ಕಂಪ್ಲಿ ವಕೀಲರ ಬಳಗದಿಂದ ಕಂದಾಯ ಇಲಾಖೆ ಎಸಿಎಸ್ ಗೆ ಆಕ್ಷೇಪಣೆ ಸಲ್ಲಿಕೆ! #avintvcom
1 min read
ಕಂಪ್ಲಿ ವಕೀಲರ ಬಳಗದಿಂದ ಕಂದಾಯ ಇಲಾಖೆ ಎಸಿಎಸ್ ಗೆ ಆಕ್ಷೇಪಣೆ ಸಲ್ಲಿಕೆ!
ಬೆಂಗಳೂರು: ದಿ: 28-12-2020 ರಂದು ಬೆಂಗಳೂರಿನ ಬಹು ಮಹಡಿಗಳ ಕಟ್ಟಡದಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಮಹೇಂದ್ರ ಜೈನ್ ಅವರನ್ನ ಕಂಪ್ಲಿ ತಾಲೂಕು ವಕೀಲರ ಬಳಗದಿಂದ ಹಿರಿಯ ವಕೀಲರಾದ ಶ್ರೀ ಕೆ. ಪ್ರಭಾಕರ್ ರಾವ್ ರವರ ನೇತೃತ್ವದ ನಿಯೋಗವು ಭೇಟಿ ಮಾಡಿ ನೂತನ ವಿಜಯನಗರ ಜಿಲ್ಲೆಯಿಂದ ಕಂಪ್ಲಿ ತಾಲೂಕನ್ನ ಕೈಬಿಟ್ಟು ಬಳ್ಳಾರಿ ಜಿಲ್ಲೆಯಲ್ಲೇ ಮುಂದುವರೆಸಿರುವುದನ್ನ ವಿರೋಧಿಸಿ ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ವಕೀಲರಾದ ಮೋಹನ್ ಕುಮಾರ್ ದಾನಪ್ಪ, ಸಿ.ರುದ್ರಪ್ಪ, ಕೆ.ಹೆಚ್.ಹುಲುಗಪ್ಪ, ಸಿ.ಶಿವಪ್ಪ, ಹರೀಶ್ ಅಯೋಧಿ, ಗಾದಿಲಿಂಗ ರವರು ಆಕ್ಷೇಪಣೆ ಸಲ್ಲಿಸಿದರು