ಕಸ್ತೂರಿ ರಂಗನ್ ವರದಿ ಹುಲಿ ಯೋಜನೆ , 41, ರಾಷ್ಟ್ರೀಯ ಉದ್ಯಾನವನ ಹತ್ತು ಹಲವು ಯೋಜನೆಗಳು ಹಾಗೂ ವರದಿಗಳು #avintvcom
1 min read
Kasturi Rangan Report ಮಾದವ್ ಗಾಡ್ಗಿಲ್ ವರದಿ, ಕಸ್ತೂರಿ ರಂಗನ್ ವರದಿ ಹುಲಿ ಯೋಜನೆ , ಆನೆ ಕಾರಿಡಾರ್, ಕರಡಿಧಾಮ, ಡೀಮ್ಡ್ ಫಾರೆಸ್ಟ್, 41, ರಾಷ್ಟ್ರೀಯ ಉದ್ಯಾನವನ ಮುಂತಾದ ಹತ್ತು ಹಲವು ಯೋಜನೆಗಳು ಹಾಗೂ ವರದಿಗಳು ಮಲೆನಾಡಿನ ಬದುಕು ಹಾಗೂ ಜನರನ್ನು ಶೋಷಿತ ರನ್ನಾಗಿ ಮಾಡುತ್ತಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದ ವ್ಯಾಪಕ ಹಣವನ್ನು ತಂದು ಅರಣ್ಯ ಇಲಾಖೆ ಹಾಗೂ NGO ಮೂಲಕ ಹಣವನ್ನು ಹರಿಸಿ ಹಣದಿಂದ ಲೂಟಿ ಹೊಡೆದ ಅಧಿಕಾರಿಗಳು ಹಾಗೂ NGO ಕೊನೆಗೆ ಮಲೆನಾಡಿನ ಜನರ ಬದುಕಿಗೆ ಬೆಂಕಿ ಇಡ ತೊಡಗಿವೆ, ಯಾವುದೇ ಯೋಜನೆಗಳು ಇರಲಿ ಅಥವಾ ವರದಿಗಳು ಬರಲಿ ಆದರೆ ಅವೆಲ್ಲವೂ ಅರಣ್ಯ ಇಲಾಖೆಯ ಜಾಗದಲ್ಲಿ ಮಾತ್ರ ನಡೆಯಲಿ, ಸಾವಿರಾರು ವರ್ಷದಿಂದ ಮಲೆನಾಡಿನಲ್ಲಿ ಬದುಕುತ್ತಿರುವ ಜನರ ಕಂದಾಯದ ಭೂಮಿ ಮೇಲೆ ಅಲ್ಲ, ಇಂತಹ ಯೋಜನೆಗಳ ಮೂಲಕ ಮಲೆನಾಡಿನ ನೆಮ್ಮದಿ ಹಾಳುಗೆಡವಿ ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ, ಇಂತಹ ವರದಿಗಳು ಹಾಗೂ ಯೋಜನೆಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ನಿಲ್ಲದಿದ್ದರೇ ಮುಂದಿನ ದಿನಗಳಲ್ಲಿ ಭೂಪಟದಿಂದ ನಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮಗಳು ನಕ್ಷೆಯಿಂದ ಅಳಿಸಿ ಹೋಗಿ ಮಲೆನಾಡು ಕೇವಲ ಅರಣ್ಯ ಪ್ರದೇಶವಾಗಿ ಜನ ರಹಿತ ವಾಗಲಿದೆ, ಇದೆಲ್ಲದರ ವಿರುದ್ಧ ನಾವು ಈಗಲೇ ಪಕ್ಷಭೇದ ಮರೆತು ಎಲ್ಲ ಮಲೆನಾಡಿಗರು ಎಂಬ ಭಾವದಿಂದ ಹೋರಾಟಕ್ಕೆ ಧುಮುಕಿ ಬೇಕಿದೆ,
ಯಾವುದೇ ಸರ್ಕಾರದ ತಪ್ಪು ಅನ್ನೋದಕ್ಕಿಂತ ಅಧಿಕಾರಿಗಳು ತಮ್ಮ ವಿವೇಚಾನನೂಸಾರ ಅವರಿಗೆ ಮಲೆನಾಡಿಗರ ಬಗ್ಗೆ ಮಲೆನಾಡಿಗರ ಬದುಕಿನ ಬಗ್ಗೆ ಅವಿನಾಭಾವ ಸಂಬಂಧ ಅಥವಾ ಸಂಸ್ಕೃತಿಯ ಬಗ್ಗೆ ಅಜ್ಞಾನದಿಂದ ಹಾಗೆ ಅವರ ಸ್ವಹಿತ ಲಾಭಕ್ಕೋಸ್ಕರ ಮಾಡಿರುವ ವರದಿಗಳು ಹಾಗೂ ಯೋಜನೆಗಳಿಂದಾಗಿ ಇಂದು ನಾವು ಬೀದಿಗೆ ಬೀಳುವಂತಹ ಪರಿಸ್ಥಿತಿ ಎದುರಾಗಿದೆ,
ಭೂಮಾಲಿಕರು ಕೂಲಿ ಕಾರ್ಮಿಕರಾಗಿ ದುಡಿಯುವಂತಾಗಿ ಅದೆಷ್ಟು ಜನ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ,
ನೆಮ್ಮದಿಯಿಂದ ನರಕದೆಡೆಗೆ ತಳ್ಳುತ್ತೀರುವ ಕಸ್ತೂರಿ ರಂಗನ್ ವರದಿಯನ್ನು ಕೇವಲ ಅರಣ್ಯ ಪ್ರದೇಶದೊಳಗೆ ಮಾತ್ರ ಅನ್ವಯ ಮಾಡಬೇಕೆಂದು ನಾವೆಲ್ಲರೂ ಜನಜಾಗೃತಿಯ ಮೂಲಕ ಇಡೀ ಮಲೆನಾಡಿಗರು ಹೋರಾಟ ಮಾಡಿ ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಕಟ್ಟಿರುವ ಮಲೆನಾಡನ್ನು ನಾವು ವರದಿ ಯೋಜನೆಗಳಿಂದ ತಪ್ಪಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿರುವುದು ಪ್ರತಿಯೊಬ್ಬ ಮಲೆನಾಡಿಗರ ಕರ್ತವ್ಯವಾಗಿದೆ.