ಸಾವಳಗಿ ಪಟ್ಟಣವನ್ನು ತಾಲೂಕು ಕೇಂದ್ರ ಘೋಷಿಸಬೇಕೆಂದು ಎಂದು ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ #avintvcom
1 min read
ಸಾವಳಗಿ ತಾಲೂಕು ಕೇಂದ್ರಕ್ಕಾಗಿ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಬಾಗಲಕೋಟೆ ಜಿಲ್ಲೆಯ ಸಾವಳಗಿ ಪಟ್ಟಣವನ್ನು ತಾಲೂಕು ಕೇಂದ್ರ ಘೋಷಿಸಬೇಕೆಂದು ಕಳೆದ ಐವತ್ತು ವರ್ಷಗಳ ನಿರಂತರ ಹೋರಾಟ ನಡೆಯುತ್ತಿದ್ದು ಸದ್ಯ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಶುಕ್ರವಾರ ಜಿ.ಪಂ.ಸದಸ್ಯ, ತಾ.ಪಂ. ಸದಸ್ಯರು, ಪಿಕೆಪಿಎಸ್ ಚುನಾಯಿತ ಪ್ರತಿನಿಧಿಗಳು, ಕಾಂಗ್ರೇಸ್ ಹಾಗು ಬಿಜೆಪಿ ಪಕ್ಷದ ಬ್ಲಾಕನ ಎಲ್ಲ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಜನ ಸಾಮೂಹಿಕವಾಗಿ ರಾಜಿನಾಮೆ ನೀಡಿರುವ ಘಟನೆ ನಡೆದಿದೆ.
ಇಷ್ಟೆಲ್ಲದರ ಮದ್ಯ ಸಾವಳಗಿ ಗ್ರಾಮದ ಕೃಷ್ಣಾ ಕುಂಬಾರ ಎಂಬುವ ವ್ಯಕ್ತಿ ಪಂಚಾಯತ್ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಹೋರಾಟಗಾರರು ಮನವೋಲಿಸಿದ ಘಟನೆ ನಡೆದಿದೆ.
ಸಾವಳಗಿ ಹೋಬಳಿ ಒಂದು ಲಕ್ಷ ಹದಿನೈದು ಸಾವಿರ ಜನಸಂಖ್ಯೆ ಹೊಂದಿದ್ದು ಲಕ್ಷಕ್ಕು ಹೆಚ್ಚು ಭೂವಿಸ್ತೀರ್ಣ ಹೊಂದಿದೆ. ಜೋತೆಗೆ 24 ಹಳ್ಳಿಗಳು ಹಾಗು ಸರ್ಕಾರಿ ಕಚೇರಿಗಳು ಲಬ್ಯವಿದ್ದು ಇಷ್ಟೆಲ್ಲ ಅರ್ಹತೆಗಳನ್ನು ಹೊಂದಿದ ಸಾವಳಗಿ ಹೋಬಳಿಗೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಹೋರಾಟಗಾರರು ಆಗ್ರಹಿಸಿದರು.