AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಆಹಾರ ದಾನ್ಯ ಕಿಟ್ ವಿತರಣೆ #avintvcom

1 min read
Featured Video Play Icon

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ  ಆಹಾರ ದಾನ್ಯ ಕಿಟ್ ವಿತರಣೆ

ಚಿಕ್ಕಮಗಳೂರು :  ಚಿಕ್ಕಮಗಳೂರು ಜಿಲ್ಲೆಯ ಏನ್, ಆರ್ , ಪುರ ತಾಲೂಕು ಬಾಳೆಹೊನ್ನೂರಿನ ರೇಣುಕಾ ನಗರ ಮತ್ತು ಅಕ್ಷರ ನಗರದ ವಾಸಿಗಳಿಗೆ  ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ನ ಸಂಸ್ಥಾಪಕಾಧ್ಯಕ್ಷರಾದ ಸುಜಾತ. ಎಂ.  ರವರ ಸೂಚನೆಯ  ಮೇರೆಗೆ ಸ್ಥಳೀಯ ಟ್ರಸ್ಟಿನ ಸ್ವಯಂ ಸೇವಕರ ಮೂಲಕ  ಆಹಾರ ಸಾಮಗ್ರಿಗಳನ್ನು ಖರೀದಿಸಲು  ತುಂಬಾ ತೊಂದರೆಯುಂಟಾಗಿರುವ ಕುಟುಂಬಗಳಿಗೆ ದಿನಸಿಯನ್ನು ವಿತರಿಸಲಾಯಿತು. ವಿಶೇಷವಾಗಿ ಸ್ಥಳೀಯ ಅಲೆಮಾರಿ  ಮತ್ತು ಅಂಗವಿಕಲ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಿ ಸ್ವಲ್ಪ ದಿನದ ಹಸಿವು ನೀಗಿಸುವ ನಿಟ್ಟಿನಲ್ಲಿ ಟ್ರಸ್ಟಿನ ಸ್ಥಳೀಯ ಸ್ವಯಂ ಸೇವಕರಾದ ಅರುಣ್, ನಾಗರಾಜ್ ಭಟ್, ಹರೀಶ್ ನೀಲಕಂಠ, ಸತೀಶ್ ರವರ ಮೂಲಕ ಅರ್ಹಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ, ನೊಂದ ಕುಟುಂಬಗಳಿಗೆ ನಮ್ಮ ಟ್ರಸ್ಟ್ ಸದಾ  ನಿಮ್ಮೊಂದಿಗೆ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧವಿದೆ, ಎಂಬುದನ್ನು ಸ್ವಯಂ ಸೇವಕರು ನಿರೂಪಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author