लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಾತ್ವಿಕ ಧ್ವನಿಯಾಗಿದೆ….

1 min read

ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಾತ್ವಿಕ ಧ್ವನಿಯಾಗಿದೆ

ಅವಿನ್ ಟಿವಿ ಸುದ್ದಿಜಾಲ: *ಕನ್ನಡ ಸಾಹಿತ್ಯ ಪರಿಷತ್ತು ಒಂದು ಸಾತ್ವಿಕ ಧ್ವನಿಯಾಗಿದೆ, ಇಂತಹ ಸಾತ್ವಿಕ ಧ್ವನಿಗೆ ಜಾತಿ ಮತ ಧರ್ಮ ಹಾಗೂ ರಾಜಕೀಯದ ಮೆರುಗು ಎಂದಿಗೂ ಇರಬಾರದು*

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಸದಸ್ಯ ಸಂಪತ್ತನ್ನು ಹೊಂದಿದ ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ. ತನ್ನದೇ ಆದ ಕನ್ನಡದ ಹಿರಿಮೆ ಗರಿಮೆಯೊಂದಿಗೆ ಶತಮಾನೋತ್ಸವವನ್ನು ಆಚರಿಸಿಕೊಂಡು ೧೧೦ವರ್ಷಗಳನ್ನು ಪೂರೈಸಿ , ಇದೇ ಮೇ ೨೦೨೫ಕ್ಕೆ ತನ್ನ ೧೧೧ನೇ ಸಂಸ್ಥಾಪನಾ ದಿನಾಚರಣೆಯನ್ನು ನಾಡಿನದ್ದಕ್ಕೂ ಅಲ್ಲಲ್ಲಿ ಆಚರಿಸಿಕೊಳ್ಳುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕಮಗಳೂರು ತಾಲೂಕು ಘಟಕ, ಚಿಕ್ಕಮಗಳೂರು ನಗರದ, ಮಾಧ್ಯಮ ಸಾಂಸ್ಕೃತಿಕ ಪ್ರತಿಷ್ಠಾನದ,ಚಿಕ್ಕೋಳಲೆ ಸದಾಶಿವ ಶಾಸ್ತ್ರಿ ಸಭಾಂಗಣದಲ್ಲಿ ಇತ್ತೀಚೆಗೆ ೧೧೧ನೇ ಸಂಸ್ಥಾಪನಾ ದಿನಾಚರಣೆಯನ್ನು ಹಮ್ಮಿಕೊಂಡು,ಕನ್ನಡ, ಕನ್ನಡಿಗ,ಕರ್ನಾಟಕ ಮಾತ್ರವಲ್ಲದೆ ಸಾಗರೋತ್ತರ ದೇಶದಲ್ಲಿ ಕಟ್ಟಿಕೊಂಡಿರುವ ಕನ್ನಡ ಕೂಟಗಳ ಮಹತ್ವ ಮತ್ತು ಮೌಲ್ಯಗಳ ಬಗ್ಗೆ ಚಿಂತನ ಮಂಥನ ನಡೆಸಿತು.

ಅಮೇರಿಕಾದ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಅಧ್ಯಕ್ಷರಾದ ರಘುನಂದನ ಹಾಲೂರು ಅವರು ಈ ಸಮಾರಂಭದಲ್ಲಿ ಭಾಗವಹಿಸಿ, ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡಿದ ಅಭಿನಂದನೆಯನ್ನು ಸ್ವೀಕರಿಸಿ, ಅಮೇರಿಕಾದಲ್ಲಿ ಅಂದಾಜು ಸುಮಾರು ಎರಡು ಲಕ್ಷ ಕನ್ನಡಿಗರಿದ್ದು, ಹಲವಾರು ಕನ್ನಡ ಕೂಟಗಳಿದ್ದು, ಎಲ್ಲ ಕನ್ನಡ ಕೋಟಗಳ ಸ್ಥಾಪನೆಗೆ ಕನ್ನಡ ಸಾಹಿತ್ಯ ಪರಿಷತ್ತು ಪ್ರೇರಣೆಯಾಗಿದೆ ಎಂದು, ಅಮೇರಿಕಾ ದೇಶದಲ್ಲಿರುವ ಕನ್ನಡ ಕೋಟಗಳ ಕನ್ನಡದ ಕೈಂಕರ್ಯದ ಬಗ್ಗೆ ಪ್ರೌಢ ಮಾತುಗಳನ್ನಾಡಿದರು.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿ ಕನ್ನಡದ ಬಗ್ಗೆ ನನ್ನ ಕಣ್ಣುಗಳು ಕಾಣುತ್ತಿರುವ ಕನಸುಗಳಿಗೆ ಈ ಜಿಲ್ಲೆಯ ಕನ್ನಡಿಗರು ದೀಪದ ಜ್ವಾಲೆಯಂತೆ ಜ್ಯೋತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೋರ್ವ ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಮರೆಯೋದುಂಟೆ ಮೈಸೂರ ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ ಎಂಬ ಹಾಡಿನ ಮೊದಲ ಚರಣದ ಮೂಲಕ ಮಾತನ್ನು ಆರಂಭಿಸಿ, ಸಂಸ್ಥಾಪನಾ ದಿನಾಚರಣೆಯ ಮಹತ್ವ ಮತ್ತು ಮೌಲ್ಯದೊಂದಿಗೆ ಸಾಹಿತ್ಯ ಪರಿಷತ್ತು ನಡೆದು ಬಂದ ಇತಿಹಾಸವನ್ನು ಮತ್ತು ವರ್ತಮಾನದಲ್ಲಿ ಅದು ಮುಂದೆ ಹೇಗೆ ಸಾಗಬೇಕು ಎಂಬ ದಿಕ್ಸೂಚಿ ಮಾತುಗಳನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾವಿನಕೆರೆ ದಯಾನಂದ ಅವರು ವಹಿಸಿದ್ದರು.

