लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ವಿರೇಂದ್ರ ಪಬ್ಲಿಕ್ ಶಾಲೆಯಲ್ಲಿ ಸರಕಾರಿ ಪ್ರಾಥಮಿಕ ಪ್ರೌಡ ಶಾಲೆ #avintvcom

1 min read
Featured Video Play Icon

ವಿಧ್ಯಾಗಮ ಮಾಸಿಕ ಸಭೆ ಚಿಂಚೋಳಿ

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ವಿರೇಂದ್ರ ಪಬ್ಲಿಕ್ ಶಾಲೆಯಲ್ಲಿ ಸರಕಾರಿ ಪ್ರಾಥಮಿಕ ಪ್ರೌಡ ಶಾಲೆ ಅನುದಾನ ರಹಿತ ಸಹಿತ ಶಾಲೆಗಳ ವಿಧ್ಯಾಗಮಾ-2ರ ಮಾಸಿಕ ಸಭೆ ತಾಲೂಕ ಶಿಕ್ಷಣಾಧಿಕಾರಿಗಳಾದ ದತ್ತಪ್ಪಾ ತಳವಾರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಹೌದು ಈ ಸಂದರ್ಭದಲ್ಲಿ ಚಿಂಚೊಳಿ ಕ್ಷೇತ್ರ ಶಿಕ್ಷಾಧಿಕಾರಿಗಳಾದ ದತ್ತಪ್ಪ ತಳವಾರ ಮಾತನಾಡಿ  ಕಡ್ಡಾಯವಾಗಿ ಎಲ್ಲಾ ಶಿಕ್ಷಕರು ಕೋವಿಡ್-19 ಪರಿಕ್ಷೆ ತಪ್ಪದೆ ಮಾಡಿಕೊಳ್ಳಬೇಕು 6ರಿಂದ 9ತರಗತಿ ಮಕ್ಕಳಿಗೆ ವಿಧ್ಯಾಗಾಮ ಕಡ್ಡಾಯ ಶಿಕ್ಷಣ ಕೊಡಬೇಕು ಶಿಕ್ಷಕರ ವೇಳಾಪಟ್ಟಿ ಮುಖ್ಯಗುರುಗಳು ನೀಡಬೇಕು ಜೆಜೆಎಮ್ ಯೋಜನೆ ಅಡಿಯಲ್ಲಿ ಪಿಡಿಓಗಳು ಶಾಲೆಗಳಿಗೆ ಶೌಚಾಲಯ ಕುಡಿಯುವ ನೀರು ಶಾಲೆ ಸೇನಿಟೇಜರ್ ಮಾಡಿಕೊಡುತ್ತಾರೆ.

ಶಾಲಾ ಶೌಚಾಲಯಗಳು ಎನ್ ಆರ್ ಇ ಜಿ. ಯೋಜನೆ ಅಡಿಯಲ್ಲಿ 30ಮಕ್ಕಳಿಗೆ ಒಂದು ಶೌಚಾಲಯ ನಿರ್ಮಾಣ ಮಾಡುತ್ತಾರೆ

10ನೇಯ ತರಗತಿ ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುತ್ತಾರೆ ವಿಧ್ಯಾರ್ಥಿಗಳು ಹಾಜರಾದ ಬಗ್ಗೆ ಎಸ್ ಎ ಟಿ ಎಸ್ ನಲ್ಲಿ ಸೇರಿಸುವುದು ಕಡ್ಡಾಯವಾಗಿದೆ ಎಲ್ಲಾ ಮಕ್ಕಳಿಗೆ ಮಾಸ್ಕ್ ಮತ್ತು ಸೇನಿಟೇಜರ್ ಕಡ್ಡಾಯ ಎಂದು ತಿಳಿಸಬೇಕು ಶಾಲಾ ಸ್ವಚ್ಚತೆ ಅವರಣ ಸ್ವಚ್ಚತೆ ಕಡ್ಡಾಯವಾಗಿ ಇಡಬೇಕು ಎಲ್ಲಾ ಶಿಕ್ಷಕರು ಶಿಸ್ತುಬದ್ಧವಾಗಿ ಕೆಲಸ ಮಾಡಿ ಮನಸ್ಸು ಸಾಕ್ಷಿಯಾಗಿ ಕೆಲಸ ಮಾಡಿ ಒಂದು ವೇಳೆ ಹೇಳದೆ ಕೇಳದೆ ಶಾಲೆಗೆ ಶಿಕ್ಷಕರು ಬರದೆ ಹೋದಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು.

ಎಲ್ಲಾ ಶಿಕ್ಷಕರಿಗೆ ಮುಖ್ಯಗುರುಗಳಿಗೆ ಶಾಲೆ ಯಾವ ತರಹ ನಡೆಸಬೇಕು ಕೋವಿಡ್-19ನಿಯಮ ಪಾಲನೆ ಯಾವ ತರಹ ಮಾಡಬೇಕು ಎಂದು ವಿವರವಾಗಿ

ಶಿಕ್ಷಣಾಧಿಕಾರಿ ದತ್ತಪ್ಪಾ ತಳವಾರ ಹೇಳಿದರು.

ನಮ್ಮ ಸಂಸಾರವಿದೆ ಯಾರ ವೇತನ ನಿಲ್ಲಿಸಬೇಡಿ ಶಿಕ್ಷಕರ ಸರಿಯಾದ ಸಮಯಕ್ಕೆ ವೇತನ ಜಾರಿ ಮಾಡಿ ಶಿಕ್ಷಣಾಧಿಕಾರಿಯ ಕಛೇರಿಯ ಸಿಬ್ಬಂದಿ ವರ್ಗದವರಿಗೆ ಒಳ್ಳೆಯ ಕೆಲಸ ಶಿಕ್ಷಕರಿಗೆ ಮರ್ಯಾದೆ ಕೊಡುವುದು ಮೊದಲು ಹೇಳಿ ನಮ್ಮ ಶಿಕ್ಷಕರ ಸಮಸ್ಯೆ ನಾವು ಸುಧಾರಣೆ ಮಾಡಿಕೊಳ್ಳುತ್ತೇವೆ ವೇತನ ಏತಕ್ಕಾಗಿ ನಿಲ್ಲಿಸಿದ್ದೀರಿ ಶಿಕ್ಷಕರದು ತಾವು ದಯವಿಟ್ಟು ಶಿಕ್ಷಕರ ವೇತನ ಕೊಡಿ ಹಾಗೂ ತಮ್ಮ ಸಿಬ್ಬಂದಿ ವರ್ಗದವರಿಗೆ ಬುದ್ದಿವಾದ ಹೇಳಿ ಎಂದು ಮಹ್ಮದ್ ಫಾರೂಕ್ ಮುಖ್ಯಗುರುಗಳು ಹೇಳಿದರು.

ತದನಂತರ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ

ಶ್ರೀಶೈಲ,ಜಯಪ್ಪಾ ಚಾಪಲ್,ಶಿಕ್ಷಕರ ತಾಲೂಕ ಅಧ್ಯಕ್ಷ ಸುರೇಶ ಕೊರವಿ,ಯೂಸುಫ್ ಅಲಿ,ಜಗನ್ನಾಥರೆಡ್ಡಿ ರಂಜೋಳ,ನರಸಪ್ಪಾ,ಗುರುನಾಥ, ಹಣಮಂತಗೌಡ,ಸಂಗಪ್ಪ,ಆನಂದ,ಗೋಪಾಲ, ಸರೋಜನದೇವಿ,ಶಶಿಕಲಾ,ರೀಜ್ವಾನಾ ಬೇಗಂ,ಇದ್ದರು.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author