ವಿದ್ಯಾರ್ಥಿಗಳಿಗೆ ಪ್ರೋತ್ಸಾಯಿಸಿ ಸನ್ಮಾನ…..
1 min read
ವಿದ್ಯಾರ್ಥಿಗಳಿಗೆ ಪ್ರೋತ್ಸಾಯಿಸಿ ಸನ್ಮಾನ.
ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಪ್ರೋತ್ಸಾಹಿಸುವ ಉದ್ದೇಶದಿಂದ ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಶಿವಾನಂದ ಮತ್ತು ಚಾಂದಿನಿ ದಂಪತಿಯ ಪುತ್ರಿ ಭೇಥನೀ ಶಾಲೆಯ ವಿದ್ಯಾರ್ಥಿನಿ ಅಪೇಕ್ಷ, ಹಾಗೂ ಬಾಲ ಕೃಷ್ಣ, ಸಾಧನ ದಂಪತಿಯ ಪುತ್ರಿ ಎಲೈಟ್ ಮೇಂಟ್ ಶಾಲೆಯ ವಿದ್ಯಾರ್ಥಿನಿ ಇಂದುಶ್ರೀ, ಗಿರೀಶ್ ಮತ್ತು ಸಾಧನ ದಂಪತಿಯ ಪುತ್ರ, ಅಂತರರಾಷ್ಟ್ರೀಯ ಚೆಸ್ ಆಟಗಾರ, ಎಲೈಟ್ ಮೇಂಟ್ ಶಾಲೆಯ ವಿದ್ಯಾರ್ಥಿ ಪ್ರೇರಣ್ ಎಂ ಜಿ ಹಾಗೂ ಹೊಯ್ಸಳ ಶಾಲೆಯ ವಿದ್ಯಾರ್ಥಿ ಸೋಹನ್ ಸೋಮಯ್ಯ ಅವರನ್ನೂ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಜೆ ಸಿ ಅಧ್ಯಕ್ಷ ಜಗತ್ ಬಿ ಎಂ, ನಿಕಟ ಪೂರ್ವ ಅಧ್ಯಕ್ಷ ಆದರ್ಶ ಹೆಚ್ ಜೀ, ಪೂರ್ವ ಅಧ್ಯಕ್ಷ ಯೋಗೀಶ್ ಕುಮಾರ, ಸತ್ಯಕುಮಾರ, ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಿವಾನಂದ, ಚೆಸ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಗಿರೀಶ್ ಮಣ್ಣಿಕೆರೆ ಹಾಗೂ ವಿದ್ಯಾರ್ಥಿಗಳ ಪೋಷಕರು, ಜೆಸಿ ಸದಸ್ಯರು ಉಪಸ್ಥಿತರಿದ್ದರು