ಜೇಸಿ ಭವನದಲ್ಲಿ ಏರ್ಪಡಿಸಿದ್ದ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ#avintvcom
1 min read
ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ
ಸಂಘ ಸಂಸ್ಥೆಗಳು ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಾಗ ಉತ್ತಮ ಹೆಸರು ಗಳಿಸುವ ಜತೆಗೆ ಜನರಿಗೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಜೇಸಿ ಭವನದಲ್ಲಿ ಏರ್ಪಡಿಸಿದ್ದ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 1 ವರ್ಷದಿಂದ ಜನರ ಬದುಕೇ ದುಸ್ತರವಾಗಿದೆ. ಸಮಾಜ ಸೇವಕರು, ಸಂಘ ಸಂಸ್ಥೆಗಳು ಹಾಗೂ ಸರಕಾರದ ನೆರವಿಗೆ ಕೈ ಚಾಚುವ ಹಂತಕ್ಕೆ ಬಂದಿದ್ದಾರೆ. ಉಳ್ಳವರು ಸಂಘ ಸಂಸ್ಥೆಗಳ ನೆರವಿನೊಂದಿಗೆ ಬಡವರ ಕಷ್ಟಕ್ಕೆ ಸ್ವಂಧಿಸುವ ಗುಣತೋರಬೇಕು. ತಾಲೂಕಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಷ್ಟಕಾಲದಲ್ಲಿರುವ ಜನರೊಂದಿಗೆ ಬೆರೆತು ಅವರಿಗೆ ನೆರವು ನೀಡಿದಲ್ಲಿ ಸಂಘ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಕುನ್ನಳ್ಳಿ ನೂತನ ಅಧ್ಯಕ್ಷರಾಗಿ, ಶ್ರೇಷ್ಠಿ ಕಾರ್ಯದರ್ಶಿಯಾಗಿ, ಸುಧಾ ಚಂದ್ರಶೇಖರ್, ಜೇಸಿರೇಟ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜೇಸಿಐ ವಲಯ ಅಧ್ಯಕ್ಷ ಭರತ್ ಎನ್.ಆಚಾರ್, ಬೆಂಗಳೂರಿನ ನವ ಚೈತನ್ಯ ಟ್ರಸ್ಟ್ ಅಧ್ಯಕ್ಷ ಕೆಂಬತ್ಮಕ್ಕಿ ಮನೋಜ್, ಎಂ.ಬಾಬು, ಎಚ್.ಕೆ.ಯೋಗೇಶ್, ಪಿ.ಕೆ.ಹಮೀಧ್, ವಿದ್ಯಾರಾಜು, ಸವಿತಾ ರವಿ, ದೀಪಿಕಾ ಪ್ರಸಾಧ್, ನಾಜಿಮ್ ಮತ್ತಿತರರಿದ್ದರು.