ದಿನಾಂಕ: 09-06-2025 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ …..
1 min read
ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘ (ರಿ.)
ಅಧ್ಯಕ್ಷರು :ಟಿ. ರಾಜಶೇಖರ್
ಉಪಾಧ್ಯಕ್ಷರು :ಟಿ.ಡಿ. ಮಲ್ಲೇಶ್
ಗೌರವ ಕಾರ್ಯದರ್ಶಿ :ಎಂ.ಎಸ್. ಪ್ರದೀಪ್ ಕುಮಾರ್
ಆತ್ಮೀಯರೇ,
ದಿನಾಂಕ: 09-06-2025 ರಂದು ಚಿಕ್ಕಮಗಳೂರಿನಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿದೆ.
ಕರ್ನಾಟಕ ಗೋಯರ್ಸ್ ಫೆಡರೇಶನ್ (ಕೆಜಿಎಫ್) ಹಾಗೂ ಸಮಾನ ಮನಸ್ಕ ಸಂಘಟನೆಗಳು ಆಯೋಜಿಸಿರುವ ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
1. ಪಾರಂ 50 ಹಾಗೂ 53 ರಲ್ಲಿ ಮಂಜೂರಾದ ಜಮೀನುಗಳನ್ನು ವಿನಾಕರಣ ರದ್ದುಮಾಡಿರುವುದು.
2. ರೈತ-ಬೆಳೆಗಾರರ ಕೃಷಿ ಭೂಮಿಯನ್ನು ದಿಢೀರನೆ ಸೆಕ್ಷನ್ 4(1)ರ ಅಡಿಯಲ್ಲಿ ತಂದಿರುವುದು
3. ಶತಮಾನಗಳಿಂದ ಸಾಗುವಳಿ ಮಾಡಿಕೊಂಡು ಬಂದ ಭೂಮಿಯನ್ನು ಡೀಮ್ಸ್ ಫಾರೆಸ್ಟ್ ಹೆಸರಿನಲ್ಲಿ ದಾಖಲಿಸಿರುವುದು.
4. ದಿನೇ ದಿನೇ ತಾರಕಕ್ಕೆ ಏರುತ್ತಿರುವ ಮಾನವ ವನ್ಯಜೀವಿ ಸಂಘರ್ಷದ ಶಾಶ್ವತ ಪರಿಹಾರ
5. ಪ್ಲಾಂಟೆಷನ್ ಬೆಳೆಗಾರರ ಸಾಗುವಳಿಯನ್ನು ಲೀಸ್ ಮೂಲಕ ನೀಡಲು ವಿಳಂಬವಾಗುತ್ತಿರುವುದು
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಚರ್ಚಿಸಿ ಮುಂದಿನ ಹೋರಾಟಕ್ಕೆ ಸ್ಪಷ್ಟವಾದ ದಿಕ್ಕನ್ನು ಸೂಚಿಸುವ ಸಲುವಾಗಿ ಈ ಬೃಹತ್ ಸಮಾವೇಶ ನಡೆಯಲಿದೆ.
ನಮ್ಮ ಜನಾಂಗವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 90 ಕ್ಕೂ ಹೆಚ್ಚು ಕಾಫಿ ಕೃಷಿಯನ್ನು ಹೊಂದಿದ್ದು ನಮ್ಮ ಬೆಳೆಗಾರರ ಮತ್ತು ನಮ್ಮ ಮುಂದಿನ ಪೀಳಿಗೆಗೆ ಮಾರಕವಾಗುವ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತಂದಿದ್ದು, ಇದು ಮಲೆನಾಡಿನ, ಸ್ವಾಭಿಮಾನಿ ಕಾಫಿ ಬೆಳೆಗಾರರ, ರೈತರ ಅಸ್ಥಿತ್ವದ ಪ್ರಶ್ನೆಯಾಗಿದೆ. ಆದ್ದರಿಂದ ಜನಾಂಗದವರು, ಕಾಫಿ ಬೆಳೆಗಾರರು ದಿನಾಂಕ: 09-06-2025 ರಂದು ನಡೆಯುವ ರೈತ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.
ಸ್ಥಳ : ತಾಲ್ಲೂಕು ಕಛೇರಿಯಿಂದ ಮೆರವಣಿಗೆ.
ಬೆಳಿಗ್ಗೆ 9.30.ಕ್ಕೆ.
ಸಭೆ.ಅಜಾದ್ ಪಾರ್ಕ್..