लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವಿದೇಶದಲ್ಲೂ ಕನ್ನಡದ ಸುಗಂಧ ಚೆಲ್ಲುತ್ತಿರುವ ಉತ್ತರ ಕರ್ನಾಟಕ ಬಳಗದ ಕಾರ್ಯ ಶ್ಲಾಘನೀಯ. #avintvcom

1 min read
Featured Video Play Icon

ವಿದೇಶದಲ್ಲೂ ಕನ್ನಡದ ಸುಗಂಧ ಚೆಲ್ಲುತ್ತಿರುವ ಉತ್ತರ ಕರ್ನಾಟಕ ಬಳಗದ ಕಾರ್ಯ ಶ್ಲಾಘನೀಯ.

 

ಕತಾರ್ ನಲ್ಲಿರುವ ಉತ್ತರ ಕರ್ನಾಟಕ ಬಳಗದವರು ಹಮ್ಮಿಕೊಂಡ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಗೂಗಲ್ ಮೀಟ್ ಮೂಲಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಬಳಗದವರು ನಮ್ಮ ಕರುನಾಡಿನ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಉಳಿಸಿ-ಬೆಳೆಸಲು ಕತಾರ್ ನಲ್ಲಿ ಮಾಡುತ್ತಿರುವ ಕಾರ್ಯ ಮೆಚ್ಚುವಂತದ್ದು.

ಇದಲ್ಲದೇ, ಕತಾರ್ ನಲ್ಲಿರುವ ಉತ್ತರ ಕರ್ನಾಟಕ ಭಾಗದ ಜನರಿಗೆ ಜಾಗೃತಿ ಮೂಡಿಸುವಂತಹ ರಕ್ತದಾನ ಶಿಬಿರ, ಶಿಕ್ಷಣ ತರಬೇತಿ, ಹಣಕಾಸು ಸಹಾಯ ಹೀಗೆ ಹತ್ತು ಹಲವು ಜನಪರ ಕಾರ್ಯಗಳನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.

ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರು ಈ ಹಿಂದೆ ಕತಾರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನಿವಾಸಿ ಭಾರತೀಯರ ಹಿತ ದೃಷ್ಟಿಯಿಂದ ಕೌಶಲ್ಯಾಭಿವೃದ್ದಿ, ಮೂಲಸೌಕರ್ಯ, ಹಣಕಾಸು ಸೇರಿದಂತೆ ಇನ್ನಿತರ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಅವರ ಪ್ರೀತಿ ವಿಶ್ವಾಸಕ್ಕೆ ಅಂದು ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮಗಳಿಗೆ ಸಾಕಷ್ಟು ಹೂಡಿಕೆ ಹರಿದು ಬಂದಿದೆ ಎಂದು ಹೇಳಿದರು.

ವಿದೇಶದಲ್ಲಿ ನಮ್ಮ ಸಾಹಿತ್ಯ, ಸಂಗೀತ, ಕಲೆ, ಆಚಾರ ವಿಚಾರವನ್ನು ಶ್ರೀಮಂತಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸರ್ವ ಕನ್ನಡಿಗರಿಗೆ ಹೃದಯಾಂತರಾಳದ ವಂದನೆಗಳು ತಿಳಿಸಿದರು.

ಈ  ಸಮಾರಂಭದಲ್ಲಿ ಕತಾರ್ ನಲ್ಲಿರುವ ಉತ್ತರ ಕರ್ನಾಟಕ ಬಳಗದ ಅಧ್ಯಕ್ಷರಾದ ಶ್ರೀ ಶಶಿಧರ ಹೆಬ್ಬಾಳ ಮತ್ತು ಸರ್ವ ನಿರ್ದೇಶಕರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

परदेशातही कन्नडचे नावलौकिक करणाऱ्या उत्तर कर्नाटकच्या रहिवाशांचे कार्य कौतुकास्पद.

कतारमधील उत्तर कर्नाटकच्या रहिवाशांनी आयोजित दुसर्‍या वर्षाच्या वर्धापनदिन गूगल मीट द्वारे राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी उद्घाटन करून, कार्यक्रमास उद्देशून संबोधित केले.

उत्तर कर्नाटकाचे रहिवाशांनी कर्नाटकची संस्कृती आणि वारसा जपण्यासाठी व त्यांना प्रोत्साहन देण्यासाठी कतारमध्ये करत असलेल्या कार्याचे कौतुक आहे. याव्यतिरिक्त, रक्तदान शिबिर, शिक्षण प्रशिक्षण, आर्थिक सहाय्य इत्यादींसारख्या अनेक परोपकारी कार्य त्यांनी कतारमधील उत्तर कर्नाटकच्या जनतेसाठी जागरुकता वाढवण्यासाठी विश्वासूपणे कार्य करीत आहेत.

यापूर्वीच्या कतारच्या दौऱ्यावेळी पंतप्रधान नरेंद्र मोदी जी, यांनी अनिवासी भारतीयांच्या फायद्यासाठी कौशल्य विकास, पायाभूत सुविधा आणि वित्त यासह इतर अनेक करारावर स्वाक्षऱ्या केल्या. त्यांच्या प्रेम आणि आत्मविश्वासामुळे मेक इन इंडिया आणि डिजिटल इंडियामध्ये बरीच गुंतवणूक झाली आहे असे सांगितले.

परदेशात आपले साहित्य, संगीत, कला आणि अभ्यास समृद्ध करण्यासाठी परिश्रम घेत असलेल्या सर्व कन्नडिगांचे मनापासून अभिवादन  केले.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author