लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಧುಗಿರಿ:ಕಾರು ಮಾಲಿಕನೇ ತನ್ನ ವಾಹನ ಕಳುವಾಗಿದೆ ಎಂದು ಸುಳ್ಳು ದೂರು ನೀಡಿ ಪೊಲೀಸ್ ಘಟನೆ ವರದಿಯಾಗಿದೆ.#avintvcom

1 min read
Featured Video Play Icon

ಕಾರು ಮಾಲಿಕನಿಂದ ಹೈಡ್ರಾಮ: ಆರೋಪಿ ಅಂದರ್

*ಮಧುಗಿರಿ: ಕಾರು ಮಾಲಿಕನೇ ತನ್ನ ವಾಹನ ಕಳುವಾಗಿದೆ ಎಂದು ಸುಳ್ಳು ದೂರು ನೀಡಿ ಇದೀಗಾ ಪೊಲೀಸ್ ಅತಿಥಿಯಾದ ಘಟನೆ ವರದಿಯಾಗಿದೆ.

ಮಧುಗಿರಿ ಪಾವಡಗ ಮುಖ್ಯ ರಸ್ತೆ ನಡುವಿನ ನೀಲಿಹಳ್ಳಿ ಬಳಿ ಯಾರು 3 ಜನ ಬಂದು ಕಾರ್ ಪಂಚಾರ್ ಆಗಿದೆ ನನ್ನ ಹಲ್ಲೇ ಮಾಡಿ ಕಾರು ಕಿತ್ತುಕೊಂಡು ಹೋಗಿದ್ದಾರೆ ಎಂದು ಮಡಕಶಿರಾ ತಾಲೂಕಿನ ಈಚಲಡ್ಡಿ ಗ್ರಾಮದ ನಿವಾಸಿ ದೊಡ್ಡೇಗೌಡ ಸನ್ ಲೇ ಈಶ್ವರಪ್ಪ ಎಂಬಾತ ಸೆ 21 ರಂದು ಮಿಡಿಗೇಶಿ ಠಾಣೆಯಲ್ಲಿ ದೂರು ನೀಡಿದ್ದಾನೆ.

ಎರಡು ತಿಂಗಳ ಹಿಂದೆ ದಾಖಲಾಗಿದ್ದ ದೂರನ್ನು ಗಂಭೀರವಾಗಿ ಕೈಗೆತ್ತಿಕೊಂಡು ಮಧುಗಿರಿ ಡಿವೈಎಸ್ಪಿ ಪ್ರವೀಣ್ ಕುಮಾರ್ ಅವರು ಮಧುಗಿರಿ ಸಿಪಿಐ ಎಂ.ಎಸ್ ಸರ್ದಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗಾಗಿ ಬಲೆ ಬೀಸಿ ದೂರುದಾರನ ಚಲನವಲನಗಳ ಬಗ್ಗೆ ಗಮನಿಸಿ ತನಿಖೆ ಕೈಗೊಂಡಾಗ ದೂರುದಾರನೇ ಕಾರಿನ ಕಂತು ಕಟ್ಟಲಾಗದೆ ತನ್ನ ಇನೋವಾ ಕಾರನ್ನು ಆಂದ್ರಪ್ರದೇಶದ ಎಂ ರಂಗಾಪುರ ಗ್ರಾಮದ ಪರಿಚಯಸ್ಥರ ಮನೆಯಂಗಳದಲ್ಲಿ ಬಚ್ಚಿಟ್ಟು ಹೈಡ್ರಾಮವಾಡಿದ್ದಾನೆ.

ಆರೋಪಿ ದೊಡ್ಡೇಗೌಡನನ್ನು ಹೆಚ್ಚಿನ ತನಿಖೆ ಮಾಡಿದಾಗ ಇನೋವಾ ಕಾರಿನ ಲೋನ್ ಜತೆಯಲ್ಲಿ ಮಣಿಪುರಂ ಗೋಲ್ಡ್ ಸೇರಿದಂತೆ ಸುಮಾರು 12 ಲಕ್ಷ ಕೈ ಸಾಲ ಮಾಡಿಕೊಂಡಿದ್ದು ಸುಳ್ಳು ದೂರು ನೀಡಿ ಇನ್ಶೋರೆನ್ಸ್ ಕ್ಲಮ್ ಮಾಡಿಕೊಳ್ಳಲು ಹೈಡ್ರಾಮ ಮಾಡಿ ಪೊಲಿಸರ ಅತಿಥಿಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮಾಡಿದಾಗ ಇದೇ ರೀತಿ ಬೆಂಗಳೂರಿನಲ್ಲಿ ಬೇಗೂರು, ಆಂದ್ರಪ್ರದೇಶದ ಪೆನುಗೊಂಡ ಹಾಗೂ ಮಡಕಶಿರಾ ಠಾಣೆಯಲ್ಲಿ 420 ಪ್ರಕರಣಗಳು ಧಾಖಲಾಗಿದ್ದು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಲದ ಆದೇಶದ ಮೇರೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ಸದರಿ ಆರೋಪಿಯನ್ನು ಪತ್ತೆ ಮಾಡಿದ ಸಿಪಿಐ ಎಂಎಸ್ ಸರ್ದಾರ್, ಮುಖ್ಯ ಪೇದೆಗಳಾದ ರಾಮೃಷ್ಣಪ್ಪ, ಗೋವಿಂದರಾಜು, ನಟರಾಜು, ಸಿದ್ದೇಶ್ವರ್, ಶಿವಕುಮಾರ್ ಅವರಿಗೆ ಎಸ್ಪಿ ಡಾ ಕೋ ವಂಶಿಕೃಷ್ಣ ಅಭಿನಂದಿಸಿದ್ದಾರೆ.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author