ಅಪಾರ ಪ್ರಮಾಣದ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ… #avintvcom
1 min read
ಅಕ್ರಮ ಶ್ರೀಗಂಧ ಸಾಗಣೆ : ಐವರ ಬಂಧನ
ಧಾರವಾಡ ( ರ್ನಾಟಕ ವರ್ತೆ) ಜ.07: ಅಪಾರ ಪ್ರಮಾಣದ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮ ಶ್ರೀಗಂಧ ಸಾಗಣೆ : ಐವರ ಬಂಧನ
ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು
ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ರ್ನಾಟಕ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ , ಸುಮಾರು 40 ಲಕ್ಷ ರೂ.ಮೌಲ್ಯದ , 370 ಕೆ.ಜಿ.ತೂಕದ ಶ್ರೀಗಂಧ ಸಾಗಿಸುತ್ತಿದ್ದ ಐವರನ್ನು ಜ.6 ರಂದು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಿಂದ ಶ್ರೀಗಂಧ ಹಾಗೂ ಅದನ್ನು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಾವೇರಿ,ಚಿತ್ರದರ್ಗ ಹಾಗೂ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ಕರ್ಯಾಚರಣೆ ಈ ಐದು ಜನರನ್ನು ಬಂಧಿಸಲಾಗಿದೆ.ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಖನದಾಳ ಗ್ರಾಮದ ಪರಸಪ್ಪ ಭಜಂತ್ರಿ,ಮಾರುತಿ ಭಜಂತ್ರಿ,ಕಲ್ಲಪ್ಪ ಶಿಂಧೆ,ಮಹದೇವ ಮಾಂಗ ಹಾಗೂ ಮೂಡಲಗಿಯ ರಾಜು ಭಜಂತ್ರಿ ಎಂದು ಗುರುತಿಸಲಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ , ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಅವರ ಮರ್ಗರ್ಶನದಲ್ಲಿ,ವಲಯ ಅರಣ್ಯಾಧಿಕಾರಿ ಆರ್.ಎಸ್.ಉಪ್ಪಾರ , ಅರಣ್ಯ ರಕ್ಷಕರಾದ ಡಿ.ಪಿ.ಮಣಕೂರ,ಎಂ.ಡಿ.ಲಮಾಣಿ,ಜಿ.ಎಂ.ಕಾಂಬಳೆ,ಸಿ.ಎಸ್.ರೊಟ್ಟಿ , ಸಿಬ್ಬಂದಿ ರ್ಗದ ವಿಠ್ಠಲ ಜೋನಿ,ರಘು ,ರಂಗಪ್ಪ ಕೋಳಿ,ಕಲ್ಲಪ್ಪ,ಎಸ್.ಪಿ.ಹಿರೇಮಠ, ಶಿವರಾಮ ಚವ್ಹಾಣ,ರಾಜೇಂದ್ರ, ಚಾಂದಬಾಷಾ ಮುಲ್ಲಾ ಮತ್ತಿತರರು ಈ ಕರ್ಯಾಚರಣೆ ಕೈಗೊಂಡಿದ್ದರು.ಈ ಕರ್ಯಾಚರಣೆಗೆ ಪೊಲೀಸ್ ಇಲಾಖೆಯು ತಾಂತ್ರಿಕ ಸಹಕಾರ ನೀಡಿದೆ ,ತನಿಖೆ ಮುಂದುವರೆದಿದೆ.
\