लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಯಪ್ರಕಾಶ್.ವಿ ಅವರಿಗೆ ಬೀಳ್ಕೊಡುಗೆ ಸಮಾರಂಭ..

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ., ಮೂಡಿಗೆರೆ ಶ್ರೀ ಜಯಪ್ರಕಾಶ್.ವಿ ಅವರಿಗೆ ಬೀಳ್ಕೊಡುಗೆ ಸಮಾರಂಭ….
ಮೂಡಿಗೆರೆ: ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಮೂಡಿಗೆರೆ ಶ್ರೀ ಜಯಪ್ರಕಾಶ್.ವಿ ಅವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ, ಮೂಡಿಗೆರೆ ವಕೀಲರ ಸಂಘದ ವತಿಯಿಂದ ಅವರ ಗೌರವಾರ್ಥ ಇಂದು ಸಂಘದ ಸಭಾಂಗಣದಲ್ಲಿ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವು ನ್ಯಾಯಾಧೀಶ ಶ್ರೀ ಜಯಪ್ರಕಾಶ್.ವಿ ಅವರ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ವಿಶ್ವನಾಥ್.ಎ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಮೂಡಿಗೆರೆ ಮತ್ತು ಶ್ರೀಮತಿ ಸುರಕ್ಷಾ.ಕೆ.ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ., ಮೂಡಿಗೆರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಭೆಯನ್ನು ಉದ್ದೇಶಿಸಿ ನ್ಯಾಯಾಧೀಶ ಶ್ರೀ ಜಯಪ್ರಕಾಶ್.ವಿ ಅವರು ಮಾತನಾಡಿ, ಮೂಡಿಗೆರೆಯಲ್ಲಿ ಹೊಂದಿದ್ದ ತಮ್ಮ ನ್ಯಾಯಾಂಗ ಸೇವಾ ಅನುಭವಗಳು ಮತ್ತು ವಕೀಲರೊಂದಿಗೆ ಬೆಸೆದುಕೊಂಡ ಸ್ನೇಹಪೂರ್ಣ ಸಂಬಂಧಗಳ ಬಗ್ಗೆ ಆತ್ಮೀಯವಾಗಿ ಅಭಿವ್ಯಕ್ತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಕೀಲರ ಸಂಘದ ಅಧ್ಯಕ್ಷ ಶ್ರೀ ಹೇಚ್.ಕೆ. ದೇವರಾಜ್ ಅವರು, ನ್ಯಾಯಾಲಯ ಮತ್ತು ವಕೀಲರ ನಡುವೆ ಇರುವ ಪರಸ್ಪರ ಗೌರವ, ಸಹಕಾರ ಮತ್ತು ವಿಶ್ವಾಸದ ಸಂಬಂಧ ಸದಾ ಬಲವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಸಹಾಯಕ ಸರ್ಕಾರಿ ಅಭಿಯೊಜಕರಾದ ಶ್ರೀಮತಿ ರೂಪ ಮತ್ತು ಶ್ರೀಮತಿ ರೇಣುಕ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಹಿರಿಯ ವಕೀಲರಾದ ಶ್ರೀ ಕೆ.ಎಂ. ಪ್ರಶಾಂತ್, ಶ್ರೀ ಬಿ. ಜಗದೀಶ್ ಮತ್ತು ಶ್ರೀ ಎಂ.ವಿ. ಜಯರಾಜ್, ಜೊತೆಗೆ ಡಿ.ಕೆ. ಪ್ರಸನ್ನ, ಬಿ.ಟಿ. ನಟರಾಜ್, ಹೆಚ್.ಕೆ. ರಘು, ಬಿ.ಎ. ಸುರೇಶ್, ಹರ್ಷನಾಥ್, ಸುಧೀಪ್ ಮತ್ತು ಇತರ ಎಲ್ಲಾ ವಕೀಲ ಸದಸ್ಯರು, ಶ್ರೀ ಜಯಪ್ರಕಾಶ್.ವಿ ಅವರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಕೀಲ ಶ್ರೀ ಕೆ.ಸಿ. ಚಂದ್ರಶೇಖರ್ ಅವರು ಪ್ರಾರ್ಥನೆ ನೆರವೇರಿಸಿದರು. ವಕೀಲರಾದ ಕುಮಾರಿ ರಿಯಾ ಅವರು ಸ್ವಾಗತ ಭಾಷಣ ನೀಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಎಂ. ರಾಘವೇಂದ್ರ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ವಂದನೆಯನ್ನು ನೆರವೇರಿಸಿದರು.

About Author

Leave a Reply

Your email address will not be published. Required fields are marked *