ಕೊಟ್ಟೂರು ಘಟಕಕ್ಕೆ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾಗಿ ಬಿ.ಆರ್.ವಿಕ್ರಮ್ ಅವರ ನೇಮಕ #avintvcom
1 min read
ಕೊಟ್ಟೂರು ಘಟಕಕ್ಕೆ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾಗಿ ಬಿ.ಆರ್.ವಿಕ್ರಮ್ ಅವರ ನೇಮಕ
ಕೊಟ್ಟೂರು ತಾಲ್ಲೂಕು ವೀರೇಶ್ ಸ್ವಾಮಿ ಮಂಡಳದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಬಿ.ಆರ್.ವಿಕ್ರಮ್ ಅವರನ್ನು ಕೊಟ್ಟೂರು ಘಟಕಕ್ಕೆ ಅಧ್ಯಕ್ಷರನ್ನಾಗಿ ಸೋಮವಾರ ನೇಮಕ ಮಾಡಲಾಯಿತು. ಬಿ.ಆರ್.ವಿಕ್ರಮ್ ಅವರು ಈ ಹಿಂದೆ ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡು, ತಮ್ಮದೇಯಾದ ವ್ಯಕ್ತಿತ್ವವನ್ನು ಹೊಂದಿರುವವರು. ಈ ಹಿಂದೆ ಕೊಟ್ಟೂರು ಜೆ.ಸಿ.ಐ. ನಲ್ಲಿ ಪ್ರಮುಖರಾಗಿ ಗುರುತಿಸಿಕೊಂಡವರು ಹಾಗೂ ಕೊಟ್ಟೂರಿನ ಸಾರ್ವಜನಿಕರಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಇವರು ಯುವಕರಲ್ಲಿ ಒಳ್ಳೆಯ ಸ್ಪೂರ್ತಿ ತುಂಬುವ ನಾಯಕರಾಗಿದ್ದು, ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದಾರೆ. ಇವರ ಜನಮುಖಿ ಸ್ನೇಹವನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿ ಕೊಟ್ಟೂರು ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ವಕೀಲರಾದ ಎಂ.ಎಂ.ಜೆ.ಸ್ವರೂಪಾನಂದ, ಬೋರ್ವೆಲ್ ತಿಪ್ಪೇಸ್ವಾಮಿ, ಕಾಮಶೆಟ್ಟಿ ಕೊಟ್ರೇಶ್, ಡಾ.ರಾಕೇಶ್, ಏರ್ಟೆಲ್ ಚಂದ್ರು, ಪ.ಪಂ. ಸದಸ್ಯ ಮಲ್ಲ, ಪ.ಪಂ. ಸದಸ್ಯ ಸಿದ್ದಯ್ಯ, ತಾ.ಪಂ. ಅಧ್ಯಕ್ಷ ಗುರುಮೂರ್ತಿ, ವಕೀಲ ಗುರು, ವೀರೇಶ್ ಗೌಡ್ರು, ಅಯ್ಯನಹಳ್ಳಿ ಸಿದ್ದಲಿಂಗಸ್ವಾಮಿ ಗ್ರಾ.ಪಂ. ಸದಸ್ಯರು, ಕಡ್ಲಿ ವೀರೇಶ್, ಮಾರುತಿ ಗ್ರಾ.ಪಂ. ಸದಸ್ಯರು, ಯಲ್ಲಪ್ಪ, ಮಂಡಕ್ಕಿ ಪ್ರಕಾಶ್, ಕೊನ್ನಾಪುರ ಬಸವರಾಜ ಸೇರಿದಂತೆ ಅಪಾರ ಜನ ಸ್ನೇಹಿತರು ಉಪಸ್ಥಿತರಿದ್ದು. ಅಭಿನಂದಿಸಿದರು.