लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲೆಯ ಭೂ ಸಮಸ್ಯೆಯ ಪರಿಹಾರಕ್ಕೆ ವೇದಿಕೆ ಸಿದ್ಧ: ಬಿ.ರುದ್ರಯ್ಯ…..

1 min read

ಜಿಲ್ಲೆಯ ಭೂ ಸಮಸ್ಯೆಯ ಪರಿಹಾರಕ್ಕೆ ವೇದಿಕೆ ಸಿದ್ಧ: ಬಿ.ರುದ್ರಯ್ಯ.

ಚಿಕ್ಕಮಗಳೂರು: ಭೂ ಸಂಘರ್ಷವಾಗದೆ ಭೂಮಿ ಸಿಗದು, ಈ ನಿಟ್ಟಿನಲ್ಲಿ ವೇದಿಕೆ ಸಿದ್ಧಪಡಿಸ ಲಾಗುತ್ತಿದೆ ಎಂದು ಸಿಪಿಐ(ಎಂ.ಎಲ್.) ರೆಡ್ ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಮೂಡಿಗೆರೆ ತಾಲೂಕಿನಲ್ಲಿ ಬಡವರು ಮನೆಕಟ್ಟಿ ಕೊಳ್ಳಲು ನಿವೇಶನವಿಲ್ಲ, ದುಡಿದು ತಿನ್ನುವ ಜನರು ಬಾಡಿಗೆಮನೆ, ಕೂಲಿ ಲೈನಿನಲ್ಲಿ ದಿನದೂಡುತ್ತಿದ್ದಾರೆ. ಶಾಸಕಿ ನಯನಮೋಟಮ್ಮ ಬಡವರ ಬಗ್ಗೆ ಚಿಂತಿಸುವುದಿಲ್ಲ, ಶ್ರೀಮಂತರ ಪರವಾಗಿ ವಿಧಾನಸಭೆಯಲ್ಲಿ ಮಾತನಾಡುತ್ತಾರೆಂದು ಟೀಕಿಸಿ, ಜಿಲ್ಲೆಯಿಂದ ಗೆದ್ದಿರುವ 5.ಮಂದಿ ಶಾಸಕರು ಉಳ್ಳವರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿದರು.

ಬಡತನದ ಬೇಗೆಯಲ್ಲಿ ನೊಂದು ಬೆಂದವರಿಗೆ ಬಡವರ ಸಮಸ್ಯೆ ಅರ್ಥವಾಗುತ್ತದೆ. ಗಾಜಿನ ಮನೆಯಲ್ಲಿ ಕುಳಿತುಕೊಳ್ಳುವರಿಗೆ ಬಡವರ ಗೋಳು ಕೇಳಿಸುವುದಿಲ್ಲ. ಮೂಡಿಗೆರೆ ಶಾಸಕರ ಮನೆಗೆ ಸಮಸ್ಯೆಹೊತ್ತು ಹೋದವರಿಗೆ ನ್ಯಾಯ ದೊರಕುತ್ತಿಲ್ಲ. ನಾನು ಹೇಳುವುದನ್ನೆ ಕೇಳಬೇಕೆಂಬ ಉದ್ದಟತನ ಸರಿಯಲ್ಲ, ಇದೇ ಧೋರಣೆ ಮುಂದುವರೆದರೆ
ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆಂದು ಎಚ್ಚರಿಸಿದರು.

