ಪ್ರೌಢಶಾಲೆಯಲ್ಲಿ ನಟಸಾರ್ವಭೌಮ ಹಂದಿಗನೂರು ಸಿದ್ದರಾಮಪ್ಪ ಯುವ ಸಂಘದ ವತಿಯಿಂದ 158ನೇ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ#avintvcom
1 min read
ಸಿಂದಗಿ: ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ನಟಸಾರ್ವಭೌಮ ಹಂದಿಗನೂರು ಸಿದ್ದರಾಮಪ್ಪ ಯುವ ಸಂಘದ ವತಿಯಿಂದ 158ನೇ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಹಂದಿಗನೂರ ಸಿದ್ದರಾಮಪ್ಪ ಯುವ ಸಂಘದ ಅಧ್ಯಕ್ಷ, ಭಾಜಪ ಜಿಲ್ಲಾ ಅಸಂಘಟಿತ ವಲಯದ ಕಾರ್ಮಿಕ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಮಾತನಾಡಿ, ಆಧುನಿಕ ಕಾಲದಲ್ಲಿ ಭಾರತೀಯತೆಯ ಅಸ್ಮಿತೆಯನ್ನು ಒದಗಿಸಿದ ಪ್ರಮುಖರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು. ಅವರ ಜನ್ಮದಿನವನ್ನು ‘ರಾಷ್ಟ್ರೀಯ ಯುವದಿನ’ವನ್ನಾಗಿ ಆಚರಿಸುತ್ತಿದ್ದೇವೆ. ಅವರು ಒದಗಿಸಿದ ಭಾರತೀಯತೆಯ ಸತ್ವ ಎಂಥದ್ದು ಎಂಬುದನ್ನು ಅವರ ಜನ್ಮದಿನದ ಆಚರಣೆಯೂ ಧ್ವನಿಸುವಂತಿದೆ. ಮೊದಲ ಬಾರಿಗೆ ಜಗತ್ತಿನ ಎದುರಿನಲ್ಲಿ ಸ್ವಾಮಿ ವಿವೇಕಾನಂದರು ಭಾರತೀಯತೆಯನ್ನು ವ್ಯಾಖ್ಯಾನಿಸಿದ ಪರಿಯೇ ಅಪೂರ್ವವಾದುದು. ಸರ್ವಧರ್ಮ ಸಮ್ಮೇಳನದಲ್ಲಿ ಅವರು ಪಲುಕಿದ ಮೊದಲ ಪದಗಳೇ ಭಾರತದ ವಿಶ್ವಕುಟುಂಬದ ಕಲ್ಪನೆಯನ್ನು ಎತ್ತಿಹಿಡಿದವು ಎಂಬುದು ಗಮನಾರ್ಹ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವೇಕಾನಂದರ ಜೀವನ ಚರಿತ್ರೆಯ ಹೊತ್ತಿಗೆ ಯುವಕರಿಗೆ ಕರೆ ಎಂಬ ಒಂದು 150ರ ಪುಸ್ತಕಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ ಹಿರೇಮಠ, ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಗರಂಜಿನಿ ಸಂಚಾಲಕ ಡಾ. ಪ್ರಕಾಶ, ವಿದ್ಯಾರ್ಥಿ ಪರಿಷತ್ ಪ್ರಮುಖರಾದ ಮಲ್ಲು ಪೂಜಾರಿ, ಮೂಖ್ಯೋಪಾದ್ಯಾಯ ಜಗದೀಶ ಪಾಟೀಲ್, ಮುಖ್ಯ ಗುರುಮಾತೆ ಪ್ರೇಮ ನಾಯಕ್, ಶಿಲ್ಪಾ ಪ್ರಕಾಶ, ರಶ್ಮಿ ನಾಯಕ, ಸಾವಿತ್ರಿ ಮೋದಿ, ಮಾಳು ಹೊಸೂರ್, ಬಸವರಾಜ್ ಶಿರಲ್ಕರ್, ಬುಳಪ್ಪ ಡಿ, ಮನೋಹರ್ ರೂಗಿ, ರವಿ ತಳವಾರ, ಸುನಿಲ್ ನಾಗಾವಿ, ಪ್ರಶಾಂತ್ ಪೂಜಾರಿ, ಚಂದ್ರಕಾಂತ್ ಬಿರಾದಾರ, ಹನುಮಂತ ತಳವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಶಾಂತ ಪೂಜಾರಿ ಸ್ವಾಗತಿಸಿದರು. ಎಸ್ ಎ ರಾಠೋಡ ನಿರೂಪಿಸಿ ವಂದಿಸಿದರು.
ವರದಿ: ಮಹಾಂತೇಶ ನೂಲಾನವರ, ಸಿಂದಗಿ..