ಮೇ.18 ಜೈನ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಿರಿ ಪ್ರಶಸ್ತಿಗೆ ಮೂವರು ಆಯ್ಕೆ….
1 min read
ಮೇ.18 ಜೈನ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಿರಿ ಪ್ರಶಸ್ತಿಗೆ ಮೂವರು ಆಯ್ಕೆ
ಕಳಸ: ಕಳಸದ ಕೆಳಂಗಡಿಯಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪ೦ಚಕಲ್ಯಾಣ ಹಾಗೂ ನೂತನ ಬಸದಿಯ ಲೋಕಾ ರ್ಪಣೆ ಮತ್ತು ಧಾರ್ಮಿಕ ಕಾರ್ಯ ಕ್ರಮಗಳು ಮೆ.18 ರಿಂದ ಮೇ.22 ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ವಾಹಿನಿಯೊಂದಿಗೆ ಮಾತನಾಡಿ ಈ ವಿಷಯ ತಿಳಿಸಿರುವ ಅವರು, ಮೇ.18 ರಂದು ರಾಜ್ಯ ಪ್ರಥಮ ಜೈನ ಸಾಹಿತ್ಯ ಸಮ್ಮೇಳನ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಳಸ ಶ್ರೀ 1008
ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆಸಲು ಸ್ವಾಗತ ಸಮಿತಿ ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ‘ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ರಾಜ್ಯದ ಮೂವರಿಗೆ ಕೊಡಮಾಡಲಾಗುತ್ತಿದ್ದು, ಡಾ. ಪದ್ಮನಿ ನಾಗರಾಜ್, ಲೇಖಕಿ ಹಾಗೂ ಪ್ರಾಧ್ಯಾಪಕಿ ಬೆಂಗಳೂರು ಹಾಗೂ ದೇವೇಂದ್ರಪ್ಪ ಎನ್ ಅಕ್ಕಿ ವಿಶ್ರಾಂತ ಶಿಕ್ಷಕರು, ಇಂಡಿ-ವಿಜಯಪುರ, ಜೈನ ಕವಿಗಳು-ಇತಿಹಾಸ ಸಂಶೋಧಕರು, ರಾಷ್ಟ್ರಪತಿ ಪದಕ ಪಡೆದ ಶಿಕ್ಷಕರು-ವ್ಯಂಗ್ಯಚಿತ್ರಕಾರರು. ಆರು ಕೃತಿಗಳು ಬಿಡುಗಡೆಯಾಗಿವೆ.
ಡಾ. ಅಪ್ಪಣ್ಣ ಹಂಜೆ ಜೈನ ಇತಿಹಾಸ ಸಂಶೋಧಕರು, ಸಹಾಯಕಪ್ರಾಧ್ಯಾಪಕರು, ಇತಿಹಾಸ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು-ಹುಲಕೋಟಿ, ಹತ್ತು ಸಂಶೋಧನಾ ಗ್ರಂಥಗಳು ಬಿಡುಗಡೆಯಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.