ಕನ್ನಡದ ಹರವು ವಿಶಾಲವಾದದ್ದು.
ಕನ್ನಡ.
ಕನ್ನಡಿಗ.
ಕರ್ನಾಟಕದ ಬಗ್ಗೆ ಹೆಚ್ಚಿನ ಎಚ್ಚರ ಅಗತ್ಯ, ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿರುವ ಕನ್ನಡಿಗರು ಕೊಡ, ತಾವು ಇದ್ದ ಜಾಗದಲ್ಲಿಯೇ ಕನ್ನಡದ ಹಿರಿಮೆ ಗರಿಮೆಗೆಯನ್ನು ಹೇಗೆಲ್ಲ ಎತ್ತಿ ಹಿಡಿಯಬಹುದು, ಎತ್ತಿ ಹಿಡಿಯುತ್ತಿದೆ ಎಂಬ ಧ್ವನಿ ಸಮಾರಂಭದಲ್ಲಿ ಮುಖ್ಯವಾಗಿ ಮೊಳಗಿತು.

ಈ ಸಂದರ್ಭದಲ್ಲಿ, ಕಾಯಕಯೋಗಿ ಪುರಸ್ಕಾರ ಪುರಸ್ಕೃತರಾದ ಏರೋಸ್ ಡ್ರೈ ಕ್ಲೀನ್ ಮಾಲಿಕ ಎಂ ಎನ್ ಆನಂದ್. ಮಾಧ್ಯಮ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಭುಲಿಂಗಶಾಸ್ತ್ರಿ. ತಾಲೂಕು ಮಹಿಳಾ ಕಸಾಪ ಘಟಕದ ಅಧ್ಯಕ್ಷಿಣೆ ವಿಜಯಲಕ್ಷ್ಮಿ ವಿಶ್ವನಾಥ್. ಪ್ರಶಾಂತಿ ಕುವೆಲೋ. ಆಶಾ ರಾಜು. ನಿಕಟ ಪೂರ್ವ ಅಧ್ಯಕ್ಷರಾದ ಬಿಸಲೇಹಳ್ಳಿ ಸೋಮಶೇಖರ್. ಹುಣಸೆಮಕ್ಕಿ ಲಕ್ಷ್ಮಣ್ . ನಿವೃತ್ತ ಶಿಕ್ಷಕರಾದ ಹರಿಯಯ್ಯ. ಹಳೇಬೀಡು ಬಸವರಾಜ್. ಡಾ. ಜಕ್ಕನಹಳ್ಳಿ ಸತೀಶ್. ಜಿಲ್ಲಾ ಕಹಳೆ ಪತ್ರಿಕೆ ಸಂಪಾದಕ ಅಶೋಕ್. ಉಮೇಶ್. ಉಪನ್ಯಾಸಕ ಸಂದೀಪ್ ಟಿ. ಡಾ. ಅಹಮದ್ ಶರೀಫ್ . ಸುರೇಶ್ ಈ.ಜಿ.ಮುಂತಾದವರು ಉಪಸ್ಥಿತರಿದ್ದರು.
•••••••••••✒️
ಡಿ.ಎಂ.ಮಂಜುನಾಥಸ್ವಾಮಿ
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *