ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಖಡ್ಡಾವಾಗಲಿ-ಗುನ್ನಳ್ಳಿ ರಾಘವೇಂದ್ರ ಬಳ್ಳಾರಿ ಜಿಲ್ಲೆ ಕೂಡ್ಲಿಗಿ#avintvcom
1 min readಜನಪ್ರತಿನಿಧಿಗಳ,ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆ ಖಡ್ಡಾವಾಗಲಿ-ಗುನ್ನಳ್ಳಿ ರಾಘವೇಂದ್ರ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ:ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕೆಂದರೆ.ಮೊದಲು ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಹಾಗೂ ಎಲ್ಲಾ ಹಂತದ ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದು ಖಡ್ಡಾಯಗೊಳಿಸಬೇಕಿದೆ. ಶೀಘ್ರವೇ ಈ ಕಾನೂನು ಜಾರಿಯಾಗಬೇಕು ಎಂದು, ಎಸ್.ಡಿ.ಎಮ್.ಸಿ ಸಮನ್ವಯ ಸಮಿತಿ ರಾಜ್ಯ ಮುಖಂಡ,ಗುನ್ನಳ್ಳಿ ರಾಘವೇಂದ್ರ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.ಅವರು ಮಂಗಳವಾರದಂದು ಕೂಡ್ಲಿಗಿ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಗೆ ಬೆಟ್ಟಿ ನೀಡಿದ್ದರು,ವಿದ್ಯಾರ್ಥಿಗಳ ಪೋಷಕರ ಒತ್ತಾಯದ ಮೇರೆಗೆ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿವೆ.ಇತರೆ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ, ಕೂಡ್ಲಿಗಿ ತಾಲೂಕಿನಲ್ಲಿ ಗಣನೀಯ ಶೈಕ್ಷಣಿಕ ಪ್ರಗತಿಯಾಗಿಲ್ಲ.
ಅದಕ್ಕೆ ಕೆಲವು ಸೋಂಬೇರಿ ಶಿಕ್ಷಕರೇ ಕಾರಣರಾಗಿದ್ದಾರೆ, ಅವರಿಂದಾಗಿ ಇಡೀ ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯಾಗಲಿದೆ.ಸಂಬಂಧಿಸಿದ ಉನ್ನತಾಧಿಕಾರಿಗಳು ಅವರನ್ನ ಪತ್ತೆಹಚ್ಚಿ,ಅಧಿಕಾರಿಗಳು ಅವರಿಗೆ ತಕ್ಕ ಶಿಕ್ಷಣ ನೀಡಬೇಕಿದೆ ಎಂದರು.
ಸರ್ಕಾರಿ ಸಂಬಳ ಪಡೆಯೋ ಪ್ರತಿಯೊಬ್ಬ ನೌಕರರು, ಮೊದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಿದೆ.ಸರ್ಕಾರಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಹಾಗೂ ಸರ್ಕಾರಿ ನೌಕರಿಗೆ ನೇಮಕಾತಿ ಅರ್ಜಿ ಹಾಕುವ ಸಂದರ್ಭದಲ್ಲಿ.ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ, ನೀಡುವಂತಹ ಕಾನೂನು ಶೀಘ್ರವೇ ಜಾರಿ ತರಬೇಕಿದೆ.2022-23ರ ಶೈಕ್ಷಣಿಕ ವರ್ಷದಿಂದ ಎಲ್ಲಾ ಸರ್ಕಾರಿ ನೌಕರರು,ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಖಡ್ಡಾಯ ಗೊಳಿಸಲೇಬೇಕು.ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತವೆ, ಸರ್ಕಾರ ಸರ್ಕಾರಿ ಶಾಲೆಗಳ ಮೇಲೆ ಕಾಳಜಿ ತೋರುವುದಾದರೆ ಹಾಗೂ ಸರ್ಕಾರಿ ಶಿಕ್ಷಕರ ಉಳಿವಿಗಾಗಿ ಶೀಘ್ರವೇ ಕಾನೂನು ಜಾರಿತರಲೇಬೇಕು.
ಸರ್ಕಾರಿ ಸಂಬಳ ಪಡೆಯೋ ಶಿಕ್ಷಕರು ತಮ್ಮ ಶಾಲೆಗಳ ಉಳಿವಿಗಾಗಿ ಹಾಗೂ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ.ಮೊದಲು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಲ್ಲಿ ಸೇರಿಸಬೇಕಿದೆ ಎಂದು ಗುನ್ನಳ್ಳಿ ರಾಘಣ್ಣ ನುಡಿದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಎಲೆ.ನಾಗರಾಜ ಹಾಗೂ ಪ್ರೌಢಶಾಲೆಯ ಮುಖ್ಯಗುರುಗಳಾದ ಸಿದ್ಲಿಂಗಯ್ಯ ಸ್ವಾಮಿ,ಮತ್ತು ಪ್ರೌಢ ಶಾಲಾ ಸಿಬ್ಬಂದಿ ಇದ್ದರು.