लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ” ಅಭಿಯಾನದ ಕರಪತ್ರ ಬಿಡುಗಡೆ ಮಾಡಿದರು #avintvcom

1 min read
Featured Video Play Icon

ವಿಶ್ವಜ್ಯೋತಿ ಪ್ರತಿಷ್ಠಾನ ವತಿಯಿಂದ ಕರಪತ್ರ ಬಿಡುಗಡೆ

ಸ್ಥಳ:- ಚಿಂಚೋಳಿ

ಆಂಕರ್:-

ಚಿಂಚೋಳಿ:- ತಾಲೂಕಿನ ಬಸ್ ಘಟಕ ಹತ್ತಿರ ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕರಾದ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿಯವರ ಅಧ್ಯಕ್ಷತೆಯಲ್ಲಿ ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ್ “ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ” ಅಭಿಯಾನದ ಕರಪತ್ರ ಬಿಡುಗಡೆ ಮಾಡಿದರು.

ನಂ.19ಕ್ಕೆ ಕನ್ನಡ ರಾಜ್ಯೋತ್ಸವ ಸೀಮಿತವಾಗಿರಬಾರದು

ನಮ್ಮ ಎಲ್ಲಾ ಸಂಸ್ಕೃತಿ ಬಳಗದಿಂದ ಕನ್ನಡ ಉಳಿಸಿ ಎಂಬ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಮಾಡುತ್ತೀದ್ದೇವೆ.

ತಾವೆಲ್ಲರೂ ಕನ್ನಡ ಭಾಷೆ ನಾಡು ನುಡಿ ಉಳಿಸಲು ಬೆಂಬಲ ನೀಡಬೇಕು ಕನ್ನಡದ ಉಳಿವಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿಶ್ವಜ್ಯೋತಿ ಪ್ರತಿಷ್ಠಾಪನೆ ಜಿಲ್ಲಾದ್ಯಾಂತ ಮಾಡುತ್ತಿದೆ ಎಂದು ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕರು-ನಿರ್ದೇಶಕರಾದ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಹೇಳಿದರು.

ನಮ್ಮ ಕನ್ನಡ ನಾಡು ನುಡಿ ಸಾಹಿತ್ಯಕ್ಕೆ 8 ಜ್ಜಾನಪೀಠ ಪ್ರಶಸ್ತಿ ದೊರಕಿವೆ.

ಕನ್ನಡ ನಾಡು ನುಡಿ ಕನ್ನಡ ಸಾಹಿತ್ಯ ಉಳಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಹಿರಿಯರಾದ ಅಶೋಕ ಪಾಟೀಲ್ ಹೇಳಿದರು.

ಕನ್ನಡ ನಾಡು ನುಡಿ ಭಾಷೆ ಇಂಥ ಕಾರ್ಯಕ್ರಮಗಳನ್ನು ವಾರಕ್ಕೊಮ್ಮೆ ಮಾಡಿದರು ಕಡಿಮೆ ಹಾಗೂ ವಾರಕ್ಕೊಮ್ಮೆ ಕನ್ನಡ ಸಾಹಿತ್ಯಕ್ಕೆ ಕನ್ನಡ ಭಾಷೆಗೆ ಒಂದು ದಿನ ಮೀಸಲಿಡಬೇಕು ಆಗ ಮಾತ್ರ ಕನ್ನಡ ಭಾಷೆ ನಾಡು ನುಡಿ ಉಳಿಯುತ್ತದೆ ಎಂದು ಕಲಬುರ್ಗಿ ಜಿಲ್ಲಾ ಪಂಚಾಯತ್ ಸದಸ್ಯ ಗೌತಮ್ ವೈಜಿನಾಥ ಪಾಟೀಲ್ ಹೇಳಿದರು.

ಈ ರೀತಿಯ ಸಂಸ್ಕೃತಿಯ ಚಟುವಟಿಕೆಗಳು ಬಹಳ ಅವಶ್ಯಕತೆಯಿದೆ ಇಂಥ ವಿಭಿನ್ನವಾದ ಕಾರ್ಯಕ್ರಮಗಳು ಮಾಡಿದರೆ ಕನ್ನಡಾಭಿಮಾನ ಬೆಳೆಯುತ್ತದೆ ಇಂಥ ಸಂಸ್ಕೃತಿ ಬಳಗದವರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಕಲಬುರ್ಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದೀಪಾಗನಾಗ ಪುಣ್ಯಶೇಟ್ಟಿ ಹೇಳಿದರು.

