
……ನಿಧನ….
ಪಲ್ಗುಣಿಸತೀಶ್
(45) ಇನ್ನಿಲ್ಲ.
ಫಲ್ಗುಣಿ ಸತೀಶ್ ಗೆ ಅಂತಿಮ ನಮನ ಸಲ್ಲಿಸಿದ ಬಿಎಸ್ಪಿ ನಾಯಕರು….😔😔😔😔
ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮದ ಸತೀಶ್ (45) ಅಕಾಲಿಕ ಮರಣ ಹೊಂದಿದ್ದು ಇವರಿಗೆ ಒಂದು ಹೆಣ್ಣು ಒಂದು ಗಂಡು ಮಗು ಪತ್ನಿ ಶಾಂತ ದಿಕ್ಕೆ ತೋಚದಂತೆ ಪರಿಸ್ಥಿತಿಯಲ್ಲಿ ಇದ್ದದ್ದು ಮನ ಕಲಾಕುವಂತಿತ್ತು , ಸತೀಶ್ ಒಬ್ಬ ಆಟೋ ಚಾಲಕ ವೃತ್ತಿಯಲ್ಲಿದ್ದು ಅಲ್ಲದೆ ಬಹುಜನ ಸಮಾಜ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಅಂತಿಮ ನಮನ ಸಲ್ಲಿಸಿ ಜಿಲ್ಲಾ ಸಂಯೋಜಕರಾದ ಯು ಬಿ ಮಂಜಯ್ಯ ಮಾತನಾಡಿ ಸತೀಶ್ ಒಬ್ಬ ಪಾರ್ಟಿಯ ಅತ್ಯಂತ ಕ್ರಿಯಾಶೀಲ ಕಾರ್ಯಕರ್ತ ಚುನಾವಣೆ ಬಂದಾಗ ತಮ್ಮನ್ನು ಮಾರಿಕೊಂಡು ಕೆಲಸ ಮಾಡುವವರ ನಡುವೆ ಇಂತಹ ನಿಷ್ಠಾವಂತ ಕಾರ್ಯಕರ್ತ ಇದ್ದಿದ್ದು ಒಂದು ಪಕ್ಷದ ಹೆಮ್ಮೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಬೆಟ್ಟಗೆರೆ ಶಂಕರ್ ಮಾತನಾಡಿ- ಕಾರ್ಯಕ್ರಮದಲ್ಲಿ ಶಿಸ್ತು ಅತ್ಯಂತ ಗಟ್ಟಿ ಸಂಘಟನೆ ಮಾಡಿದ ಒಬ್ಬ ಪ್ರಾಮಾಣಿಕ ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ತುಂಬಲಾರದ ನಷ್ಟ ಆದರೂ ಯಾರು ಶಾಶ್ವತವಲ್ಲ ಸತೀಶ್ ರಂತ ಪ್ರಾಮಾಣಿಕತೆ, ನಿಷ್ಠೆ ಎಲ್ಲರನ್ನೂ ಬರಬೇಕು ಆ ಕುಟುಂಬಕ್ಕೆ ಪಕ್ಷ ಎಂದೆಂದೂ ಜೊತೆಯಾಗಿ ನಿಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಬಕ್ಕಿ ಮಂಜುನಾಥ್, ಬಕ್ಕಿ ರವಿ, ಹೊನ್ನೇಶ್, ಕುಮಾರ್ ಕೋಳೂರು, ಲಕ್ಷ್ಮಣ್ ದೊಡ್ಡಯ್ಯ, ಗಣೇಶ್, ರಮೇಶ್, ನಾಗೇಶ್, ಜಾಣಯ್ಯ ,ಗಣೇಶ್,ಪ್ರಕಾಶ್ , ಕುಮಾರ್,ಹಾಗು ಕುಟುಂಬದವರು ಗ್ರಾಮಸ್ಥರು, ಬಂದುಗಳು ಇದ್ದರು.