लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ….

1 min read

ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ.

ಮೂಡಿಗೆರೆ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಿಂದ ಶ್ರೀ ಜಗದ್ಗುರು ರೇಣುಕಾ ಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ.

ಮೂಡಿಗೆರೆ :ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರ ಈ ಸಮ ಸಮಾಜದ ಎರಡು ಕಣ್ಣುಗಳು ಇದ್ದಹಾಗೆ ಎಂದು ಮಾಚಗೊಂಡನ ಹಳ್ಳಿ ಬೇರುಗಂಡಿಬ್ರ ಹನ್ಮಠದ ಷ!!ಬ್ರ!!ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿ ಗಳು ಹೇಳಿದರು.

ಮೂಡಿಗೆರೆ ಮಹಾಂತಿನ ಮಠ ಆವರಣ ದಲ್ಲಿ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಹಾಗೂ ಯುವ ಘಟಕ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರು ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರು ಗಳಲ್ಲಿ ಒಬ್ಬರು ಇವರ ತತ್ವ ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆ ಗಳು ಮತ್ತು ಬಸವಣ್ಣ ನವರ ಸಾಮಾಜಿಕ ನ್ಯಾಯ ಕಾಯಕ ಯೋಗ ಮಹಿಳಾ ಸಬಲೀಕರಣ ವಿಚಾರಧಾರೆ. ಚಿಂತನೆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವ ಕ್ಕೆ ಶಾಂತಿ ಎಂಬ ಸಂದೇಶಗಳನ್ನು ಜಗದ್ಗುರು ರೇಣುಕಾಚಾರ್ಯರು ಜಗತ್ತಿಗೆ ಸಾರಿದ್ದಾರೆ. ವಿಶ್ವ ಕಂಡ ಮೇರು ವ್ಯಕ್ತಿತ್ವ ದ ದಾರ್ಶನಿಕರರಾದ ರೇಣುಕಾಚಾರ್ಯ ಹಾಗೂ ಬಸವಣ್ಣ ಇಂತಹ ಮಹನೀಯರನ್ನು ಸದಾ ಸ್ಮರಣೆ ಮಾಡಬೇಕು ಎಂದರು.

ಅಖಿಲಭರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯನಿರ್ವಾಹಕ ನಿರ್ದೇಶಕ ಡಾ!!ಮೋಹನ್ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರೇಣುಕಾಚಾರ್ಯರು ವೀರಶೈವ ಧರ್ಮ ಸ್ಥಾಪಿಸಿದರೆ ನಂತರ ಇದನ್ನು ಬಸವಣ್ಣನವರು ಶರಣ ಸಂಸ್ಕೃತಿ ಎಂದು ಪ್ರತಿ ಪಾದಿಸಿದರು ಎಂದರು.

ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ.ಹೆಚ್.ಎಂ.ಲೋಕೇಶ್ ರವರು ಮಹಿಳಾ ಘಟಕ ಮತ್ತು ಯುವ ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಆದುನಿಕ ವಚನಕಾರರಾದ ಶ್ರೀ ರುದ್ರಮೂರ್ತಿ ಎಲೆರಾoಪುರ. ಇವರಿಂದ ಸರಳ ವಚನ ಗಳಲ್ಲಿ ವೀರಶೈವ ಲಿಂಗಾಯತ ಧರ್ಮ ಎಂಬ ವಿಷಯ ದ ಅತ್ಯುತ್ತಮವಾಗಿ ಉಪನ್ಯಾಸ ನಡೆಯಿತು.
ಮಹಿಳಾ ಘಟಕದ ಅಧ್ಯಕ್ಷರಾಗಿ ರಾಜಲಕ್ಸ್ಮಿ ಕಾಂತರಾಜ್ ಮತ್ತು ಯುವ ಘಟಕದ ಅಧ್ಯಕ್ಷರಾಗಿ ಎ.ಎನ್. ಪ್ರತಾಪ್ ರವರು ಹಾಗೂ ಅವರ ತಂಡ ದವರು ಜವಾಬ್ದಾರಿ ಸ್ವೀಕರಿಸಿದರು..

ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕಎಂ ಆರ್ ಪೂರ್ಣೇಶ್ ಮೂರ್ತಿ.
ಮತ್ತು ಮಹಿಳಾ ಘಟಕದ ಅಧ್ಯಕ್ಷಣಿ ರಾಜಲಕ್ಸ್ಮಿ ಕಾಂತರಾಜ ಮಾತನಾಡಿದರು.

ಎಸ್ ಎಸ್ ಎಲ್ ಸಿ ಮತ್ತು ಪಿ
ಯು.ಸಿ.ಅತೀ ಹೆಚ್ಚು ಅಂಕ ಗಳಿಸಿದ 16.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆಡೆಸಿದರು..

ಜಿಲ್ಲಾ ಯುವ ಘಟಕಅಧ್ಯಕ್ಷ ಶಿವಕುಮಾರ್.
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ.ಕೆ.ಸಿ. ನಿಶಾಂತ್.
ರಾಜ್ಯ ಮಹಿಳಾ ನಿರ್ದೇಶಕಿ
ಶ್ರೀಮತಿ ಕಲಾರುದ್ರೇಶ್.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿಅನಿಲ್. ಕೆ ಆರ್ ದ್ರುವ ಕುಮಾರ್.
ಶ್ರೀ ರುದ್ರಮುನಿ..
ಜಿಲ್ಲಾ ನಿರ್ದೇಶಕರಾದ ಎಂ.ಡಿ.ಇಂದ್ರೇಶ್.
ಲತಾ ರವಿ.
ಜ್ಯೋತಿ ಪ್ರಭು ಕುಮಾರ್.
ಬಿ. ಬಸವರಾಜ್.ಅಶೋಕ್. ಶಿವಕುಮಾರ್.
ಕಡೂರು
ರೇಣುಕಪ್ಪ.
ಎಂ.ಸಿ.ಆದರ್ಶ.
ಬಿ. ಕೆ.ಚಂದ್ರಶೇಖರ್
ಸಿ.ಎಸ್.ಚಂದ್ರಶೇಖರ್
ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆ ಯನ್ನು ಬಿ ಎಸ್ ಒಂಕಾರ್ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ರವಿ ಪಟೇಲ್ ಕೂವೆ ರವರು ವಂದಿಸಿದರು.
ಶಕುಂತಲಾ ಪಾಟೀಲ್ ರವರು ಕಾರ್ಯಕ್ರಮ ನಿರೂಪಿಸಿದರು.

ತುಮಕೂರು ರುದ್ರಮೂರ್ತಿ ಎಲೆ ರಾಂಪುರ ಮತ್ತು ಪುಷ್ಪ ರವರಿಂದ
ಭಕ್ತಿ ಗೀತೆ ಹಾಗೂ ವಚನ ಗಾಯನ ನೆಡೆಯಿತು..

About Author

Leave a Reply

Your email address will not be published. Required fields are marked *