ದಿಬ್ಬೂರಹಳ್ಳಿ ಮಾಂಸದ ಅಂಗಡಿಗಳ ತ್ಯಾಜ್ಯ ಕೆರೆಗೆ ಗ್ರಾಮಸ್ಥರ ಆಕ್ರೋಶ.. #avintvcom
1 min read
ದಿಬ್ಬೂರಹಳ್ಳಿ ಮಾಂಸದ ಅಂಗಡಿಗಳ ತ್ಯಾಜ್ಯ ಕೆರೆಗೆ ಗ್ರಾಮಸ್ಥರ ಆಕ್ರೋಶ..
ಸ್ವಚ್ಛತೆ ಬಗ್ಗೆ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದರು ಇದರ ಬಗ್ಗೆ ಇನ್ನೂ ಅರಿವಿಲ್ಲದಂತೆ ಕೆಲವೊಂದು ಗ್ರಾಮ ಪಂಚಾಯಿತಿಗಳು ಕೈಕಟ್ಟಿ ಕುಳಿತಿರುವುದು ವಿಪರ್ಯಾಸವೇ ಸರಿ. ಇಂತಹದರಲ್ಲಿ ದಿಬ್ಬೂರಹಳ್ಳಿ ಪಂಚಾಯಿತಿಯ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಈ ಕೆಳಗಿನ ಮಾಹಿತಿಯೇ ಸಾಕ್ಷಿ. ಸುಮಾರು ದಿನಗಳಿಂದ ದಿಬ್ಬೂರಹಳ್ಳಿಯಲ್ಲಿ ಯಥೇಚ್ಛವಾಗಿ ಮಾಂಸದ ಅಂಗಡಿಗಳು ತಲೆಯೆತ್ತಿದ್ದು ಇದರಿಂದ ಉಳಿಯುವ ಮಾಂಸದ ತ್ಯಾಜ್ಯವನ್ನೆಲ್ಲ ಚಿಂತಾಮಣಿ ರಸ್ತೆಯಲ್ಲಿರುವ ಕುದುಪಕುಂಟೆ ಗ್ರಾಮದ ಕೆರೆಗೆ ಪ್ರತಿದಿನ ಎಸೆಯುತ್ತಿದ್ದಾರೆ. ಇದರ ಬಗ್ಗೆ ಅದೇ ಊರಿನ ಯುವ ನಾಯಕರಾದ ಶ್ರೀನಾಥ್ ರವರು ಮಾತನಾಡಿ ಈ ರಸ್ತೆಯು ರಾಜ್ಯ ಹೆದ್ದಾರಿ 5 ರ ರಸ್ತೆಯಾಗಿದ್ದು ಇಲ್ಲಿ ಪ್ರತಿದಿನ ಯಥೇಚ್ಛವಾಗಿ ವಾಹನಗಳು ಓಡಾಡುತ್ತಿರುತ್ತವೆ ಆದರೆ ದಿಬ್ಬೂರಹಳ್ಳಿ ಮಾಂಸದ ಅಂಗಡಿಗಳಿಂದ ಸತ್ತ ಕೋಳಿಗಳನ್ನು ಹಾಗೂ ತ್ಯಾಜ್ಯವನ್ನು ಇದೇ ರಸ್ತೆಬದಿಯಲ್ಲಿ ಹಾಕುವುದರಿಂದ ಇದನ್ನು ತಿನ್ನಲು ಬರುವ ನಾಯಿಗಳು ಕಿತ್ತಾಡಿಕೊಂಡು ರಸ್ತೆಗೆ ಏಕಾಏಕಿ ಬರುತ್ತವೆ ಇದರಿಂದ ಸಾಕಷ್ಟು ಸಲ ಅಪಘಾತಗಳು ಆಗಿರುವುದು ಉಂಟು ಎಂದು ಉದಾಹರಣೆಸಹಿತ ವಿವರಿಸಿದರು ಜೊತೆಗೆ ಇಷ್ಟು ದಿನ ಕೆರೆಯಲ್ಲಿ ನೀರು ಕುಡಿಯಲು ಬರುತ್ತಿದ್ದ ಜಾನುವಾರಗಳು ಈಗ ಈ ಒಂದು ದುರ್ವಾಸನೆಗೆ ಈಕಡೆ ಬಾರದೆ ತುಂಬಾ ದೂರಕ್ಕೆ ಹೋಗುವ ಪರಿಸ್ಥಿತಿ ಬಂದಿದೆ. ಇದರಿಂದ ಬೇಸತ್ತ ನಾವು ಇದರ ಬಗ್ಗೆ ಈಗಾಗಲೇ ದಿಬ್ಬೂರಹಳ್ಳಿ ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗೌಸ್ ಪೀರ್ ಅವರಿಗೆ ಕರೆ ಮಾಡಿ ಕೇಳಿದಾಗ ಅವರು ತುಂಬಾ ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ ಅದನ್ನು ಹಾಕಿರುವುದು ನೀನು ನೋಡಿದ್ದೀಯಾ ಯಾರು ಇಲ್ಲಿಂದ ತೆಗೆದುಕೊಂಡು ಹಾಕಿರುತ್ತಾರೆ ನಾವು ಪ್ರತಿದಿನ ಕಾವಲು ಕಾಯಲು ಸಾಧ್ಯವಿಲ್ಲ ಹೋಗಲಿ ಈಗ ನೀನಾದರೂ ಹೇಳು ನಾನು ಏನು ಮಾಡಬೇಕೆಂಬುದನ್ನು ಎಂದು ಈ ರೀತಿಯ ಅವಹೇಳನ ಮಾತುಗಳನ್ನು ಮಾತನಾಡಿರುತ್ತಾರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಿರುವುದು ನಮಗೆ ತುಂಬಾ ನೋವುಂಟು ಮಾಡಿದೆ ಆದ್ದರಿಂದ ಈಗಲಾದರೂ ಮೇಲಾಧಿಕಾರಿಗಳು ಆದರೂ ಎಚ್ಚೆತ್ತು ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಥಳದಲ್ಲಿ ತಾಲೂಕು ರೈತ ಮುಖಂಡರಾದ ಶಂಕರನಾರಾಯಣ ಕುದುಪಕುಂಟೆ, ಹಾಗೂ ಇದೇ ಗ್ರಾಮಸ್ಥರಾದ ಬಾಬಾಜಾನ್, ರಾಜಣ್ಣ, ನಾರಾಯಣ ಸ್ವಾಮಿ, ಮೆಹಬೂಬ್ ಪಾಷಾ, ಪ್ರದೀಪ್, ವೆಂಕಟೇಶ್ ರವರು ಇದ್ದರು..