ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಶಾಸಕರ ನಿವಾಸದ ಬಳಿ ಹಮ್ಮಿಕೊಂಡ ಚಿಂಚೊಳಿ ವಿಧಾನ ಸಭಾ #avintvcom
1 min read
ಸ್ಲಗ್:- ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಸಮಾರಂಭ
ಸ್ಥಳ:- ಚಿಂಚೊಳಿ
ವರದಿ:- ಶಿವಕುಮಾರ ತಳವಾರ
ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಶಾಸಕರ ನಿವಾಸದ ಬಳಿ ಹಮ್ಮಿಕೊಂಡ ಚಿಂಚೊಳಿ ವಿಧಾನ ಸಭಾ ಕ್ಷೇತ್ರದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರಿಗೆ ಕಲಬುರಗಿ ಸಂಸದರಾದ ಡಾ// ಉಮೇಶ ಜಾಧವ್ ಹಾಗೂ ಚಿಂಚೊಳಿ ಮತಕ್ಷೇತ್ರದ ಶಾಸಕರಾದ ಶ್ರೀ ಅವಿನಾಶ ಜಾಧವ್ ರವರು ಸಾಲು ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು
ಹೌದು ಈ ಸಂದರ್ಭದಲ್ಲಿ ಕಲಬುರಗಿ ಸಂಸದರಾದ ಡಾ// ಉಮೇಶ್ ಜಾಧವ್ ರವರು ಮಾತನಾಡಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭಾಷಯ ಹೆಳಿ ನೂತನವಾಗಿ ಚುನಾಯಿತಿಗೊಂಡ ಗ್ರಾ.ಪಂ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು, ನಿವು ಜನರಿಂದ ಚುನಾಯಿತ ಗೊಂಡಿದ್ದಿರಿ, ಜನರು ನಿಮ್ಮ ಹತ್ತಿರ ಅವರ ಸಮಸ್ಯೆ ಗಳನ್ನು ತೆಗೆದುಕೊಂಡು ಬರುತ್ತಾರೆ, ಅವರ ಮೂಲಭೂತ ಸೌಕರ್ಯಗಳು ವದಗಿಸಿ ಕೊಡಬೇಕು ಮಹತ್ಮಾ ಗಾಂಧಿಜಿಯವರು ಹೆಳಿದಂತೆ, ಬಿಜಲಿ ಸಡಕ ಪಾನಿ ಸ್ವಾಸ್ತ ಶಿಕ್ಷಾ ಸೌಲಭ್ಯಗಳನ್ನು ಜನರಿಗೆ ಅನುಕೂಲ ಮಾಡುವುದರ ಜತೆಗೆ ಚಿಂಚೋಳಿ ತಾಲೂಕವನ್ನು ಗ್ರಾಮಗಳ ಅಭಿವೃದ್ಧಿ ಮಾಡಿದ ಮಾದರಿ ತಾಲ್ಲೂಕನ್ನಾಗಿ ಮಾಡಬೇಕು, ರೇಷನ್ ಕಾರ್ಡ ಇಲ್ಲದವರಿಗೆ ರೇಷನ್ ಕಾರ್ಡ ವ್ಯವಸ್ಥೆ ಮಾಡಿಸಿಕೊಡಬೇಕು. ಜನ ಸೇವೆ ಮಾಡುವದರ ಜತೆಗೆ ಗ್ರಾಮಗಳನ್ನು ಹಳ್ಳಿಗಳು ಉದ್ಧಾರ ಮಾಡಿ ಮುಂದಿನ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಆರಿಸಿಬರಬೆಕೆಂದು ಹೇಳಿದರು
ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕರಾದ ಅವಿನಾಶ ಜಾಧವ್, ಜಿಲ್ಲಾ ಪಂಚಾಯತ ಸದಸ್ಯರಾದ ಸಂಜಿವನ ಯಾಕಾಪೂರ, ಶ್ರೀ ಮಂತ ಕಟ್ಟಿಮನಿ ಸಂತೋಷ ಗಡಂತಿ,ಲಕ್ಷ್ಮಣ ಅವಂಟಿ, ಭಿಮಸೆಟ್ಟಿ ಮುರುಡ, ಊಮಾ ಪಾಟಿಲ್, ರಾಮರೆಡ್ಡಿ, ಅಜೀತ್ ಪಾಟಿಲ್, ಶಿವಕುಮಾರ ಪೋಚಾಲ್,ಸತೀಸ್ ರೆಡ್ಡಿ ರಾಜಕುಮಾರ್ ತಳವಾರ ,ಪವನಕುಮಾರ ಗೊಪನಪಳ್ಳಿ ,ಹಾಗೂ ಎಲ್ಲಾ ಕಾರ್ಯಕರ್ತರು ಈ ಸಮಾರಂಭದಲ್ಲಿ ಪಾಲಗೊಂಡಿದ್ದರು
ವರದಿ:- ಶಿವಕುಮಾರ ತಳವಾರ ಸುಲೇಪೇಟ