AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಪಾರ ಪ್ರಮಾಣದ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ… #avintvcom

1 min read
Featured Video Play Icon

ಅಕ್ರಮ ಶ್ರೀಗಂಧ ಸಾಗಣೆ : ಐವರ ಬಂಧನ

ಧಾರವಾಡ ( ರ‍್ನಾಟಕ ವರ‍್ತೆ) ಜ.07: ಅಪಾರ ಪ್ರಮಾಣದ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮ ಶ್ರೀಗಂಧ ಸಾಗಣೆ : ಐವರ ಬಂಧನ

ಧಾರವಾಡ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು

ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ರ‍್ನಾಟಕ ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ , ಸುಮಾರು 40 ಲಕ್ಷ ರೂ.ಮೌಲ್ಯದ , 370 ಕೆ.ಜಿ.ತೂಕದ ಶ್ರೀಗಂಧ ಸಾಗಿಸುತ್ತಿದ್ದ ಐವರನ್ನು ಜ.6 ರಂದು  ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.ಆರೋಪಿಗಳಿಂದ ಶ್ರೀಗಂಧ ಹಾಗೂ ಅದನ್ನು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಾವೇರಿ,ಚಿತ್ರದರ‍್ಗ ಹಾಗೂ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ಕರ‍್ಯಾಚರಣೆ  ಈ ಐದು ಜನರನ್ನು ಬಂಧಿಸಲಾಗಿದೆ.ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಖನದಾಳ ಗ್ರಾಮದ ಪರಸಪ್ಪ ಭಜಂತ್ರಿ,ಮಾರುತಿ ಭಜಂತ್ರಿ,ಕಲ್ಲಪ್ಪ ಶಿಂಧೆ,ಮಹದೇವ ಮಾಂಗ ಹಾಗೂ ಮೂಡಲಗಿಯ ರಾಜು ಭಜಂತ್ರಿ ಎಂದು ಗುರುತಿಸಲಾಗಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ , ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಅವರ ಮರ‍್ಗರ‍್ಶನದಲ್ಲಿ,ವಲಯ ಅರಣ್ಯಾಧಿಕಾರಿ ಆರ್.ಎಸ್.ಉಪ್ಪಾರ , ಅರಣ್ಯ ರಕ್ಷಕರಾದ ಡಿ.ಪಿ.ಮಣಕೂರ,ಎಂ.ಡಿ.ಲಮಾಣಿ,ಜಿ.ಎಂ.ಕಾಂಬಳೆ,ಸಿ.ಎಸ್.ರೊಟ್ಟಿ , ಸಿಬ್ಬಂದಿ ರ‍್ಗದ ವಿಠ್ಠಲ ಜೋನಿ,ರಘು ,ರಂಗಪ್ಪ ಕೋಳಿ,ಕಲ್ಲಪ್ಪ,ಎಸ್.ಪಿ.ಹಿರೇಮಠ, ಶಿವರಾಮ ಚವ್ಹಾಣ,ರಾಜೇಂದ್ರ, ಚಾಂದಬಾಷಾ ಮುಲ್ಲಾ ಮತ್ತಿತರರು ಈ ಕರ‍್ಯಾಚರಣೆ ಕೈಗೊಂಡಿದ್ದರು.ಈ ಕರ‍್ಯಾಚರಣೆಗೆ ಪೊಲೀಸ್ ಇಲಾಖೆಯು ತಾಂತ್ರಿಕ ಸಹಕಾರ ನೀಡಿದೆ ,ತನಿಖೆ ಮುಂದುವರೆದಿದೆ.

\

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author