ಪ್ರಭುತ್ವದ ಸ್ಥಾನ ಭದ್ರತೆಗಾಗಿ ಶತಮಾನಗಳಿಂದ ತುಳಿಯಲ್ಪಟ್ಟ ಹೊಲಯ,ಮಾದಿಗ ಜಾತಿಗಳ ಲೋಕಾರ್ಪಣೆ “.
1 min read
” ಪ್ರಭುತ್ವದ ಸ್ಥಾನ ಭದ್ರತೆಗಾಗಿ ಶತಮಾನಗಳಿಂದ ತುಳಿಯಲ್ಪಟ್ಟ ಹೊಲಯ,ಮಾದಿಗ ಜಾತಿಗಳ ಲೋಕಾರ್ಪಣೆ “. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರು ಜಾತಿ ವಿನಾಶವಾಗದ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ ಎಂದರಲ್ಲದೆ , “ಜಾತಿ ವಿನಾಶ ” ಎಂಬ ಪತ್ರಿಕೆಯನ್ನೇ ತಂದರು ಶೋಷಿತರು ದಮನಿತರು ಎಂದರಲ್ಲದೆ ಹೊಲಯ ಮಾದಿಗ ಎಂಬ ಪದವನ್ನು ಬಳಸಲೇ ಇಲ್ಲ… .. ಮುಂದುವರೆದಂತೆ 1974ರಲ್ಲಿ ಶೋಷಿತರ ಧ್ವನಿಯಾದಂತಹ ಡಿ.ಎಸ್.ಎಸ್.”ಜಾತಿ ಬಿಡಿ ಮತಬಿಡಿ, ಮಾನವತೆಗೆ ಜೀವ ಕೊಡಿ”. ಎಂಬಾ ಘೋಷವಾಕ್ಯದೊಂದಿಗೆ ಇಡೀ ರಾಜ್ಯದಲ್ಲಿ ಎಲ್ಲಾ ಬಡವರ ಧ್ವನಿಯಾಗಿತ್ತು. ಆ ಕಾಲದಲ್ಲಿ ಹೋರಾಟ ಮಾಡಿದ ಅದೆಷ್ಟು ನಾಯಕರು ಹೊಲಯ ಮಾದಿಗ ಎಂದ ತಕ್ಷಣ ಉರಿದು ಕೆಂಡಮಂಡಲವಾಗುತ್ತಿದ್ದರು. ಅದೇ ನಾಯಕರು ಈಗ ಪತ್ರಿಕಾ ಹೇಳಿಕೆ ನೀಡುತ್ತಾ, ಹೊಲಯರು ಮಾದಿಗರು ಶ್ರೇಷ್ಠ ಜಾತಿ ಎಂದು ಪ್ರಚಾರ ಮಾಡುತ್ತಿರುವುದೆಕೇ? ನೀವು ಕೂಗಾಡಿದ, ಹಾರಾಡಿದ ನಿಮ್ಮ ಜಾತಿ ದೌರ್ಜನ್ಯದ ಅಟ್ರಾಸಿಟಿ ಮೊಕದ್ದಮೆ ಏನಾಯಿತು?? ಅಂಬೇಡ್ಕರ್ ಅವರ ಜಾತಿ ವಿನಾಶದ ಕಲ್ಪನೆ ಏನಾಯಿತು?? ಉತ್ತರ ಒಂದೇ ಪ್ರಭುತ್ವದ ಒಳ ಮೀಸಲಾತಿ,, ಸರ್ಕಾರಿ ಉದ್ಯೋಗ ನೀಡುತ್ತಿದ್ದ 9 ಕ್ಷೇತ್ರಗಳು ಖಾಸಗಿಕರಣಗೊಂಡಿವೆ ಆ ಕ್ಷೇತ್ರದಲ್ಲಿ ಮೀಸಲಾತಿ ಕೊಡುತ್ತೇವೆ ಎಂತಲೋ, ಅಥವಾ ಲಕ್ಷಾಂತರ ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇವೆ ಅವುಗಳನ್ನು ತುಂಬುತ್ತೇವೆ.ಎಂತಲೋ ಅಥವಾ ಜಾತಿಗಣತಿ ನಂತರ ಸಾಲು ಸಾಲು ಸರ್ಕಾರಿ ಉದ್ಯೋಗಗಳನ್ನು ಕರೆಯುತ್ತೇವೆ ಎಂತಲೂ ಅಥವಾ ಹೊಲಯ, ಮಾದಿಗ ಪ್ರತಿ ಕುಟುಂಬಗಳಿಗೆ 05 ಎಕರೆ ಭೂಮಿಯನ್ನು ನೀಡುತ್ತೇವೆ ಎಂದು ಜಾತಿ ಗಣತಿಯ ಮುಂಚಿತವಾಗಿ ಯಾವುದಾದರೂ ಒಪ್ಪಂದ ಆಗಿದೆಯೇ????? ಮಲೆನಾಡಿನಂತಹ ಜಿಲ್ಲೆಯ ಭೂಮಿಯನ್ನು ಭೂಮಾಲೀಕರಿಗೆ ಪ್ರತಿ ಕುಟುಂಬಕ್ಕೆ 25 ಎಕರೆಯನ್ನು 30 ವರ್ಷಕ್ಕೆ ಗುತ್ತಿಗೆ ನೀಡಲು, ಮಾಜಿ, ಹಾಲಿ ಶಾಸಕರು ತಂಡೋಪ ತಂಡವಾಗಿ ಹೋಗಿ ಮೇಜನ್ನು ಕುಟ್ಟಿ ಕೊಡಿಸಲು ಮುಂದಾಗಿರುವ ಸಂದರ್ಭದಲ್ಲಿ, ಮಲೆನಾಡಿನ ಬಹುಸಂಖ್ಯಾತ ಕಾರ್ಮಿಕ ಜೀವಿಗಳು ಕೂಲಿ ಲೈನ್ ಗಳಲ್ಲಿ ಜೀತಾ ಮಾಡುತ್ತಿರುವ ಸಂದರ್ಭದಲ್ಲಿ ಜಾತಿಗಣತಿಯಿಂದ ಮುಕ್ತಿ ಸಿಗುತ್ತದೆಯೇ??? ಜಾತಿಗಣತಿ ನೊಂದವರ ಬೆಳಕಾಗಬಹುದೇ??????????
✍️ ಹರೀಶ್ ನಲ್ಕೆ