लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಪೊಲೀಸ್ ಅಪಘಾತ ಮಾಡಲು ಹೊರಟಿದ್ದೀರ

ಇದು ಸಕಲೇಶಪುರ ಮೂಡಿಗೆರೆಯ ಪ್ರಮುಖ ರಾಜ್ಯ ಹೆದ್ದಾರಿ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟದಮನೆ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಮೂಡಿಗೆರೆ ಪೊಲೀಸ್ ಬ್ಯಾರಿಕೇಡ್ ಹಾಕಿರುವ ಪರಿ,
ದೇಶದ ಆಂತರೀಕ ಸುರಕ್ಷತೆ ದೃಷ್ಟಿಯಿಂದ ಆವಾಗವಾಗ ವಾಹನ ತಪಾಸಣೆ ನಡೆಸುವುದು ಒಳ್ಳೆಯದೆ, ಆದರೆ ಅಂತ ತಪಾಸಣ ಸ್ಥಳಗಳು ಎಲ್ಲಿರಬೇಕು, ರಸ್ತೆ ತಿರುವಿನಲ್ಲ ?. ನೀವೇ ನೋಡಿ, ಮೂಡಿಗೆರೆ ಕಡೆ ಇಂದ ಬರುವಾಗ ವಾಹನ ಚಾಲಕರಿಗೆ ಸರಿಯಾಗಿ ಕಾಣದ ಹಾಗೆ ಎಡ ಭಾಗದ ರಸ್ತೆಗೆ ಬ್ಯಾರಿ ಕೇಡ್ ಅಳವಡಿಸಿದ್ದಾರೆ, ದೂರಕ್ಕೆ ಕಾಣುವುದಿಲ್ಲ, ಹತ್ತಿರ ಬಂದ ತಕ್ಷಣ ವಾಹನ ಸವಾರರು ಬಲಕ್ಕೆ ತೆಗೆದುಕೊಂಡರೇ ಈ ಕಡೆ ಸಕಲೇಶಪುರ ದಿಂದ ಬರುವ ವಾಹನ ಸವಾರರಿಗೂ ತಿರುವಿನಲ್ಲಿ ಅವರ ಎಡ ಭಾಗದಲ್ಲಿ ಬ್ಯಾರಿ ಕೇಡ್ ಹಾಕಿದ್ದಾರೆ ಅವಾಗ ಅವರು ಸಹ ಬಲಕ್ಕೆ ತೆಗೆದುಕೊಂಡರೆ ಪುಕ್ಸಟೆ ಅಪಘಾತ ಆಗುವದು ನಿಶ್ಚಿತ.

ರಸ್ತೆ ಸಂಚಾರವನ್ನ ಸುಗುಮ ಮಾಡಬೇಕಾದ ಪೊಲೀಸ್ ರೆ ಈ ರೀತಿ ವರ್ತಿಸುವುದು ಎಷ್ಟು ಸರಿ, ಅಲ್ಲೇ ಸ್ವಲ್ಪ ಮುಂದೆ ನೇರ ಮತ್ತು ವಿಶಾಲವಾದ ರಸ್ತೆ ಇದೆ, ಅಲ್ಲಿ ರಸ್ತೆಯ ಎರಡು ಕಡೆ ಸಂಚರಿಸುವ ವಾಹನಗಳಿಗೆ ಬ್ಯಾರಿಕೇಡ್ ಹಾಕಿದರೆ ದೂರದಿಂದ ಸ್ಪಷ್ಟವಾಗಿ ಕಾಣುತ್ತದೆ, ವಾಹನದ ವೇಗವನ್ನ ನಿದಾನ ಮಾಡ ಬಹುದು, ಅದು ಬಿಟ್ಟು ಈ ತಿರವು ಯಾಕೆ,ನಿಮ್ಮ ಆಯ್ಕೆ ನೆರಳು ಇದೆ ಅಂತಾನಾ, ಯಾವನು ಏನಾದ್ರು ಹಾಳಾಗಿ ಹೋಗಲಿ ನಾವು ಅರಾಮ್ ಇರಬೇಕು ಅನ್ನುವ ಮನೋಭಾವನೆ ಅಲ್ಲವೇ. ಅಲ್ಲಿ ನೆರಳು ಬೇಕಾದರೆ ವ್ಯವಸ್ಥೆ ಮಾಡಿಕೊಳ್ಳಿ ನಿಮ್ಮ ಕರ್ತವ್ಯಕ್ಕೆ,
ಸ್ವತಂತ್ರ ಬಂದು 78 ವರ್ಷ ಕಳೆದರು ಇನ್ನು ಬ್ರಿಟೀಶ್ colonial ಮಾನಸಿಕತೆ ಪೊಲೀಸ್ ಇಲಾಖೆ ಬಿಟ್ಟಿಲ್ಲವೇ ಕೆಲವು ಜನ ಸ್ನೇಹಿ ಅಧಿಕಾರಿಗಳನ್ನ ಹೊರತು ಪಡಿಸಿ.
ಇನ್ನು ಯಾವಾಗ ಜನ ಸ್ನೇಹಿ ಆಗುವುದು ?

ಪ್ರಜಾಪ್ರಭುತ್ವ ದಲ್ಲಿ ಎಲ್ಲಾ ಇಲಾಖೆಯು ಪ್ರಜೆಗಳ ಸೇವೆಗೆ ಇರುವುದು, ಅದರಲ್ಲಿ ಪೊಲೀಸ್ ಇಲಾಖೆ ಹೊರತಲ್ಲ,
ಇನ್ನಾದರೂ ಮೇಲಿನ ಅಧಿಕಾರಿಗಳು ಈ ವಿಚಾರವಾಗಿ ಗಮನಹರಿಸುವರೆ
ಈಗಿರುವ ಜಾಗದಲ್ಲಿ ಏನಾದರೂ ಅಪಘಾತ ನಡೆದರೆ ಅದಕ್ಕೆ ಪೊಲೀಸ್ ಇಲಾಖೆಯೆ ನೇರ ಹೊಣೆ

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *