ತರಬೇತಿ ನಿರತ ಪೊಲೀಸರಿಗೆ ಮಾನವೀಯತೆಯ ಪಾಠ ಬೋಧಿಸಿದ ಕರ್ನಾಟ ಪ್ರೆಸ್ ಕ್ಲಬ್ ಕೌನ್ಸಿಲ್ #avintvcom
1 min read
ತರಬೇತಿ ನಿರತ ಪೊಲೀಸರಿಗೆ ಮಾನವೀಯತೆಯ ಪಾಠ ಬೋಧಿಸಿದ ಕರ್ನಾಟ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ಟಿ. ಶಿವಕುಮಾರ್ ನಾಗರ ನವಿಲೆ
ಚನ್ನಪಟ್ಟಣದ ಪೊಲೀಸ್ ತರಬೇತಿ ಶಿಬಿರದಲ್ಲಿ ಲಯನ್ಸ್ ಕ್ಲಬ್ ರಾಯಲ್ ಪ್ಯಾಲೇಸ್ ವತಿಯಿಂದ, ತರಬೇತಿ ನಿರತ ಪೊಲೀಸ್ ಸಿಬ್ಬಂದಿಗಳಿಗೆ ವೃತ್ತಿ ಕೌಶಲ್ಯದ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಲಯನ್ಸ್ ಕ್ಲಬ್ ನ ಜಿಲ್ಲಾ ರಾಜ್ಯಪಾಲರಾದ ದೀಪಕ್ ಸುಮನ್ ಅವರು ಮಾತನಾಡಿ ಲಯನ್ಸ್ ಕ್ಲಬ್ ಸಂಸ್ಥಾಪಕರಾದ ಮೆಲ್ವಿನ್ ಜೋನ್ಸ್ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಪೊಲೀಸರಾದ ನೀವೆಲ್ಲ ನಿಮ್ಮ ಬಳಿ ಬರುವವರೊಡನೆ ಸೌಜನ್ಯದಿಂದ ವರ್ತಿಸಿ. ತೊಂದರೆ ಕಾರಣಕ್ಕೆ ನಿಮ್ಮ ಬಳಿ ಬರುತ್ತಾರೆ. ಅವರಿಗೆ ಕರುಣೆ ತೋರಿಸಿ. ಆಗ ನಿಮ್ಮ ಬಗ್ಗೆ ಅವರಿಗೆ ಗೌರವ ಮೂಡುತ್ತದೆ” ಎಂದರು
ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ನ ರಾಜ್ಯಾಧ್ಯಕ್ಷರಾದ ಶಿವಕುಮಾರ್ ನಾಗರನವಿಲೆ ಅವರು ಮಾತನಾಡಿ, “ಪೊಲೀಸರು ಒಂದು ರೀತಿಯಲ್ಲಿ ಸೈನಿಕರಂತೆ. ಸೈನಿಕರು ದೇಶ ಕಾಯುವಂತೆ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಾರೆ. ಆದರೆ ಒಂದು ಕಿವಿಮಾತು. ತಪ್ಪು ಮಾಡಿದವರಿಗೆ ಕೂಡಲೇ ಶಿಕ್ಷೆ ನೀಡದೇ, ಬುದ್ಧಿ ಹೇಳಿ, ತಪ್ಪನ್ನು ತಿದ್ದಿಕೊಳ್ಳಲು ಒಂದು ಅವಕಾಶವನ್ನು ನೀಡಬೇಕು.ಒಮ್ಮೆ ಒಬ್ಬ ವಿದ್ಯಾರ್ಥಿ ಗುಂಡಾಗಿರಿ ಮಾಡಿದನೆಂದು ಪರೀಕ್ಷೆಯಲ್ಲಿ ಬರೆಯಲು ಹಾಲ್ ಟಿಕೆಟ್ ಕೊಟ್ಟಿರಲಿಲ್ಲ. ಅವನ ತಂದೆ-ತಾಯಿ ನನ್ನಲ್ಲಿ ಬಂದು ಸಹಾಯ ಮಾಡಬೇಕೆಂದು ಬೇಡಿಕೊಂಡರು. ನಾನು ಪ್ರಿನ್ಸಿಪಾಲ್ ಜೊತೆ ಮಾತನಾಡಿ ಹಾಲ್ ಟಿಕೆಟ್ ಕೊಡಿಸಿ, ಬುದ್ಧಿ ಹೇಳಿದೆ. ಇಂದು ಆತ ಬಳ್ಳಾರಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾನೆ. ಅದೇ ರೀತಿ 22 ಜನ ಅಪರಾಧಿಗಳನ್ನು ಮನಪರಿವರ್ತನೆಗೊಳಿಸಿ ಬಿಡಿಸಿದೆ. ಇಂದು ಅವರೆಲ್ಲ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುತ್ತಿದ್ದಾರೆ” ಎಂದರು.
ಅಂತೋನಿ ಜೋಸೆಫ್ ಮತ್ತು ಶ್ರೀಮತಿ ವೀಣಾ ರವರು ವೃತ್ತಿ ಕೌಶಲ್ಯದ ಬಗ್ಗೆ ಉಪನ್ಯಾಸ ನೀಡಿದರು. ವೀರಭದ್ರಯ್ಯ, ಡಾ. ಶೋಭಾ, ಕಲ್ಪನಾ, ಶಿವಾರೆಡ್ಡಿ, ಚಂದ್ರಶೇಖರ್, ಅರವಿಂದ ಶಶಿ ಭಾಗವಹಿಸಿದ್ದರು. ಡಿವೈಎಸ್ಪಿ ಗುರುಪ್ರಸಾದ್, ಇಂಚಾರ್ಜ್ ಡಿಎಸ್ಪಿ ರವಿರತನ್ ಆರಾಧ್ಯ, ಇನ್ಸ್ಪೆಕ್ಟರ್ ಗಳಾದ ಶ್ರೀಕಾಂತ್, ರಮೇಶ್, ಸಂಪತ್ ಕುಮಾರ್ ಉಪಸ್ಥಿತರಿದ್ದರು.ಎಸ್ಪಿ ಶೈಲೇಂದ್ರರವರು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದರು.