ಅತ್ರಬೈಲಿನಲ್ಲಿ ಬೀದಿ ದೀಪ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ #avintvcom
1 min read
ಕುಂಜತ್ತಬೈಲ್ :ಅತ್ರಬೈಲಿನಲ್ಲಿ ಬೀದಿ ದೀಪ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಅತ್ರಬೈಲು ಹೊಳೆ ಬದಿ ಅಳವಡಿಸಲಾದ ನೂತನ ಬೀದಿ ದೀಪ ವ್ಯವಸ್ಥೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಬುಧವಾರ ಉದ್ಘಾಟಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಸುಮಾರು 6.50
ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಲಾಗಿದೆ.ಸ್ಥಳೀಯ ಜನರ ಬಹುದಿನದ ಬೇಡಿಕೆ ಇದೀಗ ಈಡೇರಿದಂತಾಗಿದೆ.ಸ್ಥಳೀಯ ಕಾರ್ಪೊರೇಟರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್,ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್,ಸನತ್ ಬೂತ್ ಅಧ್ಯಕ್ಷ,
ಬಿಜೆಪಿ ಹಿರಿಯ ಮುಖಂಡರು,ಸ್ಥಳಿಯರು ಉಪಸ್ಥಿತರಿದ್ದರು.