लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುಖಿ ಜೀವನ ನಡೆಸಬಹುದು ಎಂದು ಮುಖಂಡ ಮಹಾಂತೇಶ ಹೊನ್ನೊಳ್ಳಿ ಅವರು ಹೇಳಿದರು. #avintvcom

1 min read
Featured Video Play Icon

ಅಥಣಿ- ಪರಿಶುದ್ದ ಮನಸ್ಸಿನಿಂದ ದೇವರ ಸೇವೆ ಮಾಡಿದರೆ ಮಾತ್ರ ಸುಖಿ ಜೀವನ ನಡೆಸಬಹುದು ಎಂದು ಮುಖಂಡ ಮಹಾಂತೇಶ ಹೊನ್ನೊಳ್ಳಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ಗುರು ರುದ್ರ ಪಶುಪತಿ ಕೋಳೆಕರ ಮಠದಲ್ಲಿ ಹಮ್ಮಿಕೊಂಡ ಮಠದ ಕಾರ್ತಿಕೋತ್ಸವ ಹಾಗೂ 07 ನೇ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಕೊರೋನಾದಂತಹ ಮಹಾಮಾರಿ ಇಡೀ ವಿಶ್ವವನ್ನು ಆವರಿಸಿದಾಗ ದೈವಿಕ ಕಾರ್ಯಗಳಿಗೆ ತೊಡಕಾಗಿದ್ದು ಇದೀಗ ಸ್ವಲ್ಪ ನಿರಾಳವಾಗಿ ದೇವರ ಸೇವೆಯನ್ನು ಮಾಡಲು ಅನುಕೂಲವಾಗಿದೆ ಎಂದರು.

ನಂತರ ಮಾತನಾಡಿದ ಮಠದ ಸೇವಾ ಸಮೀತಿ‌ ಪರವಾಗಿ ಮಾತನಾಡಿದ ಮುಖಂಡ ಹಣಮಂತ ಭಾಸಿಂಗಿ ಬರುವ ಶುಕ್ರವಾರ ದಿನಾಂಕ 18 ರಂದು ಶ್ರೀಮಠದಲ್ಲಿ ಗುರು ರುದ್ರ ಪಶುಪತಿ ಕೋಳೆಕರ ಅವರ ಮೂರ್ತಿ ಪ್ರತಿಷ್ಠಾಪನೆಯ 07 ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮ ನಿಮಿತ್ಯ ಬೆಳಿಗ್ಗೆ 08 ಗಂಟೆಗೆ ರುದ್ರಾಭಿಷೇಕ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮಕ್ಕೆ ಸಮೀತಿ ಪರವಾಗಿ ಎಲ್ಲರಿಗೂ ಆಹ್ವಾನ ಎಂದು ತಿಳಿಸಿದರು.

ಈ ವೇಳೆ ಸುಭಾಸ ಕಾಗಲೆ, ಮಹಾದೇವ ಚಮಕೇರಿ, ಶ್ರೀಶೈಲ ಹಳ್ಳದಮಳ, ರವಿ ಬಡಕಂಬಿ, ಶ್ರೀಶೈಲ ಬಡಕಂಬಿ, ಗಿರೀಶ ದಿವಾನಮಳ, ಪ್ರಶಾಂತ ತೋಡಕರ, ರಾಮಲಿಂಗ ಬಡಕಂಬಿ, ಚೇತನ‌ ಮಾಳಿ, ನಿತ್ಯಾನಂದ ಚರಂತಿಮಠ, ಬಸವರಾಜ ಹಳ್ಳದಮಳ, ಆನಂದ ಲಗಳಿ, ರಮೇಶ ತೇರದಾಳ, ಸಂತೋಷ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು..

ಪೊಟೊ ಶೀರ್ಷಿಕೆ – ಕೋಳೆಕರ ಮಠದ ಕಾರ್ತಿಕೋತ್ಸವ ಹಾಗೂ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಗಣ್ಯರು

ವರದಿ    ಪೀರು ನಂದೇಶ್ವರ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

 

About Author