AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಣಕಲ್‍ನ ಗ್ರಾ.ಪಂ ಸಭಾಂಗಣದಲ್ಲಿ ನಡೆದ 2021ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ#avintvcom

1 min read
Featured Video Play Icon

ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸೋಣ

ಸೇವಾ ಮನೋಭಾವದಿಮದ ಕಾರ್ಯ ನಿರ್ವಹಿಸಿ ನಾಯಕತ್ವ ಗುಣ ಬೆಳೆಸಿಕೊಳ್ಳೋಣ ಎಂದು ಜೆಸಿಐ ಬಣಕಲ್ ವಿಸ್ಮಯದ ನೂತನ ಅಧ್ಯಕ್ಷ ಡಿ.ಟಿ ನವೀನ್ ಕುಮಾರ್ ಹೇಳಿದರು.
ಬಣಕಲ್‍ನ ಗ್ರಾ.ಪಂ ಸಭಾಂಗಣದಲ್ಲಿ ನಡೆದ 2021ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಲವು ಯುವನಾಯಕರಿಗೆ ಶಿಸ್ತುಬದ್ದ ತರಬೇತಿ ನೀಡಿ ನಾಯಕತ್ವ ಗುಣಗಳನ್ನು ಬೇಳೆಸುವ ಮೂಲಕ ಸಮಾಜ, ದೇಶಕ್ಕೆ ಸತ್ಪಜೆಗಳನ್ನು ನೀಡುವ ಕಾರ್ಯದಲ್ಲಿ ಜೇಸಿಐ ಮುಂಚೂಣಿಯಲ್ಲಿದೆ ಎಂದರು.
ವಲಯ ಪೂರ್ವ ಅಧ್ಯಕ್ಷ ರಾಜೇಂದ್ರ ಭಟ್ ಮಾತನಾಡಿ ವಿಶ್ವ ಮಾನವತ್ವದ ಸಾರವನ್ನು ಜೇಸಿಐ ಬೋದಿಸುತ್ತದೆ. ಎಲ್ಲರೂ ಸಮಾನರು, ಎಲ್ಲರನ್ನೂ ಮಾನವತ್ವದ ದೃಷ್ಟಿಯಿಂದ ನೋಡುವುದನ್ನು ಜೇಸಿಯ ಕಲಿಸುತ್ತದೆ ಎಂದರು.
ಬಣಕಲ್ ಜೇಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್ ಶೆಟ್ಟಿ ಮಾತನಾಡಿ, ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಸಿಕೊಳ್ಳಲು ಜೇಸಿಐ ಪೂರಕ ವಾತಾವರಣ ಕಲ್ಪಿಸುತ್ತದೆ. ಅವಕಾಶದ ಸದ್ಬಳಕೆ ಮಾಡಿಕೊಳ್ಳುವಿಕೆಯಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಜೇಸಿ ಪೂರ್ವ ಅದ್ಯಕ್ಷರಾದ ಮಗ್ಗಲಮಕ್ಕಿಗಣೇಶ.
ಎಂ.ಎಸ್.ಆಶೊಕ್.
ಹಾಲಿ ಅಧ್ಯಕ್ಷರಾದ ಚಂದ್ರಶೇಖರ್.
ಕಾರ್ಯದರ್ಶಿ ಶ್ರೇಷ್ಟಿ ಇದ್ದರು.
ನಿಕಟಪೂರ್ವ ಅಧ್ಯಕ್ಷರುಗಳಾದ ರವಿ ವಾಟೆಖಾನ್, ದಿನೇಶ್, ವಲಯ ಅಧ್ಯಕ್ಷ ಭರತ್ ಎನ್ ಆಚಾರ್ಯ, ವಲಯ ಉಪಾಧ್ಯಕ್ಷ ವಿಜಯ ಕುಮಾರ್, ನಿಕಟಪೂರ್ವ ವಲಯ ಅಧ್ಯಕ್ಷರಾದ ಸಮತಾ ಮಿಸ್ಕಿತ್, ಕಾರ್ಯದರ್ಶಿ ಸುರೇಂದ್ರ ಕೋಳೂರು, ಜೇಸಿ ರೆಟ್ ಅಧ್ಯಕ್ಷೆ ಮದುರಾ ಕವೀಶ್, ಕಾರ್ಯದರ್ಶಿ ಶಬರಿಶ್ರೀನಾಥ್, ಪದಾಧಿಕಾರಿಗಳಾದ ಕೃಷ್ಣೆಗೌಡ, ಸಂಜಯ್‍ಗೌಡ ಕೊಟ್ಟಿಗೆಹಾರ, ಅಭಿಲಾಷ್,ರಾಘವೇಂದ್ರ, ರಚಿತಾ ರತ್ನಾಕರ್, ಕೆ.ಎಲ್ ರವಿ, ಅರವಿಂದ, ಗಗನ್, ಸಂಯಮ್, ದರ್ಶ ಮುಂತಾದವರು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ.
ಸ್ಥಾನಿಕ ಸಂಪಾದಕರು.
ಅವಿನ್ ಟಿವಿ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author