ಮೂಡಿಗೆರೆ ತಾಲೂಕಿನಲ್ಲಿ ಅಕ್ರಮ ಭೂ ಮಂಜೂರಾತಿಯಾಗಿದೆ. 1350 ಪ್ರಕರಣದಲ್ಲಿ ಅಕ್ರಮಖಾತೆ ಮಾಡಿಕೊಡುವ ಮೂಲಕ ರಾಜ್ಯದ ಗಮನ ಸೆಳೆದಿದೆ.ಈಗಾಗಲೇ ಉಪವಿಭಾಗಾಧಿಕಾರಿಗಳು 500 ಪಹಣಿಯನ್ನು ರದ್ದುಪಡಿಸಿದ್ದಾರೆ ಆದರೆ ಈ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿಲ್ಲ. ಸಾಗುವಳಿ ನಿರಂತರವಾಗಿ ಮುಂದುವರೆದಿದೆ. 30ಸಾವಿರ ಒತ್ತುವ ರಿಯಲ್ಲಿ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿಲ್ಲ, ಇವರ ಪರವಾಗಿ ಶಾಸಕರುಗಳು ಕೆಲಸ ನಿರ್ವಹಿಸುತ್ತಾರೆಂದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಅಧ್ಯಕ್ಷತೆವಹಿಸುವರು. ಶಾಸಕಿ ನಯನಮೋಟಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ವಕೀಲ ರಂಗಸ್ವಾಮಿ, ಮೈಸೂರು ಕಂದೇಗಾಲು ಶ್ರೀನಿವಾಸ, ವಕೀಲರ ಸಂಘದ ಉಪಾಧ್ಯಕ್ಷ ಹೆಚ್. ಕೆ.ರಘು ಅಂಬೇಡ್ಕರ್ ಕುರಿತು ಮಾತನಾಡು ವರು. ರಾಯಚೂರಿನ ಎಂ.ಗಂಗಾಧರ ಕಾರ್ಮಿಕ ದಿನಾಚರಣೆ శురితు ಮಾತನಾಡುವರು. ಪಂಚಾಯಿತಿ ಅಧ್ಯಕ್ಷೆ ರಂಜಿತ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ,ವಕೀಲ ಪರಮೇಶ್, ಕಾಂಗ್ರೆಸ್ ವಕ್ತಾರ ಅನಂತ್, ಅಂಗಡಿ ಚಂದ್ರು, ಹುಣಸೇಮಕ್ಕಿ ಲಕ್ಷ್ಮಣ್. ಮೊಹಮ್ಮದ್ ಜುಬೇರ್, ಜ್ಯೋತಿಸಾಲನ, ಜಾನಕಿ, ಅಜಿತ್, ಸಫೀಯ, ಶಿವಾನಂದ, ಗಣೇಶ್, ಪ್ರಸನ್ನ, ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ, ಗುರುಶಾಂತಪ್ಪ, ಯು.ಬಿ.ಮಂಜಯ್ಯ, ದೇವರಾಜ್, ಉಮೇಶ್, ಪ್ರಶಾಂತ್, ಮಹೇಂದ್ರಮೌರ್ಯ, ಮಂಜುನಾಥ, ಮಂಜುನಾಥ,ಅಕ್ರಂ, ಇಬ್ರಾಹಿಂ.ಹಮೀದ್, ಕೆ.ವೈ. ಇಬ್ರಾಹಿಂ, ಗೋಪಾಲ್,ರಾಮು, ಸಿದ್ದೇಶ್, ಸುಂದ್ರೇಶ್, ದಯಾನಂದ. ಪ್ರಸನ್ನ, ನಾಗೇಶ್, ಸಂದೀಪ್, ಶಿವಪ್ಪ, ಶಂಕರ್ ಮುಖ್ಯ ಅತಿಥಿಗಳಾಗಿ ಆಗಮಿಸುವರೆಂದರು.

ನಮೂನೆ 53.57..ರಲ್ಲಿ ಅಧಿಕಾರಿಗಳು ಭೂಮಾಲೀಕರ ಪರವಾಗಿ ಕೆಲಸಮಾಡುತ್ತಿದ್ದಾರೆ. ಖಾತೆ ಮಾಡಿ ಕೊಡುವ ಹುನ್ನಾರಗಳು ನಡೆಯುತ್ತಿವೆ. ಬಡವರ ಅರ್ಜಿಗಳು ವಜಾಗೊಳ್ಳುತ್ತಿವೆ. ನಿವೇಶನಕ್ಕೆ, ಸ್ಮಶಾಸನಕ್ಕೆ ಭೂಮಿ ಕೇಳಿ ಅರ್ಜಿ ಕೊಟ್ಟರೆ ಭೂಮಿ ಇಲ್ಲವೆಂಬ ಹಿಂಬರಹ ನೀಡಲಾಗುತ್ತಿದೆ. ಆದರೆ ಶಾಸಕಿ ನಯನ ಮೋಟಮ್ಮ ತಾಲೂಕಿನಲ್ಲಿ 1ಸಾವಿರ ಎಕರೆ ಭೂಮಿ ಗುರುತಿಸಿದ್ದಾರೆಂದು ಅವರ ಹಿಂಬಾಲಕರು ಕೇಳಿ ಕೊಂಡು ತಿರುಗುತ್ತಿದ್ದಾರೆ. ಚಂದ್ರಲೋಕದಲ್ಲಿ ಭೂಮಿ ಗುರುತಿಸಿರಬೇಕು. ಅಲ್ಲಿ ನಮಗೆ ಭೂಮಿ ಬೇಡ ಮೂಡಿಗೆರೆ ತಾಲೂಕಿನಲ್ಲಿ ಯಾವ ಸ್ಥಳದಲ್ಲಿ ಭೂಮಿ ಗುರುತಿಸಲಾಗಿದೆ ಎಂದು ಮಾಹಿತಿಯನ್ನು
ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

About Author

Leave a Reply

Your email address will not be published. Required fields are marked *