*ನಿವೃತ್ತ ಅಧೀಕ್ಷಕಿ ರಮಣಿ ಅವರಿಗೆ ಬೀಳ್ಕೊಡುಗೆ*…
1 min read
*ನಿವೃತ್ತ ಅಧೀಕ್ಷಕಿ ರಮಣಿ ಅವರಿಗೆ ಬೀಳ್ಕೊಡುಗೆ*
ಮೂಡಿಗೆರೆ: ಎಲ್ಲಾ ಸರ್ಕಾರಿ ನೌಕರರ
ಬದುಕಿನಲ್ಲಿ ವೃತ್ತಿಪರ ಕೆಲಸ, ನೌಕರರ ಹಾಗೂ ಸಾರ್ವಜನಿರ ನಡುವಿನ ಮಧುರವಾದ ಬಾಂಧವ್ಯದ ನೆನಪು. ಇವುಗಳನ್ನು ತೊರೆಯುವ ನಿವೃತ್ತಿಯ ದಿನ ಒಂದೆಡೆ ಸಂಭ್ರಮವೆನಿಸಿದರೆ ಮತ್ತೊಂದೆಡೆ ದುಖಃ ತರುವ ಸನ್ನಿವೇಶವೆಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಎನ್.ಎ.ಮೀನಾಕ್ಷಿ ಹೇಳಿದರು.
ಅವರು ಶಿಕ್ಷಣ ಇಲಾಖೆಯಲ್ಲಿ ಅಧೀಕ್ಷಕಿ ಯಾಗಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್. ರಮಣಿ ಅವರಿಗೆ ಶನಿವಾರ ಸಂಜೆ ಇಲಾಖೆ ವತಿ ಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ’ಕಾರ್ಯಕ್ರಮದಲ್ಲಿ ಮಾತನಾಡಿ, ನಿವೃತ್ತಿ ಹೊಂದುತ್ತಿರುವ ಎಸ್.ರಮಣಿ ಅವರು, ಸದಾ ‘ಹಸನ್ಮುಖಿಯಾಗಿ ಇಲಾಖೆಯಲ್ಲಿ ನಿಷ್ಠೆ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಬೀಳ್ಕೊಡುಗೆ ಎಂಬುದು ಭಾವನಾತ್ಮಕ ಸನ್ನಿವೇಷವಾದರೂ, ನಿವೃತ್ತಿ ಪಡೆದ ಮಾತ್ರಕ್ಕೆ ನಮ್ಮಲ್ಲಿರುವ ಬಾಂಧವ್ಯ
ಎಂದಿಗೂ ಕಡಿಮೆಯಾಗದು. ಅವರ ಮುಂದಿನ ಹೊಸ ಪಯಣದ ದಾರಿ ಹಾಗೂ ಅವರ ನಿವೃತ್ತಿ ಜೀವನದಲ್ಲಿ ಭಗವಂತ ಆರೋಗ್ಯ, ನೆಮ್ಮದಿ ನೀಡಲೆಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧೀಕ್ಷಕಿ ಎಸ್.ರಮಣಿ, ಇಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ, ನೌಕರರು ಹಾಗೂ ಸಿಬ್ಬಂದಿಗಳ ಸಹಕಾರದಿಂದಾಗಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು. ಇದೇ ರೀತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು
ಇಲಾಖೆಗೆ ಒಳ್ಳೆಯ ಹೆಸರು ತರಬೇಕು. ನಿಮ್ಮೆಲ್ಲರ ಬಾಂಧವ್ಯ ಸದಾ ನನ್ನ ಮೇಲಿರಲಿ ಎಂದು ಸಹೋ ದ್ಯೋಗಿಗಳಲ್ಲಿ ವಿನಂತಿಸಿದರು.
ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಹೆಚ್.ಒ.ಕಾವ್ಯ, ಹೆಚ್.ಮಂಜಪ್ಪ, ಗಂಗಾಧರಪ್ಪ, ಲಿಪಿಕ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಅಧ್ಯಕ್ಷ ಸೈಯ್ಯದ್ ರಫೀ ಅಂಜುಂ, ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷ ಧೃವರಾಜ್, ಶಿಕ್ಷಣ ಇಲಾಖೆ ಅಧೀಕ್ಷಕ ಎಂ.ಎನ್.ಶಶಿಧರ್, ಟಿಪಿಇಒ ಕೆ.ಬಿ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾ ಯಕ ನಿರ್ದೇಶಕ ಹೇಮಂತ್ಚಂದ್ರ, ಇಸಿಒ ಸ್ಥಿತಾ ಲೋಬೋ, ಕ್ಷೇತ್ರ ಸಮನ್ವಯಾಧಿಕಾರಿ ರವಿ ನಾಯಕ್, ಡಿ.ಸಿ.ಲತಾ, ಸಿ.ಎನ್.ಆರತಿ, ಡಿ.ನವೀನ, ಎಂ.ಇಂತೇಶ್, ಹೇಮಂತ್ಕುಮಾರ್, ಶಾರದಾ, ಡಿ.ಚಂದ್ರಾವತಿ ಇದ್ದರು.