ಕನ್ನಡವೆಂಬುವುದು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು ಮಾಡಿದರೆ ಕನ್ನಡ ಉಳಿಯುತ್ತದೆ ಎಂದು ಅರಿತು ಬಸ್ ಘಟಕದ ಎದುರುಗಡೆ ಈ ಕಾರ್ಯಕ್ರಮ ಮಾಡಿದ್ದೇವೆ.

ಕನ್ನಡ ಏಳಿಗೆಯ ರಥ ಈಗ ಕಡಿಮೆಯಾಗಿದೆ ಎಂದು ಬೇಸರವ್ಯಕ್ತಪಡಿಸಿದರು

ಕನ್ನಡ ರಥ ಮುಂದೆ ಸಾಗಿಸಲು ಸರ್ವಜನ ಬೆಂಬಲ ನೀಡಬೇಕು ಆಗ ಮಾತ್ರ ಕನ್ನಡ ಉಳಿಯುತ್ತದೆ.

ಕವಿರಾಜ ಮಾರ್ಗ ಕೃತಿ ಪಾಠ್ಯಪುಸ್ತಕದಲ್ಲಿ ಸೇರಿಸಬೇಕು

ಸಂಗಿತದ ವಯೋಮೀತಿ 60%ಗೆ ಎರಿಸಬೇಕು ಕನ್ನಡ ನಾಡು ನುಡಿ ಯಾವುದೇ ಜಾತಿಗೆ ಸೀಮಿತವಾಗಿಲ್ಲ ಇಂಥ ಕಾರ್ಯಕ್ರಮಗಳು ಒಂದು ವರ್ಷದಿಂದ ಸತತವಾಗಿ ಮಾಡುತ್ತಾ ಬರುತ್ತಿದ್ದೇವೆ.ಎಂದು ಗುಂಡೆರಾವ ಮುಡಬಿ ಹೇಳಿದರು.

ಈ ಕಾರ್ಯಕ್ರಮದಲ್ಲಿ

ಕಲಬುರ್ಗಿ ಜಿಲ್ಲಾ ಪಂಚಾಯತ್ ಸದಸ್ಯ ಸಂಜೀವನ ರಮೇಶ ಯಾಕಪೂರ, ಶರಣರಾಜ,ಶರಣಬಸವ,ಧರ್ಮಣ್ಣ,ಶ್ರೀಮಂತ ಕಟ್ಟಿಮನಿ, ಬೀಮಶೆಟ್ಟಿ ಮುರುಡಾ, ಲಕ್ಷ್ಮಣ ಅವಂಟಿ, ಶರಣು ಮೋತಕಪಳ್ಳಿ, ಉಲ್ಲಾಸಕುಮಾರ ಕೇರಳ್ಳಿ,ಶಾಮರಾವ ಕೋರವಿ,ಎಸ್.ಎನ್.ದಂಡಿನಕುಮಾರ, ಬಸವರಾಜ ಐನೋಳ್ಳಿ, ಆರ್.ಗಣಪತರಾವ, ಅನ್ವರ್ ಖತೀಬ್, ಶಾಂತವೀರ ಹೀರಾಪೂರ, ನಾಗೇಂದ್ರಪ್ಪಾ ಗುರಂಪಳ್ಳಿ, ಬಸವರಾಜ ಸಿರಸಿ, ಚಂದ್ರಕಾಂತ ಸಾಸರಗಾಂವ,ನಾಮದೇವ,ಪೂಜಾ, ನಿಲಾಂಬಿಕಾ,ಇಮ್ರಾನ್, ಅನೀಲ ಇನ್ನು ಅನೇಕರು ಇದ್ದರು.

 

ವರದಿ:- ಶಿವಕುಮಾರ ತಳವಾರ ಸುಲೇಪೇಟ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author