ಧಾನ್ಯ,ಜೋಳ,ರಾಗಿ ಹೀಗೆ ರೈತರು ಕಣಗಳಲ್ಲಿ ಒಕ್ಕಣೆ ಮಾಡುವ ಬದಲು ರಸ್ತೆಗೆ ಬೆಳೆ ಸುರಿದು ವಾಹನ… #avintvcom
1 min read
ರಸ್ತೆಯಲ್ಲಿ ಒಕ್ಕಣೆ,ಆಕಸ್ಮಿಕ ಬೆಂಕಿ ತಗುಲಿ ಕಾರು ಭಸ್ಮ
ಹಾಸನ:ಧಾನ್ಯ,ಜೋಳ,ರಾಗಿ ಹೀಗೆ ರೈತರು ಕಣಗಳಲ್ಲಿ ಒಕ್ಕಣೆ ಮಾಡುವ ಬದಲು ರಸ್ತೆಗೆ ಬೆಳೆ ಸುರಿದು ವಾಹನ ಹರಿದ ನಂತರ ಸುಲಭವಾಗಿ ಒಕ್ಕಣೆ ಮಾಡಿಕೊಳ್ಳುವುದು ಗ್ರಾಮಾಂತರ ಪ್ರದೇಶಗಳಲ್ಲಿ ಸಹಜವಾಗಿ ಕಾಣಸಿಗುತ್ತದೆ.ಹೀಗೆ ಹಾಸನದ ಅಮೃತೂರು ಹೋಬಳಿ,ಕುಣಿಗಲ್ ತಾಲ್ಲೂಕಿನಲ್ಲಿ ಕುಪ್ಪೆಯಿಂದ ಸಣಬಕ್ಕೆ ಹೋಗುವ ಮಾರ್ಗದಲ್ಲಿ ಒಣಗಿದ ತೂಗರಿಯನ್ನು ಒಕ್ಕಣೆಗೆ ಹಾಕಲಾಗಿತ್ತು,ಮೊದಲೇ ಬಿಸಿಯಾದ ಕಾರಿನ ಎಂಜಿನಿಗೆ ತೊಗರಿ ಒಣ ತ್ಯಾಜ್ಯ ಸಿಕ್ಕಿದ ತಕ್ಷಣ ಕಾರು ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ,ಸಮಯ ಪ್ರಜ್ಞೆಯಿಂದ ವಾಹನದಿಂದ ಕೆಳಗಿಳಿದು ಪಾರಾಗಿದ್ದಾರೆ,ತಕ್ಷಣಕ್ಕೆ ಸ್ಥಳದಲ್ಲಿ ನೀರು ಸಿಗದ ಕಾರಣ ಕಾರು ಬಹುತೇಕ ಸುಟ್ಟು ಕರಕಲಾಗಿದೆ.ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.