ಸರಳವಾಗಿ ಬದುಕುವುದನ್ನು ಕಲಿರಿ*…. ತಹಸೀಲ್ದಾರ್ ರಾಜಶೇಖರ್ ಮೂರ್ತಿ ಕರೆ….
1 min read
- *ಸರಳವಾಗಿ ಬದುಕುವುದನ್ನು ಕಲಿರಿ*…. ತಹಸೀಲ್ದಾರ್ ರಾಜಶೇಖರ್ ಮೂರ್ತಿ ಕರೆ.
ದಿನಾಂಕ -26-05-2025ರ ಸೋಮವಾರ ಗಬ್ಗಲ್ ಸಮುದಾಯದ ಭವನದಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ತಹಸೀಲ್ದಾರ್ ಶ್ರೀ ರಾಜಶೇಖರ ಮೂರ್ತಿ ರವರು, ಭಾರತ ಸಂವಿಧಾನದ ಆಶಯಗಳು ಸಮಾಜದಲ್ಲಿ ಬಹಳ ಪ್ರಭಾವವನ್ನು ಬೀರುವ ಅವಶ್ಯಕತೆ ಇದೆ ನಮ್ಮಲ್ಲಿ ಸಹೋದರತ್ವ ಭ್ರಾತೃತ್ವ ಗುಣಗಳು ನಮ್ಮೊಳಗೆ ಮೂಡಬೇಕಿದೆ , ಒಬ್ಬ ಮನುಷ್ಯ ಸರಳವಾಗಿ ಬದುವುದನ್ನು ಕಲಿಯಬೇಕಿದೆ ಒಬ್ಬ ವ್ಯಕ್ತಿಗೆ ತಾನು ಬದುಕಲು ಎಷ್ಟು ಸಾಕು ಅಷ್ಟಕ್ಕೇ ಜೀವನವನ್ನು ಸರಳಿ ಕರಿಸಿಕೊಂಡರೆ ಮಾತ್ರ ಎಲ್ಲರು ಸಮಾನವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವರಾದ ಬಿ ಬಿ ನಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ಏಳಿಗೆ ನಮ್ಮಿಂದಲೇ ಸಾಧ್ಯ, ಅಂಬೇಡ್ಕರ ಒಬ್ಬ ವಿಶ್ವ ನಾಯಕರು ಅವರ ಜ್ಞಾನಕ್ಕೆ ಸರಿ ಸಮಾನರಿಲ್ಲ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡುವ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾಗಬಹುದು ಎಂದರು. ಈ ಕಾರ್ಯಕ್ರದಲ್ಲಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಟಾಪರ್ ಅಪೇಕ್ಷ, ಕೀರ್ತನ,ನಿಶಾಂತ್ ರವರಿಗೆ ಸನ್ಮಾನಿಸಲಾಯಿತು, ಜೊತೆಗೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಂ ಸಿ ಗಿರೀಶ್ ಹಾಗೂ ನವೀನ ಗೌಡ ಇವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾ ಸಂಯೋಜಕರಾದ ಯು ಬಿ ಮಂಜಯ್ಯ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಕೆ ಮಂಜುನಾಥ್, ನಿವೃತ್ತ ಶಿಕ್ಷಕ ಹಾಲಯ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ ಯಾದವ್, ಕೂವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿತ,ಚಿತ್ರೋದಯ,ಶ್ರೀನಾಥ್, ಸಂತೋಷ್, ಸ್ವಾಮಿ ಮುಂತಾದವರು ಭಾಗವಹಿಸಿದ್ದರು. ಕಲ್ಮನೆ ಮಂಜುನಾಥ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಡೆಸಿಕೊಟ್ಟರು.