लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕಟ್ಟಬೇಕಾಗಿದೆ ಕೇಡಿಲ್ಲದ ನಾಡನ್ನು. ಕಳೆದುಕೊಳ್ಳಬೇಕಾಗಿದೆ ಜಾತಿ ಮತ ಧರ್ಮಗಳೊಳಗಿರುವ ವ್ಯಸನಗಳನ್ನು…

1 min read

ಅವಿನ್ ಟಿವಿ ಸುದ್ದಿಜಾಲ ತರೀಕೆರೆ ೩0 :

*ಕಟ್ಟಬೇಕಾಗಿದೆ ಕೇಡಿಲ್ಲದ ನಾಡನ್ನು. ಕಳೆದುಕೊಳ್ಳಬೇಕಾಗಿದೆ ಜಾತಿ ಮತ ಧರ್ಮಗಳೊಳಗಿರುವ ವ್ಯಸನಗಳನ್ನು.*

ಬಸವಾದಿ ಶರಣರು ಬಯಸಿದ ಸಮ ಸಮಾಜದ ಕನಸು ನನಸಾಗಿಸುವ ಮೂಲಕ ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡಬೇಕಾಗಿದೆ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.

ತರೀಕೆರೆ ಸಮೀಪದ ದೋರನಾಳು ಗ್ರಾಮದಲ್ಲಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ
ಕದಳಿ ಮಹಿಳಾ ವೇದಿಕೆ, ವಿನಾಯಕ ಕ್ರಿಕೇಟರ್ಸ್, ಸ್ವಾಮಿ ವಿವೇಕಾನಂದ ಮಹಿಳಾ ಸಂಘ ದೋರನಾಳು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ
ವಿಶ್ವ ಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮಹಾನೀಯರ ಜಯಂತಿಗಳು ಸಾವ೯ಜನಿಕರಿಗೆ ಸಹಕಾರಿಯಾಗುವಲ್ಲಿ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ ಎಂದು ಮಾಜಿ ಶಾಸಕ ಡಿಎಸ್ ಸುರೇಶ್ ಅವರು ಅಭಿಪ್ರಾಯಪಟ್ಟರು.

ಕಾಯ೯ಕ್ರಮದಲ್ಲಿ ಉಪನ್ಯಾಸ ನೀಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ‘ ಅಂತರಂಗ ಶುದ್ಧಿ ಆಗದ ಹೊರತು ಬಹಿರಂಗ ಶುದ್ಧಿ ಆಗದು. ನಾವು ಬದಲಾಗದ ಹೊರತು ಸಮಾಜ ಬದಲಾಗದು. ಶರಣರು ಬಯಸಿದ ಕೇಡಿಲ್ಲದ ಪ್ರೀತಿಯ ಸಮಾಜವನ್ನು ಕಟ್ಟೊಣ. ನಮ್ಮ ನಮ್ಮೊಳಗಿರುವ ಅಹಂನ್ನು ಕಳೆದುಕೊಂಡು, ಜಾತಿ ಧರ್ಮ ಮತದ ಹೆಸರಿನಲ್ಲಿ ಅಂಟಿಸಿಕೊಂಡಿರುವ ವ್ಯಸನಗಳನ್ನೆಲ್ಲ ಕಳಚಿಕೊಂಡು,
ಬಸವಾದಿ ಶಿವಶರಣರು ಬಯಸಿದ ಭಾರತದ ಸಮ ಸಮಾಜದ ಆಶಯಕ್ಕೆ ಧ್ವನಿ ಆಗಬೇಕಾಗಿದೆ ಎಂದರು.

ಭಾರತದ ಸಂವಿಧಾನದಲ್ಲಿ 12ನೇ ಶತಮಾನದ ಬಸವಾದಿ ಶಿವ ಶರಣರು ಅಂದು ನುಡಿದ ದನಿಗಳಿವೆ. ಕಲ್ಯಾಣದ ಮಾರ್ಗದಲ್ಲಿ ಸಾಗಬೇಕಾಗಿದೆ.ನಮ್ಮೊಳಗಿನ ಅಹಂಕಾರ ಮತ್ತು ಶ್ರೇಷ್ಠತೆಯ ವ್ಯಸನ ಕಳೆದುಕೊಳ್ಳುವವರೆಗು ಆ ಕಲ್ಯಾಣ ಮಾರ್ಗದಲ್ಲಿ ತಲುಪಲು ಸಾಧ್ಯವಿಲ್ಲ. ನಡೆ ನುಡಿ ಒಂದಾಗದೆ ವಿವೇಕ ಬರಲು ಸಾಧ್ಯವಿಲ್ಲ ಎಂದು ಹೇಳಿದರು .

ದೋರನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಸ್ಲಂ ಖಾನ್. ಗ್ರಾಮದ ಮುಖಂಡರಾದ ದೋರನಾಳು ಪರಮೇಶ್. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ನಟರಾಜ್ ಎಸ್ ಕೊಪ್ಪಲು. ಬರಹಗಾರ ಸಾಹಿತಿ ಮನಸುಳಿ ಮೋಹನ್ ಕುಮಾರ್. ಚಿತ್ರ. ಶೇಕರಪ್ಪ. ಶಿವರಾಜ್. ಬಸವರಾಜ್. ಲೋಹಿತ್. ರಾಜೇಶ್ವರಿ. ಚೇತನ್ ಗೌಡ. ಟಿ.ಜಿ ಸದಾನಂದ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನೆಡೆದ ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ , ಸುಮಾರು 80ಕ್ಕೂ ಹೆಚ್ಚು ಜನ ತಪಾಸಣೆಗೆ ಒಳಗಾಗಿ, ಅದರಲ್ಲಿ 35 ಜನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹೆಸರನ್ನು ನೋಂದಾಯಿಸಿಕೊಂಡರು. ಈ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಶಂಕರ್ ಕಣ್ಣಿನ ಆಸ್ಪತ್ರೆಯು ಉಚಿತವಾಗಿ ನಡೆಸಿಕೊಡುತ್ತದೆ. ಹಾಗೂ ಶಿವಮೊಗ್ಗದ ರೋಟರಿ ರಕ್ತನಿಧಿ ಕೇಂದ್ರಕ್ಕೆ ಗ್ರಾಮದ ಯುವಕ ಸಂಘದ ವತಿಯಿಂದ ಇದೇ ಸಂದರ್ಭದಲ್ಲಿ ಬಸವ ಜಯಂತಿ ಅಂಗವಾಗಿ ಸುಮಾರು 17ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ, ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
••••••••••✒️
ಡಿ. ಎಂ. ಮಂಜುನಾಥಸ್ವಾಮಿ
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *