ಗ್ರಾಮ ಪಂಚಾಯತ ಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ. #avintvcom
1 min read
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಭರ್ಜರಿ ಸಿದ್ಧತೆಯಿಂದ ನಡೆಯುತ್ತಿರುವ ಗ್ರಾಮ ಪಂಚಾಯತ ಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ.
ಆಲಬಾಳ ಗ್ರಾಮದ ನಿವಾಸಿ ಶಂಭುಲಿಂಗ ಕಾಂಬಳೆ ವಾರ್ಡ್ ನಂಬರ್ 5 ರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು
ನಂತರ ಮಾತಾನಾಡಿದ ಶಂಭುಲಿಂಗ ಕಾಂಬಳೆ ಪಂಚಾಯತ ಯಿಂದ ಯಾವುದೇ ಅನುದಾನ ಬಂದರು ನಮ್ಮ ಜನರಿಗೆ ದಲಿತ ಜನರಿಗೆ ಲಾಭವೇ ಇಲ್ಲ ಮೇಲ್ವರ್ಗದವರು ತಮ್ಮ ಮನೆ ತುಂಬಿಸಿ ಕೊಂಡು ದಲಿತರಿಗೆ ಯಾವುದೇ ರೀತಿ ಸಹಾಯ ಮಾಡುವುದಿಲ್ಲ ನಮ್ಮ ದಲಿತ ಜನರಿಗೆ ಹಾಗೂ ೫ ನೇ ವಾರ್ಡಿನ ಜನರಿಗೆ ಪಂಚಾಯತಿ ಇಂದು ಬರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ನಮ್ಮ ವಾರ್ಡಿನ ಏಳಿಗೆಗೆ ಉಪಯೋಗ ಮಾಡಿ ಸುವರ್ಣ ಗ್ರಾಮವನಾಗಿ ಮಾಡಬೇಕೆಂಬ ಮಹದಾಸೆಯಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ
ನನ್ನನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆರಿಸಿ ತರಬೇಕೆಂದು ಕೇಳಿಕೊಳ್ಳುತ್ತೇನೆ
ಎಂದು ಹೇಳಿದರು.
ಪರಶುರಾಮ ಕಾಂಬಳೆ ಮಹಾತೇಶ. ತೇಲಿ ವಿಠಲ್. ತಳವಾರ್ ಬಸವರಾಜ್. ಕಾಂಬಳೆ ಹಣಮಂತ. ಕಾಂಬಳೆ ದುರಗಪ್ಪ. ಮಾoಗ ಉಪಸ್ಥಿತರಿದ್ದರು
ವರದಿ. ಪರಶುರಾಮ ಕಾಂಬಳೆ