AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; fileterIntensity: 0.0; filterMask: 0; captureOrientation: 90; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;

ಬಡ್ಡಿ ದಂಧೆಕೋರರ ಕಿರುಕುಳ : ಆತ್ಮಹತ್ಯೆ ಯತ್ನ

ಸಕಲೇಶಪುರ.
ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೆ ಕೋಳಿ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ರುವ ಘಟನೆ ಸಕಲೇಶಪುರ ತಾಲ್ಲೂಕು ಬಾಳುಪೇಟೆಯಲ್ಲಿ ನಡೆದಿದೆ.

ಮೊಹಮ್ಮದ್ ತನ್ನೀರ್ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬಾಳು ಪೇಟೆಯ ಸಂತೆ ಮೈದಾನದಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಆತ ಕಳೆದ ಮೂರು ವರ್ಷಗಳ ಹಿಂದೆ ಎಂಟು ಮಂದಿಯಿಂದ ಸುಮಾರು 5 ಲಕ್ಷ ರೂ.ವರೆಗೆ ಸಾಲ ಪಡೆದಿದ್ದ. ಅದಕ್ಕೆ ಬಡ್ಡಿಯನ್ನೂ ಪಾವತಿ ಮಾಡುತ್ತಿದ್ದ.

ಆದರೆ ಕೆಲವು ಕಾರಣಗಳಿಂದ ಕಳೆದ 3 ವಾರಗಳಿಂದ ಬಡ್ಡಿ ಕಟ್ಟಿಲ್ಲ ಎನ್ನುವ ಕಾರಣಕ್ಕೆ ನೀಡಿದ್ದ ಕೆಲವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ. ಕೆಲವು ದಿನಗಳ ಸಮಯ ಕೊಡಿ, ಬಡ್ಡಿ ಹಣವನ್ನು ಕೊಡುತ್ತೇನೆಂದು ಕೇಳಿಕೊಂಡರೂ ಸುಮ್ಮನಾಗದೇ ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆತ, ಅದಕ್ಕೂ ಮುನ್ನ ವಿಡಿಯೋ ಮಾಡಿ, ತನ್ನಿಂದ ಮನಸ್ಸಿಗೆ ಬಂದಷ್ಟು ಬಡ್ಡಿ ವಸೂಲಿ ಮಾಡಿದ್ದಲ್ಲದೇ ಕಿರು ಕುಳ ನೀಡಿದ ವ್ಯಕ್ತಿಗಳ ಬಗ್ಗೆ ಹೇಳಿ ಕೊಂಡಿದ್ದಾನೆ.

ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊಹಮ್ಮದ್ ತನ್ನೀರ್ ನೀಡಿದ ದೂರು ಆಧರಿಸಿ ಅರುಣ್ ಕುಮಾರ್, ಸತೀಶ, ಸ್ವಾಮಿ, ದುಶ್ಯಂತ್, ಅಮೀರ್, ಪುಟ್ಟಣ್ಣ, ಸುನೀಲ್, ರಾಜಣ್ಣ ಅವರ ವಿರುದ್ಧ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖ ಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About Author

Leave a Reply

Your email address will not be published. Required fields are marked *