೆಡಲಾಗುವುದು ಎಂದರು.
ಶೀಘ್ರದಲ್ಲಿ ಆಟದ ಮೈದಾನದ ಪಕ್ಕಾ ಪೋಡ್ ಬದಲಾವಣೆಯ ಭರವಸೆ ನೀಡಿದ್ದರಿಂದಾಗಿ ಅನಿದಿಷ್ಟಾವಧಿ ಧರಣಿಯನ್ನು ಹಿಂಪಡೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅನುಕುಮಾರ್, ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡ ವಿಕ್ರಂ, ಬಿ.ಎಂ ಭರತ್, ಗಜೇಂದ್ರ, ಯಶೋದರ್, ಅಭಿಲಾಷ್, ಸಂಜಯ್‍ಗೌಡ, ಪರೀಕ್ಷಿತ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್, ಗ್ರಾಮಸ್ಥರಾದ ಮಹಮದ್ ಆಲಿ. ಅಹಮದ್ ಭಾವ, ಶಿವರಾಮ್ ಶೆಟ್ಟಿ, ಅಭಿಷೇಕ್, ವಿನಯ್ ಶೆಟ್ಟಿ, ರಾಜೇಶ್, ಶಶಿಧರ್, ಪ್ರದೀಪ್, ಪ್ರವೀಣ್, ಇಸ್ಮಾಯಿಲ್, ಸೂರಿ, ಹಾಗೂ ವಿವಿಧ ಠಾಣೆಗಳ ಪಿಎಸ್‍ಐ ಹಾಗೂ ಸಿಬ್ಬಂದಿಗಳು ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
ಅವಿನ್ ಟಿವಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author